<p><strong>ತಿಪಟೂರು:</strong> ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ ಕೃಷಿ ಸಾಹಿತ್ಯ ಸಮ್ಮೇಳನದ ಆಯೋಜಿಸುವ ಬಗ್ಗೆ ಬುಧವಾರ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿತು.</p>.<p>ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಸವರಾಜಪ್ಪ ಮಾತನಾಡಿ, ಯುವ ಪೀಳಿಗೆ ಕೃಷಿಯಿಂದ ವಿಮುಖವಾಗುತ್ತಿರುವ ಅಂಶ ಹಾಗೂ ರೈತರ ಸಮಸ್ಯೆಗಳಿಗೆ ಚಿಂತಿಸುವ, ಪರಿಹಾರ ಹುಡುಕುವ ನಿಟ್ಟಿನೊಂದಿಗೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.</p>.<p>ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ ಮಾತನಾಡಿ, ರೈತರಿಗಾಗಿ ಶಿಬಿರ, ಕಾರ್ಯಗಾರಗಳನ್ನು ಆಯೋಜಿಸಿ, ಸಂಪನ್ಮೂಲ ವ್ಯಕ್ತಿಗಳಿಂದ ರೈತರಿಗೆ ಪಹಣಿ, ಚಕ್ಕಬಂಧಿ, ಸರ್ವೆ ಮತ್ತಿತ್ತರ ವಿಷಯಗಳ ಬಗ್ಗೆ ಸಮಗ್ರ ಮಾಹಿತಿ ಹಂಚಿಕೆ ಕಾರ್ಯಕ್ರಮ ರೂಪಿಸುವ ಆಯಾಮವಾಗಿದೆ ಎಂದರು.</p>.<p>ರೈತ ಸಂಘದ ದೇವರಾಜ್ ತೀಮ್ಮಾಲಾಪುರ ಮಾತನಾಡಿ, ರೈತ ಕುಟುಂಬಗಳಿಗೆ ಹೆಣ್ಣು ಕೊಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಕೃಷಿಕ ಕುಟುಂಬಗಳ ಮಕ್ಕಳ ಮದುವೆ ಜಾಗತಿಕ ಸಮಸ್ಯೆಗಳಲ್ಲಿ ಸಿಲುಕಿದೆ. ಇದರ ಬಗ್ಗೆ ವಿಶೇಷ ಗಮನಹರಿಸಬೇಕಿದೆ ಎಂದರು.</p>.<p>ಸಭೆಯಲ್ಲಿ ತೆಂಗು, ಕೊಬ್ಬರಿಗೆ ಪ್ರಾಧಾನ್ಯ, ತೆಂಗಿನ ಜೊತೆ ಬೇರೆ ಬೇರೆ ಬೆಳೆಗಳನ್ನು ಬೆಳೆಯುವುದು, ರೈತರಿಗೆ ಸರ್ಕಾರದ ಸವಲತ್ತು, ಸಹಾಯಧನಗಳ ಬಗ್ಗೆ ಮಾಹಿತಿ ಹಂಚಿಕೆ, ಬೆಳೆಗಳಿಗೆ ತಗಲುವ ರೋಗ, ಮಾರುಕಟ್ಟೆ ವ್ಯವಸ್ಥೆ, ರಾಶಿ ಪೂಜೆ, ಹೊನ್ನಾರು ಮುಂತಾದವುಗಳ ಬಗ್ಗೆ ಚರ್ಚಿಸಲಾಯಿತು.</p>.<p>ಸಭೆಯಲ್ಲಿ ಜಯನಂದಯ್ಯ, ಜಯಶರ್ಮಾ, ಸಿರಿಗಂಧ ಗುರು, ಚನ್ನಬಸವಣ್ಣ, ಶ್ರೀಕಾಂತ್ಕೆಳಹಟ್ಟಿ, ಕಸಾಪ ಕಾರ್ಯದರ್ಶಿ ಮಂಜಪ್ಪ, ಮಡೆನೂರು ಸೋಮಶೇಖರ್, ಬಸವರಾಜಪ್ಪ, ಕುಮಾರಸ್ವಾಮಿ, ದಿಬ್ಬನಹಳ್ಳಿ ಶ್ಯಾಮ್ಸುಂದರ್, ಭಾಸ್ಕರ್, ರಾಜಮ್ಮ, ಸುರೇಶ್, ಪ್ರಶಾಂತ್, ರೇಣುಕಾರಾಧ್ಯ, ಬೀರಸಂದ್ರ ಮೋಹನ್, ಗೋವಿಂದರಾಜು, ಸಿದ್ದಾಪುರ ದೇವಾನಂದ್ ಹಾಗೂ ಪದಾಧಿಕಾರಿಗಳು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿಪಟೂರು:</strong> ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ ಕೃಷಿ ಸಾಹಿತ್ಯ ಸಮ್ಮೇಳನದ ಆಯೋಜಿಸುವ ಬಗ್ಗೆ ಬುಧವಾರ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿತು.</p>.<p>ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಸವರಾಜಪ್ಪ ಮಾತನಾಡಿ, ಯುವ ಪೀಳಿಗೆ ಕೃಷಿಯಿಂದ ವಿಮುಖವಾಗುತ್ತಿರುವ ಅಂಶ ಹಾಗೂ ರೈತರ ಸಮಸ್ಯೆಗಳಿಗೆ ಚಿಂತಿಸುವ, ಪರಿಹಾರ ಹುಡುಕುವ ನಿಟ್ಟಿನೊಂದಿಗೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.</p>.<p>ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ ಮಾತನಾಡಿ, ರೈತರಿಗಾಗಿ ಶಿಬಿರ, ಕಾರ್ಯಗಾರಗಳನ್ನು ಆಯೋಜಿಸಿ, ಸಂಪನ್ಮೂಲ ವ್ಯಕ್ತಿಗಳಿಂದ ರೈತರಿಗೆ ಪಹಣಿ, ಚಕ್ಕಬಂಧಿ, ಸರ್ವೆ ಮತ್ತಿತ್ತರ ವಿಷಯಗಳ ಬಗ್ಗೆ ಸಮಗ್ರ ಮಾಹಿತಿ ಹಂಚಿಕೆ ಕಾರ್ಯಕ್ರಮ ರೂಪಿಸುವ ಆಯಾಮವಾಗಿದೆ ಎಂದರು.</p>.<p>ರೈತ ಸಂಘದ ದೇವರಾಜ್ ತೀಮ್ಮಾಲಾಪುರ ಮಾತನಾಡಿ, ರೈತ ಕುಟುಂಬಗಳಿಗೆ ಹೆಣ್ಣು ಕೊಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಕೃಷಿಕ ಕುಟುಂಬಗಳ ಮಕ್ಕಳ ಮದುವೆ ಜಾಗತಿಕ ಸಮಸ್ಯೆಗಳಲ್ಲಿ ಸಿಲುಕಿದೆ. ಇದರ ಬಗ್ಗೆ ವಿಶೇಷ ಗಮನಹರಿಸಬೇಕಿದೆ ಎಂದರು.</p>.<p>ಸಭೆಯಲ್ಲಿ ತೆಂಗು, ಕೊಬ್ಬರಿಗೆ ಪ್ರಾಧಾನ್ಯ, ತೆಂಗಿನ ಜೊತೆ ಬೇರೆ ಬೇರೆ ಬೆಳೆಗಳನ್ನು ಬೆಳೆಯುವುದು, ರೈತರಿಗೆ ಸರ್ಕಾರದ ಸವಲತ್ತು, ಸಹಾಯಧನಗಳ ಬಗ್ಗೆ ಮಾಹಿತಿ ಹಂಚಿಕೆ, ಬೆಳೆಗಳಿಗೆ ತಗಲುವ ರೋಗ, ಮಾರುಕಟ್ಟೆ ವ್ಯವಸ್ಥೆ, ರಾಶಿ ಪೂಜೆ, ಹೊನ್ನಾರು ಮುಂತಾದವುಗಳ ಬಗ್ಗೆ ಚರ್ಚಿಸಲಾಯಿತು.</p>.<p>ಸಭೆಯಲ್ಲಿ ಜಯನಂದಯ್ಯ, ಜಯಶರ್ಮಾ, ಸಿರಿಗಂಧ ಗುರು, ಚನ್ನಬಸವಣ್ಣ, ಶ್ರೀಕಾಂತ್ಕೆಳಹಟ್ಟಿ, ಕಸಾಪ ಕಾರ್ಯದರ್ಶಿ ಮಂಜಪ್ಪ, ಮಡೆನೂರು ಸೋಮಶೇಖರ್, ಬಸವರಾಜಪ್ಪ, ಕುಮಾರಸ್ವಾಮಿ, ದಿಬ್ಬನಹಳ್ಳಿ ಶ್ಯಾಮ್ಸುಂದರ್, ಭಾಸ್ಕರ್, ರಾಜಮ್ಮ, ಸುರೇಶ್, ಪ್ರಶಾಂತ್, ರೇಣುಕಾರಾಧ್ಯ, ಬೀರಸಂದ್ರ ಮೋಹನ್, ಗೋವಿಂದರಾಜು, ಸಿದ್ದಾಪುರ ದೇವಾನಂದ್ ಹಾಗೂ ಪದಾಧಿಕಾರಿಗಳು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>