<p><strong>ತಿಪಟೂರು</strong>: ನಗರದ ಕಂಚಾಘಟ್ಟ ಬಡಾವಣೆಗೆ ಹೊಂದಿಕೊಂಡ ಅಮಾನಿಕೆರೆಗೆ ಸೇರುವ ಒಂದು ಕಿ.ಮೀ ರಾಜಕಾಲುವೆ ಒತ್ತುವರಿಯನ್ನು ಸಣ್ಣ ನೀರಾವರಿ ಇಲಾಖೆಯಿಂದ ಡಿವೈಎಸ್ಪಿ ನೇತೃತ್ವದಲ್ಲಿ ಶುಕ್ರವಾರ ತೆರವುಗೊಳಿಸಲಾಯಿತು.</p>.<p>ಸಣ್ಣ ನೀರಾವರಿ ಇಲಾಖೆಯಿಂದ ಹಿಂದೆ ಎರಡು ಬಾರಿ ತೆರವುಗೊಳಿಸಲು ಪ್ರಯತ್ನಿಸಿದ್ದಾಗ ಸ್ಥಳೀಯರಾದ ಯೋಗೀಶ್ ಟಿ.ಆರ್. ಜೆಎಂಎಫ್ಸಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿ ತಡೆಯ್ಞಾಜೆ ತಂದಿದ್ದರು. ನ್ಯಾಯಾಲಯ ತಡೆಯ್ಞಾಜೆ ರದ್ದುಪಡಿಸಿದ ನಂತರ ಇಲಾಖೆ ಅಧಿಕಾರಿಗಳು ರಾಜಕಾಲುವೆ ತೆರವಿಗೆ ಮುಂದಾಗಿದ್ದಾರೆ.</p>.<p>ಒಂದು ಕಿ.ಮೀ ಉದ್ದ 40ರಿಂದ 50 ಅಡಿ ಅಗಲ, ಏಳೆಂಟು ಅಡಿ ಆಳದ ರಾಜಕಾಲುವೆ ತೆರವಿಗೆ ಸರ್ಕಾರದಿಂದ ₹1.50 ಕೋಟಿ ಅನುದಾನ ಮಂಜೂರಾಗಿದೆ.</p>.<p>ಭೂಮಾಪನ ಇಲಾಖೆ, ನಗರಸಭೆಯ ಪೌರಯುಕ್ತ, ಕಂದಾಯ ಇಲಾಖೆ, ಬೆಸ್ಕಾಂ ಇಲಾಖೆ ಸಹಯೋಗದಲ್ಲಿ ಪೊಲೀಸ್, ಸಶಸ್ತ ಮೀಸಲು ಪಡೆಯ ಸರ್ಪಗಾವಲಿನಲ್ಲಿ ರಾಜಕಾಲುವೆ ತೆರವಿಗೆ ಮುಂದಾದರು.</p>.<p>ಸ್ಥಳದಲ್ಲಿ ಡಿವೈಎಸ್ಪಿ ವಿನಾಯಕ ಶೆಟಗೇರಿ, ಪೌರಯುಕ್ತ ವಿಶ್ವೇಶ್ವರ ಬದರಗೆಡೆ, ಸಣ್ಣ ನೀರಾವರಿ ಇಲಾಖೆ ಎಇಇ ದೊಡ್ಡಯ್ಯ, ಬೆಸ್ಕಾಂ ಎಇಇ ಮನೋಹರ್ ಸ್ಥಳಕ್ಕೆ ಭೇಟಿ ನೀಡಿದ್ದರು.</p>.<p><strong>ಕಟ್ಟಡಗಳು ತೆರವು </strong></p><p>ಈ ರಾಜಕಾಲುವೆ ತಿಪಟೂರಿನ ಮಾದಿಹಳ್ಳಿಯಿಂದ ನಗರದ ಅಮಾನಿಕೆರೆಯವರೆಗೂ ಒಟ್ಟು ಎರಡು ಕಿಲೋ ಮೀಟರ್ ಉದ್ದವಿದ್ದು 30ರಿಂದ 40 ಅಡಿ ಅಗಲವಿದೆ. ಈ ರಾಜಕಾಲುವೆಗೆ ಬಡಾವಣೆಗಳು ಹಾಗೂ ನಿವೇಶನ ಮಾಡುವವರು ಮಣ್ಣು ತುಂಬಿ ಸಮತಟ್ಟು ಮಾಡಿಕೊಂಡು ಅದರ ತುದಿವರೆಗೂ ಸೈಟ್ಗಳನ್ನು ವಿಂಗಡಿಸಿಕೊಂಡಿದ್ದರು. ಈ ಸೈಟ್ಗಳಿಗೆ ಬರಲು ದಾರಿಯಾಗಿ ಈ ರಾಜಕಾಲುವೆಯನ್ನೇ ತೋರಿಸಲಾಗಿತ್ತು. ಈಗ ಈ ಬಡಾವಣೆಗಳ ನಿವೇಶನಗಳಿಗೆ ತೆರಳಲು ದಾರಿ ಇಲ್ಲವಾಗಿದೆ. ಈ ಬಡಾವಣೆಗಳಲ್ಲಿ ನಿವೇಶನ ಖರೀದಿಸಿದವರು ತಮ್ಮ ನಿವೇಶನಗಳಿಗೆ ತೆರಳಲು ಹೊಸದಾಗಿ ದಾರಿ ಮಾಡಿಕೊಳ್ಳಬೇಕಿದೆ. ಕೆಲವೆಡೆ ಕಟ್ಟಡ ನಿರ್ಮಾಣ ಮಾಡಿಕೊಂಡಿದ್ದು ಅದನ್ನೂ ಈಗ ತೆರೆವುಗೊಳಿಸಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿಪಟೂರು</strong>: ನಗರದ ಕಂಚಾಘಟ್ಟ ಬಡಾವಣೆಗೆ ಹೊಂದಿಕೊಂಡ ಅಮಾನಿಕೆರೆಗೆ ಸೇರುವ ಒಂದು ಕಿ.ಮೀ ರಾಜಕಾಲುವೆ ಒತ್ತುವರಿಯನ್ನು ಸಣ್ಣ ನೀರಾವರಿ ಇಲಾಖೆಯಿಂದ ಡಿವೈಎಸ್ಪಿ ನೇತೃತ್ವದಲ್ಲಿ ಶುಕ್ರವಾರ ತೆರವುಗೊಳಿಸಲಾಯಿತು.</p>.<p>ಸಣ್ಣ ನೀರಾವರಿ ಇಲಾಖೆಯಿಂದ ಹಿಂದೆ ಎರಡು ಬಾರಿ ತೆರವುಗೊಳಿಸಲು ಪ್ರಯತ್ನಿಸಿದ್ದಾಗ ಸ್ಥಳೀಯರಾದ ಯೋಗೀಶ್ ಟಿ.ಆರ್. ಜೆಎಂಎಫ್ಸಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿ ತಡೆಯ್ಞಾಜೆ ತಂದಿದ್ದರು. ನ್ಯಾಯಾಲಯ ತಡೆಯ್ಞಾಜೆ ರದ್ದುಪಡಿಸಿದ ನಂತರ ಇಲಾಖೆ ಅಧಿಕಾರಿಗಳು ರಾಜಕಾಲುವೆ ತೆರವಿಗೆ ಮುಂದಾಗಿದ್ದಾರೆ.</p>.<p>ಒಂದು ಕಿ.ಮೀ ಉದ್ದ 40ರಿಂದ 50 ಅಡಿ ಅಗಲ, ಏಳೆಂಟು ಅಡಿ ಆಳದ ರಾಜಕಾಲುವೆ ತೆರವಿಗೆ ಸರ್ಕಾರದಿಂದ ₹1.50 ಕೋಟಿ ಅನುದಾನ ಮಂಜೂರಾಗಿದೆ.</p>.<p>ಭೂಮಾಪನ ಇಲಾಖೆ, ನಗರಸಭೆಯ ಪೌರಯುಕ್ತ, ಕಂದಾಯ ಇಲಾಖೆ, ಬೆಸ್ಕಾಂ ಇಲಾಖೆ ಸಹಯೋಗದಲ್ಲಿ ಪೊಲೀಸ್, ಸಶಸ್ತ ಮೀಸಲು ಪಡೆಯ ಸರ್ಪಗಾವಲಿನಲ್ಲಿ ರಾಜಕಾಲುವೆ ತೆರವಿಗೆ ಮುಂದಾದರು.</p>.<p>ಸ್ಥಳದಲ್ಲಿ ಡಿವೈಎಸ್ಪಿ ವಿನಾಯಕ ಶೆಟಗೇರಿ, ಪೌರಯುಕ್ತ ವಿಶ್ವೇಶ್ವರ ಬದರಗೆಡೆ, ಸಣ್ಣ ನೀರಾವರಿ ಇಲಾಖೆ ಎಇಇ ದೊಡ್ಡಯ್ಯ, ಬೆಸ್ಕಾಂ ಎಇಇ ಮನೋಹರ್ ಸ್ಥಳಕ್ಕೆ ಭೇಟಿ ನೀಡಿದ್ದರು.</p>.<p><strong>ಕಟ್ಟಡಗಳು ತೆರವು </strong></p><p>ಈ ರಾಜಕಾಲುವೆ ತಿಪಟೂರಿನ ಮಾದಿಹಳ್ಳಿಯಿಂದ ನಗರದ ಅಮಾನಿಕೆರೆಯವರೆಗೂ ಒಟ್ಟು ಎರಡು ಕಿಲೋ ಮೀಟರ್ ಉದ್ದವಿದ್ದು 30ರಿಂದ 40 ಅಡಿ ಅಗಲವಿದೆ. ಈ ರಾಜಕಾಲುವೆಗೆ ಬಡಾವಣೆಗಳು ಹಾಗೂ ನಿವೇಶನ ಮಾಡುವವರು ಮಣ್ಣು ತುಂಬಿ ಸಮತಟ್ಟು ಮಾಡಿಕೊಂಡು ಅದರ ತುದಿವರೆಗೂ ಸೈಟ್ಗಳನ್ನು ವಿಂಗಡಿಸಿಕೊಂಡಿದ್ದರು. ಈ ಸೈಟ್ಗಳಿಗೆ ಬರಲು ದಾರಿಯಾಗಿ ಈ ರಾಜಕಾಲುವೆಯನ್ನೇ ತೋರಿಸಲಾಗಿತ್ತು. ಈಗ ಈ ಬಡಾವಣೆಗಳ ನಿವೇಶನಗಳಿಗೆ ತೆರಳಲು ದಾರಿ ಇಲ್ಲವಾಗಿದೆ. ಈ ಬಡಾವಣೆಗಳಲ್ಲಿ ನಿವೇಶನ ಖರೀದಿಸಿದವರು ತಮ್ಮ ನಿವೇಶನಗಳಿಗೆ ತೆರಳಲು ಹೊಸದಾಗಿ ದಾರಿ ಮಾಡಿಕೊಳ್ಳಬೇಕಿದೆ. ಕೆಲವೆಡೆ ಕಟ್ಟಡ ನಿರ್ಮಾಣ ಮಾಡಿಕೊಂಡಿದ್ದು ಅದನ್ನೂ ಈಗ ತೆರೆವುಗೊಳಿಸಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>