ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಆರ್. ಉಗ್ರೇಶ್ ಮಾತನಾಡಿ, ನಗರಸಭೆ ವಾರ್ಡ್ ನಂ. 2 ಮತ್ತು 3ರಲ್ಲಿ ಉದ್ಯೋಗಸ್ಥರೇ ಹೆಚ್ಚು ಮಂದಿ ವಾಸವಾಗಿದ್ದಾರೆ. ಆದರೂ, ಮೂಲ ಸೌಕರ್ಯವಿಲ್ಲ. ಆದ್ದರಿಂದ ಶಾಸಕರು ಹೆಚ್ಚಿನ ಅನುದಾನವನ್ನು ಇಲ್ಲಿಗೆ ನೀಡಬೇಕು. ನಗರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳು ಇಲ್ಲದೆ ಅಧಿಕಾರಿಗಳು ಯಾರ ಮಾತು ಕೇಳುತ್ತಿಲ್ಲ. ಅಭಿವೃದ್ಧಿ ಕುಂಠಿತವಾಗಿದ್ದು ಶಾಸಕರು ಈ ಬಗ್ಗೆ ಎಚ್ಚರವಹಿಸಬೇಕು ಎಂದರು.