<p><strong>ತೋವಿನಕೆರೆ:</strong> ನೇಗಿಲ ಸಿದ್ಧ ರೈತ ಉತ್ಪಾದಕ ಕಂಪನಿ ಮೂಲಕ ಮುಂದಿನ ಋತುವಿನಲ್ಲಿ 300 ಟನ್ ಹುಣಸೆ ಹಣ್ಣನ್ನು ಬೆಳೆಗಾರರಿಂದ ನೇರವಾಗಿ ಖರೀದಿ ಮಾಡಲಾಗುವುದು ಎಂದು ಇಶಾ ಫೌಂಡೇಷನ್ನ ರೈತ ಉತ್ಪದಕ ಕಂಪನಿ ಸಂಯೋಜಕಿ ರಮಾ ಪ್ರಿಯಾ ಹೇಳಿದರು.</p>.<p>ಗ್ರಾಮದ ಚಂದ್ರನಾಥಸ್ವಾಮಿ ದೇವಾಲಯದ ಅವರಣದಲ್ಲಿ ಗುರುವಾರ ನಡೆದ ಇಶಾ ಫೌಂಡೇಷನ್ ಮಾರ್ಗದರ್ಶನದ ನೇಗಿಲ ಸಿದ್ಧ ರೈತ ಉತ್ಪಾದಕ ಕಂಪನಿ ಸಭೆಯಲ್ಲಿ ಅವರು ಮಾತನಾಡಿದರು.</p>.<p>ಕಳೆದ ವರ್ಷದಿಂದ ಈ ಭಾಗದಲ್ಲಿನ ಹುಣಸೆ ಬೆಳೆಗೆ ಮಾರುಕಟ್ಟೆ ಅವಕಾಶ ಸೇರಿದಂತೆ ವಿವಿಧ ಆಯಾಮಗಳಲ್ಲಿ ಸಮೀಕ್ಷೆ ಮಾಡಿ ವರದಿ ಸಿದ್ಧಪಡಿಸಿದ್ದೇವೆ. ಈ ಋತುವಿನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಖರೀದಿಸಿ ಬೇರೆಡೆ ಕಳುಹಿಸಿದ್ದೇವೆ. ಅವರಿಂದ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಸರಬರಾಜು ಮಾಡುವಂತೆ ಬೇಡಿಕೆ ಬಂದಿದೆ ಎಂದರು.</p>.<p>ಶೇಂಗಾದಿಂದ ಎಣ್ಣೆ ತೆಗೆದು ಬೆಂಗಳೂರಿನಲ್ಲಿ ಮಳಿಗೆ ಹಾಕಿ ಮಾರಾಟ ಮಾಡಿದ್ದೆವು. ಎಣ್ಣೆ ಬಗ್ಗೆ ಉತ್ತಮ ಪ್ರಶಂಸೆ ಬಂದಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆಯೂ ಚಿಂತಿಸುತ್ತೇವೆ. ಕೊಬ್ಬರಿ, ತೆಂಗು, ರಾಗಿ, ಕೊರಲೆ ಖರೀದಿಗೆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.</p>.<p>ಮಾ.ಇಂದುಬಾ, ಜಿಲ್ಲಾ ಸಂಯೋಜಕ ವಿಶ್ವನಾಥ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಮ್ಮ, ನಿರ್ದೇಶಕರಾದ ದೊಡ್ಡಯ್ಯ, ಮರೇನಾಯ್ಕನಹಳ್ಳಿ ರಮೇಶ್, ಕುರಂಕೋಟೆ ಭಾನುಕುಮಾರ್, ನೇಗಲಾಳದ ಶೈಲಜಾ, ಕಲಾ, ತೋವಿನಕೆರೆ ಟಿ.ಡಿ. ಪ್ರಸನ್ನಕುಮಾರ್<br> ರಾಜೇಶ್, ಅಭಿಷೇಕ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೋವಿನಕೆರೆ:</strong> ನೇಗಿಲ ಸಿದ್ಧ ರೈತ ಉತ್ಪಾದಕ ಕಂಪನಿ ಮೂಲಕ ಮುಂದಿನ ಋತುವಿನಲ್ಲಿ 300 ಟನ್ ಹುಣಸೆ ಹಣ್ಣನ್ನು ಬೆಳೆಗಾರರಿಂದ ನೇರವಾಗಿ ಖರೀದಿ ಮಾಡಲಾಗುವುದು ಎಂದು ಇಶಾ ಫೌಂಡೇಷನ್ನ ರೈತ ಉತ್ಪದಕ ಕಂಪನಿ ಸಂಯೋಜಕಿ ರಮಾ ಪ್ರಿಯಾ ಹೇಳಿದರು.</p>.<p>ಗ್ರಾಮದ ಚಂದ್ರನಾಥಸ್ವಾಮಿ ದೇವಾಲಯದ ಅವರಣದಲ್ಲಿ ಗುರುವಾರ ನಡೆದ ಇಶಾ ಫೌಂಡೇಷನ್ ಮಾರ್ಗದರ್ಶನದ ನೇಗಿಲ ಸಿದ್ಧ ರೈತ ಉತ್ಪಾದಕ ಕಂಪನಿ ಸಭೆಯಲ್ಲಿ ಅವರು ಮಾತನಾಡಿದರು.</p>.<p>ಕಳೆದ ವರ್ಷದಿಂದ ಈ ಭಾಗದಲ್ಲಿನ ಹುಣಸೆ ಬೆಳೆಗೆ ಮಾರುಕಟ್ಟೆ ಅವಕಾಶ ಸೇರಿದಂತೆ ವಿವಿಧ ಆಯಾಮಗಳಲ್ಲಿ ಸಮೀಕ್ಷೆ ಮಾಡಿ ವರದಿ ಸಿದ್ಧಪಡಿಸಿದ್ದೇವೆ. ಈ ಋತುವಿನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಖರೀದಿಸಿ ಬೇರೆಡೆ ಕಳುಹಿಸಿದ್ದೇವೆ. ಅವರಿಂದ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಸರಬರಾಜು ಮಾಡುವಂತೆ ಬೇಡಿಕೆ ಬಂದಿದೆ ಎಂದರು.</p>.<p>ಶೇಂಗಾದಿಂದ ಎಣ್ಣೆ ತೆಗೆದು ಬೆಂಗಳೂರಿನಲ್ಲಿ ಮಳಿಗೆ ಹಾಕಿ ಮಾರಾಟ ಮಾಡಿದ್ದೆವು. ಎಣ್ಣೆ ಬಗ್ಗೆ ಉತ್ತಮ ಪ್ರಶಂಸೆ ಬಂದಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆಯೂ ಚಿಂತಿಸುತ್ತೇವೆ. ಕೊಬ್ಬರಿ, ತೆಂಗು, ರಾಗಿ, ಕೊರಲೆ ಖರೀದಿಗೆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.</p>.<p>ಮಾ.ಇಂದುಬಾ, ಜಿಲ್ಲಾ ಸಂಯೋಜಕ ವಿಶ್ವನಾಥ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಮ್ಮ, ನಿರ್ದೇಶಕರಾದ ದೊಡ್ಡಯ್ಯ, ಮರೇನಾಯ್ಕನಹಳ್ಳಿ ರಮೇಶ್, ಕುರಂಕೋಟೆ ಭಾನುಕುಮಾರ್, ನೇಗಲಾಳದ ಶೈಲಜಾ, ಕಲಾ, ತೋವಿನಕೆರೆ ಟಿ.ಡಿ. ಪ್ರಸನ್ನಕುಮಾರ್<br> ರಾಜೇಶ್, ಅಭಿಷೇಕ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>