‘ಬೆಂಗಳೂರಿನಲ್ಲಿ ಕೊರೊನಾ ಭೀತಿ ಹೆಚ್ಚಿದೆ. ನಮಗೆ ನೀಡಿರುವ ಕಾಲೇಜುಗಳು ಮೆಜೆಸ್ಟಿಕ್ನಿಂದ ಒಂದೊಂದು ದಿಕ್ಕಿನಲ್ಲಿ ಇವೆ. ಊಟ, ನೀರಿನ ವ್ಯವಸ್ಥೆಯೂ ಸರಿ ಇರುವುದಿಲ್ಲ. ತುಮಕೂರು ಜಿಲ್ಲಾ ಕೇಂದ್ರದಲ್ಲಿಯೂ ಉತ್ತಮ ಕಾಲೇಜುಗಳಿವೆ. ಇಲ್ಲಿಯೇ ಮೌಲ್ಯಮಾಪನಕ್ಕೆ ಅವಕಾಶ ಕಲ್ಪಿಸಿದರೆ ಮಾನಸಿಕ ಒತ್ತಡವಿಲ್ಲದೆ ಕೆಲಸ ಮಾಡುತ್ತೇವೆ. ಒತ್ತಾಯದಿಂದ ಕರೆಸಿದರೆ ಮೌಲ್ಯಮಾಪನದ ಮೇಲೆ ಪರಿಣಾಮ ಸಹ ಬೀರಲಿದೆ’ ಎಂದು ಉಪನ್ಯಾಸಕರೊಬ್ಬರು ತಿಳಿಸಿದರು.