ಮುಂಜಾವಿನ ಸಹರಿಯ ಘೋಷಣೆಗಳು ಸಹ ಮಸೀದಿಯ ಧ್ವನಿವರ್ಧಕಗಳಲ್ಲಿ ಹೃಸ್ವವಾಗಿಯೇ ಮೊಳಗಿದವು. ಅಕ್ಕಪಕ್ಕದ ಬಂಧು–ಬಾಂಧವರನ್ನು ಮುಂಜಾನೆ ಎಬ್ಬಿಸಿ, ಲವಲವಿಕೆಯಿಂದ ಖಾದ್ಯಗಳನ್ನು ತಯಾರಿಸುವ ಪರಿಪಾಠಕ್ಕೆ ಕೊಂಚ ಬ್ರೇಕ್ ಬಿದ್ದಂತೆ ಕಾಣುತ್ತಿತ್ತು. ಸಹರಿಯ ವೇಳೆ ಮಸೀದಿಗಳಲ್ಲಿ ಮೊಳಗುತ್ತಿದ್ದ ನಾಥ್ಗಳೂ (ಪ್ರವಾದಿಯ ಸ್ತುತಿಗೀತೆ) ಈ ಬಾರಿ ಕೇಳಿಸುತ್ತಿಲ್ಲ.