ಅನೇಕರ ಶ್ರಮದಿಂದ ವಸತಿ ಶಾಲೆ ಮಂಜೂರಾಗಿದೆ. ಭೂಮಿ ಪೂಜೆ ಸಹ ನಡೆದಿದೆ. ತಾಲ್ಲೂಕಿನ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಇಲ್ಲಿ ರೂಪಗೊಳ್ಳಲಿದೆ. ದೇವಸ್ಥಾನ ಕ್ಕೆ ಹೊಂದಿಕೊಂಡಂತೆ ನೂರಾರು ಎಕರೆ ಸರ್ಕಾರಿ ಜಮೀನು ಇದೆ. ಅಲ್ಲಿ ಪರಿಸರ ರಕ್ಷಣೆ ಮಾಡಲಿ. ಪರಿಶಿಷ್ಟ ಜಾತಿ ಮತ್ತು ಪಂಗಡದ ಮಕ್ಕಳು ವಸತಿ ಶಾಲೆಯಲ್ಲಿ ಕಲಿಯುವುದರಿಂದ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆ ಆಗುವುದಿಲ್ಲ.