<p><strong>ಪಾವಗಡ/ಶಿರಾ: </strong>ಪಾವಗಡ ತಾಲ್ಲೂಕಿನ ನಿಡಗಲ್ ದುರ್ಗದ ವೀರಭಧ್ರಸ್ವಾಮಿ ದೇಗುಲದಲ್ಲಿ ಪ್ರಸಾದ ಸೇವಿಸಿ ಬಾಲಕ ಮೃತಪಟ್ಟು, 17 ಮಂದಿ ಅಸ್ವಸ್ಥರಾಗಿದ್ದಾರೆ.</p>.<p>ಆಂಧ್ರ ಪ್ರದೇಶದ ಮೋರಬಾಗಿಲಿನ ವೀರಭದ್ರ (12) ಮೃತಪಟ್ಟವನು. ಸೋಮವಾರ ಹರಿಸೇವೆ ಪ್ರಯುಕ್ತ ಅಡುಗೆ ತಯಾರಿಸಿ ಪ್ರಸಾದವಾಗಿ ಸೇವಿಸಿದ್ದರು.ಮಂಗಳವಾರ ರಾತ್ರಿ<br />ಅಸ್ವಸ್ಥರಾದರು.</p>.<p>ಅವರಲ್ಲಿ 14 ಮಂದಿ ಶಿರಾ ತಾಲ್ಲೂಕು ಬರಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು<br />ಬಳಿಕ ಶಿರಾ ಆಸ್ಪತ್ರೆಗೆ ದಾಖಲಿಸ ಲಾಗಿದ್ದರು. ಅದರಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ವೀರಭದ್ರ ಬುಧವಾರ ಮೃತಪಟ್ಟಿದ್ದಾನೆ.</p>.<p>‘ದೇವಸ್ಥಾನಕ್ಕೆ ಹೋಗುವಾಗ ಕುಡಿಯಲು ನೀರು ತೆಗೆದುಕೊಂಡು ಹೋಗಿದ್ದೆವು. ಅಲ್ಲಿದ್ದ ಸಂಪ್ನ ನೀರನ್ನು ಅಡುಗೆ ತಯಾರಿಸಲು ಬಳಸಿದೆವು. ಊರಿನಿಂದ ತೆಗೆದುಕೊಂಡು ಹೋಗಿದ್ದ ನೀರು ಮುಗಿದ ಮೇಲೆ ಸಂಪಿನಲ್ಲಿದ್ದ ನೀರನ್ನು ಕೆಲವರು ಕುಡಿದಿದ್ದರು’ ಎಂದು ಗಂಗಾಧರ್ ತಿಳಿಸಿದರು.</p>.<p>ದೇಗುಲದ ಬಳಿ ಅಡುಗೆಗೆ ಬಳಸಿದ ನೀರಿನಿಂದ ಸಮಸ್ಯೆಯಾಗಿರ ಬಹುದು ಎಂದು ಅಸ್ವಸ್ಥಗೊಂಡಿರುವವರು ಅನುಮಾನ ವ್ಯಕ್ತಪಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾವಗಡ/ಶಿರಾ: </strong>ಪಾವಗಡ ತಾಲ್ಲೂಕಿನ ನಿಡಗಲ್ ದುರ್ಗದ ವೀರಭಧ್ರಸ್ವಾಮಿ ದೇಗುಲದಲ್ಲಿ ಪ್ರಸಾದ ಸೇವಿಸಿ ಬಾಲಕ ಮೃತಪಟ್ಟು, 17 ಮಂದಿ ಅಸ್ವಸ್ಥರಾಗಿದ್ದಾರೆ.</p>.<p>ಆಂಧ್ರ ಪ್ರದೇಶದ ಮೋರಬಾಗಿಲಿನ ವೀರಭದ್ರ (12) ಮೃತಪಟ್ಟವನು. ಸೋಮವಾರ ಹರಿಸೇವೆ ಪ್ರಯುಕ್ತ ಅಡುಗೆ ತಯಾರಿಸಿ ಪ್ರಸಾದವಾಗಿ ಸೇವಿಸಿದ್ದರು.ಮಂಗಳವಾರ ರಾತ್ರಿ<br />ಅಸ್ವಸ್ಥರಾದರು.</p>.<p>ಅವರಲ್ಲಿ 14 ಮಂದಿ ಶಿರಾ ತಾಲ್ಲೂಕು ಬರಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು<br />ಬಳಿಕ ಶಿರಾ ಆಸ್ಪತ್ರೆಗೆ ದಾಖಲಿಸ ಲಾಗಿದ್ದರು. ಅದರಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ವೀರಭದ್ರ ಬುಧವಾರ ಮೃತಪಟ್ಟಿದ್ದಾನೆ.</p>.<p>‘ದೇವಸ್ಥಾನಕ್ಕೆ ಹೋಗುವಾಗ ಕುಡಿಯಲು ನೀರು ತೆಗೆದುಕೊಂಡು ಹೋಗಿದ್ದೆವು. ಅಲ್ಲಿದ್ದ ಸಂಪ್ನ ನೀರನ್ನು ಅಡುಗೆ ತಯಾರಿಸಲು ಬಳಸಿದೆವು. ಊರಿನಿಂದ ತೆಗೆದುಕೊಂಡು ಹೋಗಿದ್ದ ನೀರು ಮುಗಿದ ಮೇಲೆ ಸಂಪಿನಲ್ಲಿದ್ದ ನೀರನ್ನು ಕೆಲವರು ಕುಡಿದಿದ್ದರು’ ಎಂದು ಗಂಗಾಧರ್ ತಿಳಿಸಿದರು.</p>.<p>ದೇಗುಲದ ಬಳಿ ಅಡುಗೆಗೆ ಬಳಸಿದ ನೀರಿನಿಂದ ಸಮಸ್ಯೆಯಾಗಿರ ಬಹುದು ಎಂದು ಅಸ್ವಸ್ಥಗೊಂಡಿರುವವರು ಅನುಮಾನ ವ್ಯಕ್ತಪಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>