2017-18ನೇ ಸಾಲಿನ ಬಸವ ವಸತಿ ಯೋಜನೆಯಲ್ಲಿ ಮತ್ತಿಹಳ್ಳಿಯ ಗಂಗಮ್ಮ ಅವರಿಗೆ (ಫಲಾನುಭವಿ ಸಂಖ್ಯೆ 578322) ವಸತಿ ನಿವೇಶನವನ್ನು ಆಯ್ಕೆ ಮಾಡಿದ್ದು, ಅದರ ಅಡಿಪಾಯ, ಗೋಡೆ, ಚಾವಣಿಯ ಎಲ್ಲ ಫೊಟೊಗಳನ್ನು ಉಪಯೋಗಿಸಿಕೊಂಡು ಮತ್ತಿಹಳ್ಳಿ ಗ್ರಾಮದ ಲಕ್ಷ್ಮಿದೇವಮ್ಮ (ಫಲಾನುಭವಿ ಸಂಖ್ಯೆ 561376) ಅವರಿಗೆ 2016-17ನೇ ಸಾಲಿನ ಡಾ. ಅಂಬೇಡ್ಕರ್ ನಿವಾಸ ಯೋಜನೆಯಲ್ಲಿ ಯಾವುದೇ ತಳಪಾಯ, ಮನೆಯನ್ನು ಕಟ್ಟದೇ ಕಾವೇರಿ ಗ್ರಾಮೀಣ ಬ್ಯಾಂಕ್ಗೆ ಎರಡು ಹಂತಗಳಲ್ಲಿ ₹1.12 ಲಕ್ಷ ಸಂದಾಯ ಮಾಡಲಾಗಿದೆ. ಒಂದೇ ಮನೆಯ ಫೋಟೊಗಳನ್ನು ಬಳಸಿಕೊಂಡು ಮತ್ತೊಂದು ಮನೆಗೆ ಅಕ್ರಮವಾಗಿ ಹಣ ಸಂದಾಯ ಮಾಡಲಾಗಿದೆ.