<p><strong>ಪಾವಗಡ:</strong> ರಾಜ್ಯ, ಆಂಧ್ರದ ಗಡಿ ಭಾಗದಲ್ಲಿ ಕುರುಬ ಸಮುದಾಯದ ಜನತೆ ಸಂಕಷ್ಟದಲ್ಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಜನಾಂಗದ ಜನತೆ ಅಭಿವೃದ್ಧಿ ಹೊಂದಬೇಕು ಎಂದು ಬೀರಲಿಂಗೇಶ್ವರ ದೇಗುಲ ಸಮಿತಿ ಅಧ್ಯಕ್ಷ ಆರ್.ಪಿ ಸಾಂಬಸದಾಶಿವರೆಡ್ಡಿ ಹೇಳಿದರು.</p>.<p>ತಾಲ್ಲೂಕಿನ ರಾಯಚೆರ್ಲು ಬೀರಲಿಂಗೇಶ್ವರ ದೇಗುಲದಲ್ಲಿ ಭಾನುವಾರ ನಡೆದ ಪೂಜಾ ಕಾರ್ಯಕ್ರಮ, ಗೊರವರ ಕುಣಿತ, ಪ್ರತಿಭಾ ಪುರಸ್ಕಾರ, ದಾನಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ವಿಶೇಷ ಸಂಪ್ರದಾಯ, ವಿವಿಧ ಆಚರಣೆ ಮೂಲಕ ಕುರುಬ ಸಮುದಾಯದವರು ವೈವಿಧ್ಯ ಹೊಂದಿದ್ದಾರೆ. ಗುಡಿ ಗೋಪುರಗಳ ನಿರ್ಮಾಣದ ಜೊತೆಗೆ ಗಡಿ ಭಾಗದ ಕುರುಬ ಸಮುದಾಯದವರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದ್ದು ಮುಖ್ಯವಾಹಿನಿಗೆ ಬರಬೇಕು ಎಂದರು.</p>.<p>ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಸಲಾಯಿತು. ಗೊರವರ ಕುಣಿತ ನೋಡುಗರ ಕಣ್ಮನ ಸೆಳೆಯಿತು.</p>.<p>ರಾಜ್ಯ ಹಾಗೂ ಆಂಧ್ರದ ಎಸ್ಎಸ್ಎಲ್ಸಿ, ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ 21 ವಿದ್ಯಾರ್ಥಿಗಳನ್ನು, 60 ದಾನಿಗಳನ್ನು ಅಭಿನಂದಿಸಲಾಯಿತು. ರಾಜೇಖರ್ ಒಂದು ಕೆ.ಜಿ ಬೆಳ್ಳಿಯನ್ನು ದೇಗುಲಕ್ಕೆ ಸಮರ್ಪಿಸಿದರು.</p>.<p>ಉಪಾಧ್ಯಕ್ಷ ಕೆ.ಎಸ್ ನಾಗೇಂದ್ರ, ಸಣ್ಣಲಿಂಗನ್ನ, ಜಿ.ರಾಮಾಂಜಿನೇಯುಲು, ಎ.ಅಕ್ಕಲಪ್ಪ, ಪೋತಕುಂಟ ರಮೇಶ್, ಈಶ್ವರಯ್ಯ, ಚನ್ನಕೇಶವ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾವಗಡ:</strong> ರಾಜ್ಯ, ಆಂಧ್ರದ ಗಡಿ ಭಾಗದಲ್ಲಿ ಕುರುಬ ಸಮುದಾಯದ ಜನತೆ ಸಂಕಷ್ಟದಲ್ಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಜನಾಂಗದ ಜನತೆ ಅಭಿವೃದ್ಧಿ ಹೊಂದಬೇಕು ಎಂದು ಬೀರಲಿಂಗೇಶ್ವರ ದೇಗುಲ ಸಮಿತಿ ಅಧ್ಯಕ್ಷ ಆರ್.ಪಿ ಸಾಂಬಸದಾಶಿವರೆಡ್ಡಿ ಹೇಳಿದರು.</p>.<p>ತಾಲ್ಲೂಕಿನ ರಾಯಚೆರ್ಲು ಬೀರಲಿಂಗೇಶ್ವರ ದೇಗುಲದಲ್ಲಿ ಭಾನುವಾರ ನಡೆದ ಪೂಜಾ ಕಾರ್ಯಕ್ರಮ, ಗೊರವರ ಕುಣಿತ, ಪ್ರತಿಭಾ ಪುರಸ್ಕಾರ, ದಾನಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ವಿಶೇಷ ಸಂಪ್ರದಾಯ, ವಿವಿಧ ಆಚರಣೆ ಮೂಲಕ ಕುರುಬ ಸಮುದಾಯದವರು ವೈವಿಧ್ಯ ಹೊಂದಿದ್ದಾರೆ. ಗುಡಿ ಗೋಪುರಗಳ ನಿರ್ಮಾಣದ ಜೊತೆಗೆ ಗಡಿ ಭಾಗದ ಕುರುಬ ಸಮುದಾಯದವರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದ್ದು ಮುಖ್ಯವಾಹಿನಿಗೆ ಬರಬೇಕು ಎಂದರು.</p>.<p>ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಸಲಾಯಿತು. ಗೊರವರ ಕುಣಿತ ನೋಡುಗರ ಕಣ್ಮನ ಸೆಳೆಯಿತು.</p>.<p>ರಾಜ್ಯ ಹಾಗೂ ಆಂಧ್ರದ ಎಸ್ಎಸ್ಎಲ್ಸಿ, ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ 21 ವಿದ್ಯಾರ್ಥಿಗಳನ್ನು, 60 ದಾನಿಗಳನ್ನು ಅಭಿನಂದಿಸಲಾಯಿತು. ರಾಜೇಖರ್ ಒಂದು ಕೆ.ಜಿ ಬೆಳ್ಳಿಯನ್ನು ದೇಗುಲಕ್ಕೆ ಸಮರ್ಪಿಸಿದರು.</p>.<p>ಉಪಾಧ್ಯಕ್ಷ ಕೆ.ಎಸ್ ನಾಗೇಂದ್ರ, ಸಣ್ಣಲಿಂಗನ್ನ, ಜಿ.ರಾಮಾಂಜಿನೇಯುಲು, ಎ.ಅಕ್ಕಲಪ್ಪ, ಪೋತಕುಂಟ ರಮೇಶ್, ಈಶ್ವರಯ್ಯ, ಚನ್ನಕೇಶವ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>