<figcaption>""</figcaption>.<p><strong>ತುಮಕೂರು:</strong>‘ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಂಗಳಿಗೆ ಒಮ್ಮೆಯಾದರೂ ತುಮಕೂರಿಗೆ ಬರ್ಲಪ್ಪ! ಇದರಿಂದ ರಸ್ತೆಗಳು ಸರಿ ಆಗುತ್ತವೆ’ ಹೀಗೆ ಆಸೆ ವ್ಯಕ್ತಪಡಿಸುತ್ತಿದ್ದಾರೆ ತುಮಕೂರು ನಾಗರಿಕರು.</p>.<p>ನರೇಂದ್ರ ಮೋದಿ ಜ.2ರಂದು ನಗರಕ್ಕೆ ಭೇಟಿ ನೀಡುತ್ತಿರುವ ಪ್ರಯುಕ್ತ ಗುಂಡಿ ಮತ್ತು ದೂಳುಮಯವಾಗಿದ್ದ ಬಿ.ಎಚ್.ರಸ್ತೆ ಸಂಪೂರ್ಣವಾಗಿ ಸ್ವಚ್ಛವಾಗುತ್ತಿದೆ. ಬಿ.ಎಚ್.ರಸ್ತೆ ಕೂಡುವ ಹಾದಿಗಳ ಚಹರೆಗಳು ಸಹ ಬದಲಾಗುತ್ತಿವೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/stateregional/krishi-karman-award-for-karnataka-694738.html" target="_blank">ರಾಜ್ಯಕ್ಕೆ ಕೃಷಿ ಕರ್ಮಣ್ಯ ಪ್ರಶಸ್ತಿಯ ಗರಿ</a></p>.<p>ಸ್ಮಾರ್ಟ್ಸಿಟಿ ಯೋಜನೆಯಡಿ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದ ಬಹುತೇಕ ರಸ್ತೆಗಳು ಅಧ್ವಾನವಾಗಿವೆ. ದೂಳಿನಿಂದ ನಾಗರಿಕರು ಹೈರಾಣಾಗಿದ್ದಾರೆ.</p>.<figcaption><em><strong>ಬಿ.ಎಚ್.ರಸ್ತೆಯಲ್ಲಿ ಡಾಂಬರು ಹಾಕುವ ಕಾಮಗಾರಿ</strong></em></figcaption>.<p>ಈಗ ಪ್ರಧಾನಿ ಬರುವ ಕಾರಣಕ್ಕೆ ಒಂದು ವಾರದಲ್ಲಿಯೇ ಬಿ.ಎಚ್.ರಸ್ತೆಯ ಚಿತ್ರಣ ಬದಲಾಗಿದೆ. ಏರ್ ಕಂಪ್ರೆಸ್ಸರ್ನಿಂದ ರಸ್ತೆಯ ದೂಳು ತೆಗೆಯಲಾಗಿದೆ. ಹಗಲಿರುಳು ಕೆಲಸಗಳು ನಡೆಯುತ್ತಿವೆ. ಈ ದಿಢೀರ್ ಬದಲಾವಣೆಯ ಚಿತ್ರಣ ನಾಗರಿಕರಲ್ಲಿ ಅಚ್ಚರಿ ಮತ್ತು ಸಂತೋಷಕ್ಕೆ ಕಾರಣವಾಗಿದೆ.</p>.<p>‘ಪ್ರಧಾನಿ ಪದೇ ಪದೇ ಭೇಟಿ ನೀಡುತ್ತಿದ್ದರೆ ನಗರ ಸ್ವಚ್ಛವಾಗಿರುತ್ತದೆ. ಮೋದಿ ಅವರು ಒಮ್ಮೆ ನಗರದ ಎಲ್ಲೆಡೆ ಸುತ್ತಬೇಕು. ಆಗ ಕೆಲಸಗಳು ಬೇಗ ಆಗುತ್ತವೆ. ದೂಳಿನಿಂದ ಮುಕ್ತಿ ಸಿಗುತ್ತದೆ’ ಎಂದು ನಾಗರಿಕರು ನುಡಿಯುತ್ತಿದ್ದಾರೆ.</p>.<p>ಯುವ ಸಮುದಾಯ ಸಹ ಸಾಮಾಜಿಕ ಜಾಲತಾಣಗಳಲ್ಲಿ ‘ತಿಂಗಳಿಗೊಮ್ಮೆ ಮೋದಿ ಬರಲಿ’ ಎಂದು ಬರಹಗಳನ್ನು ಪ್ರಕಟಿಸುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<p><strong>ತುಮಕೂರು:</strong>‘ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಂಗಳಿಗೆ ಒಮ್ಮೆಯಾದರೂ ತುಮಕೂರಿಗೆ ಬರ್ಲಪ್ಪ! ಇದರಿಂದ ರಸ್ತೆಗಳು ಸರಿ ಆಗುತ್ತವೆ’ ಹೀಗೆ ಆಸೆ ವ್ಯಕ್ತಪಡಿಸುತ್ತಿದ್ದಾರೆ ತುಮಕೂರು ನಾಗರಿಕರು.</p>.<p>ನರೇಂದ್ರ ಮೋದಿ ಜ.2ರಂದು ನಗರಕ್ಕೆ ಭೇಟಿ ನೀಡುತ್ತಿರುವ ಪ್ರಯುಕ್ತ ಗುಂಡಿ ಮತ್ತು ದೂಳುಮಯವಾಗಿದ್ದ ಬಿ.ಎಚ್.ರಸ್ತೆ ಸಂಪೂರ್ಣವಾಗಿ ಸ್ವಚ್ಛವಾಗುತ್ತಿದೆ. ಬಿ.ಎಚ್.ರಸ್ತೆ ಕೂಡುವ ಹಾದಿಗಳ ಚಹರೆಗಳು ಸಹ ಬದಲಾಗುತ್ತಿವೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/stateregional/krishi-karman-award-for-karnataka-694738.html" target="_blank">ರಾಜ್ಯಕ್ಕೆ ಕೃಷಿ ಕರ್ಮಣ್ಯ ಪ್ರಶಸ್ತಿಯ ಗರಿ</a></p>.<p>ಸ್ಮಾರ್ಟ್ಸಿಟಿ ಯೋಜನೆಯಡಿ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದ ಬಹುತೇಕ ರಸ್ತೆಗಳು ಅಧ್ವಾನವಾಗಿವೆ. ದೂಳಿನಿಂದ ನಾಗರಿಕರು ಹೈರಾಣಾಗಿದ್ದಾರೆ.</p>.<figcaption><em><strong>ಬಿ.ಎಚ್.ರಸ್ತೆಯಲ್ಲಿ ಡಾಂಬರು ಹಾಕುವ ಕಾಮಗಾರಿ</strong></em></figcaption>.<p>ಈಗ ಪ್ರಧಾನಿ ಬರುವ ಕಾರಣಕ್ಕೆ ಒಂದು ವಾರದಲ್ಲಿಯೇ ಬಿ.ಎಚ್.ರಸ್ತೆಯ ಚಿತ್ರಣ ಬದಲಾಗಿದೆ. ಏರ್ ಕಂಪ್ರೆಸ್ಸರ್ನಿಂದ ರಸ್ತೆಯ ದೂಳು ತೆಗೆಯಲಾಗಿದೆ. ಹಗಲಿರುಳು ಕೆಲಸಗಳು ನಡೆಯುತ್ತಿವೆ. ಈ ದಿಢೀರ್ ಬದಲಾವಣೆಯ ಚಿತ್ರಣ ನಾಗರಿಕರಲ್ಲಿ ಅಚ್ಚರಿ ಮತ್ತು ಸಂತೋಷಕ್ಕೆ ಕಾರಣವಾಗಿದೆ.</p>.<p>‘ಪ್ರಧಾನಿ ಪದೇ ಪದೇ ಭೇಟಿ ನೀಡುತ್ತಿದ್ದರೆ ನಗರ ಸ್ವಚ್ಛವಾಗಿರುತ್ತದೆ. ಮೋದಿ ಅವರು ಒಮ್ಮೆ ನಗರದ ಎಲ್ಲೆಡೆ ಸುತ್ತಬೇಕು. ಆಗ ಕೆಲಸಗಳು ಬೇಗ ಆಗುತ್ತವೆ. ದೂಳಿನಿಂದ ಮುಕ್ತಿ ಸಿಗುತ್ತದೆ’ ಎಂದು ನಾಗರಿಕರು ನುಡಿಯುತ್ತಿದ್ದಾರೆ.</p>.<p>ಯುವ ಸಮುದಾಯ ಸಹ ಸಾಮಾಜಿಕ ಜಾಲತಾಣಗಳಲ್ಲಿ ‘ತಿಂಗಳಿಗೊಮ್ಮೆ ಮೋದಿ ಬರಲಿ’ ಎಂದು ಬರಹಗಳನ್ನು ಪ್ರಕಟಿಸುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>