<p><strong>ತೋವಿನಕೆರೆ</strong>: ಸಮೀಪದ ಹಳ್ಳಿಗಳ ಜನರು ಜಮೀನಿನ ಬದು, ತೋಟಗಳಲ್ಲಿ ನೈಸರ್ಗಿಕವಾಗಿ ಬೆಳದ ಅಣಬೆಯನ್ನು ತಂದು ಕೆ.ಜಿಗೆ ₹175ರಂತೆ ಮಾರಾಟ ಮಾಡುತ್ತಿದ್ದಾರೆ.</p>.<p>ಕೆ.ಜಿಗೆ ₹175 ಕೊಟ್ಟು ಖರೀದಿಸಲು ಜನರು ತಯಾರಿದ್ದರೂ ಬೇಡಿಕೆಗೆ ಅನುಗುಣವಾಗಿ ಸಿಗದೆ ಇರುವುದನ್ನು ಹಂಚಿಕೊಳ್ಳುವ ಅನಿವಾರ್ಯವಿದೆ.</p>.<p>ನೈಸರ್ಗಿಕವಾಗಿ ಬೆಳೆದ ಅಣಬೆಯಿಂದ ವರ್ಷದಲ್ಲಿ ಹಲವು ಬಾರಿ ಖಾದ್ಯಗಳನ್ನು ಮಾಡಿ ಸವಿದರೆ ಜನರಿಗೆ ತೃಪ್ತಿ. ಅಣಬೆ ಸಿಗದಿದ್ದರೆ ತಾವೇ ಖುದ್ದಾಗಿ ತೋಟಗಳ ಸಾಲಿಗೆ ಹೋಗುತ್ತಾರೆ.</p>.<p>ಈ ಕಾಲದಲ್ಲಿ ಹಳ್ಳಿಗಳಲ್ಲಿ ಮಹಿಳೆಯರು ಗುಂಪು ಗುಂಪಾಗಿ ಬೆಳಿಗ್ಗೆಯೇ ಹೊಲಗಳಿಗೆ ಹೋಗಿ ಅಣಬೆ ಹುಡುಕಿ ತರುತ್ತಾರೆ. ಇದರಿಂದ ಸಾರು, ಬಿರಿಯಾನಿ, ಪಲಾವು, ಪಲ್ಯ ಸೇರಿದಂತೆ ಹಲವು ಖಾದ್ಯಗಳನ್ನು ತಯಾರಿಸುತ್ತಾರೆ.</p>.<p>‘ತೋಟದಲ್ಲಿ 30 ಕೆ.ಜಿಯಷ್ಟು ಅಣಬೆ ಈ ದಿನ ಸಿಕ್ಕಿತು. ಬೆಂಗಳೂರು, ತುಮಕೂರು, ಶಿರಾದ ಸಂಬಂಧಿಕರಿಗೆ ಕಳುಹಿಸಿಕೊಟ್ಟೆ. ಪ್ರತಿವರ್ಷ 4ರಿಂದ 5 ಬಾರಿ ಸೇವಿಸುತ್ತೇವೆ’ ಎನ್ನುತ್ತಾರೆ ಟಿ.ಎಸ್.ಲೋಕೇಶ್.</p>.<p>‘ಹೊಲ್ತಾಳು ಗ್ರಾಮದವರು 9 ಕೆ.ಜಿ ತಂದಿದ್ದರು. ಕೆ.ಜಿಗೆ ₹175ರಂತೆ ಎಲ್ಲವನ್ನು ಖರೀದಿ ಮಾಡಿ ಸಂಬಂಧಿಕರಿಗೆ ಕಳುಹಿಸಿದೆ. ರಾತ್ರಿ ಮುದ್ದೆ, ಅಣಬೆ ಸಾಂಬಾರ ಮಾಡಿಕೊಂಡು ಊಟ ಮಾಡುತ್ತೇವೆ’ ಎನ್ನುತ್ತಾರೆ ಸ್ಥಳೀಯರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೋವಿನಕೆರೆ</strong>: ಸಮೀಪದ ಹಳ್ಳಿಗಳ ಜನರು ಜಮೀನಿನ ಬದು, ತೋಟಗಳಲ್ಲಿ ನೈಸರ್ಗಿಕವಾಗಿ ಬೆಳದ ಅಣಬೆಯನ್ನು ತಂದು ಕೆ.ಜಿಗೆ ₹175ರಂತೆ ಮಾರಾಟ ಮಾಡುತ್ತಿದ್ದಾರೆ.</p>.<p>ಕೆ.ಜಿಗೆ ₹175 ಕೊಟ್ಟು ಖರೀದಿಸಲು ಜನರು ತಯಾರಿದ್ದರೂ ಬೇಡಿಕೆಗೆ ಅನುಗುಣವಾಗಿ ಸಿಗದೆ ಇರುವುದನ್ನು ಹಂಚಿಕೊಳ್ಳುವ ಅನಿವಾರ್ಯವಿದೆ.</p>.<p>ನೈಸರ್ಗಿಕವಾಗಿ ಬೆಳೆದ ಅಣಬೆಯಿಂದ ವರ್ಷದಲ್ಲಿ ಹಲವು ಬಾರಿ ಖಾದ್ಯಗಳನ್ನು ಮಾಡಿ ಸವಿದರೆ ಜನರಿಗೆ ತೃಪ್ತಿ. ಅಣಬೆ ಸಿಗದಿದ್ದರೆ ತಾವೇ ಖುದ್ದಾಗಿ ತೋಟಗಳ ಸಾಲಿಗೆ ಹೋಗುತ್ತಾರೆ.</p>.<p>ಈ ಕಾಲದಲ್ಲಿ ಹಳ್ಳಿಗಳಲ್ಲಿ ಮಹಿಳೆಯರು ಗುಂಪು ಗುಂಪಾಗಿ ಬೆಳಿಗ್ಗೆಯೇ ಹೊಲಗಳಿಗೆ ಹೋಗಿ ಅಣಬೆ ಹುಡುಕಿ ತರುತ್ತಾರೆ. ಇದರಿಂದ ಸಾರು, ಬಿರಿಯಾನಿ, ಪಲಾವು, ಪಲ್ಯ ಸೇರಿದಂತೆ ಹಲವು ಖಾದ್ಯಗಳನ್ನು ತಯಾರಿಸುತ್ತಾರೆ.</p>.<p>‘ತೋಟದಲ್ಲಿ 30 ಕೆ.ಜಿಯಷ್ಟು ಅಣಬೆ ಈ ದಿನ ಸಿಕ್ಕಿತು. ಬೆಂಗಳೂರು, ತುಮಕೂರು, ಶಿರಾದ ಸಂಬಂಧಿಕರಿಗೆ ಕಳುಹಿಸಿಕೊಟ್ಟೆ. ಪ್ರತಿವರ್ಷ 4ರಿಂದ 5 ಬಾರಿ ಸೇವಿಸುತ್ತೇವೆ’ ಎನ್ನುತ್ತಾರೆ ಟಿ.ಎಸ್.ಲೋಕೇಶ್.</p>.<p>‘ಹೊಲ್ತಾಳು ಗ್ರಾಮದವರು 9 ಕೆ.ಜಿ ತಂದಿದ್ದರು. ಕೆ.ಜಿಗೆ ₹175ರಂತೆ ಎಲ್ಲವನ್ನು ಖರೀದಿ ಮಾಡಿ ಸಂಬಂಧಿಕರಿಗೆ ಕಳುಹಿಸಿದೆ. ರಾತ್ರಿ ಮುದ್ದೆ, ಅಣಬೆ ಸಾಂಬಾರ ಮಾಡಿಕೊಂಡು ಊಟ ಮಾಡುತ್ತೇವೆ’ ಎನ್ನುತ್ತಾರೆ ಸ್ಥಳೀಯರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>