ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ದುಡಕಂಡು ತಿನ್ನೋಕ ಬಂದಿದ್ವಿ ರೀ..

ಗುರುವಾರ ಮುಂಜಾನೆ ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಹತ್ತಿರದ ಬಾಲೆನಹಳ್ಳಿ ಗೇಟ್ ಸಮೀಪ ಅಪಘಾತ
Last Updated 25 ಆಗಸ್ಟ್ 2022, 2:37 IST
ಅಕ್ಷರ ಗಾತ್ರ

ತುಮಕೂರು: ಏನ್ ಮಾಡಾಣ್ರೀ ದುಡಕಂಡು ತಿನ್ನೋಕೆ ಅಂತ ಬಂದಿದ್ವಿ ರೀ... ಹೀಗೆ ಆಗುತ್ತೆ ಅಂತ ಗೊತ್ತಾಗಿಲ್ಲ ರೀ..

ಗುರುವಾರ ಮುಂಜಾನೆ ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಹತ್ತಿರದ ಬಾಲೆನಹಳ್ಳಿ ಗೇಟ್ ಸಮೀಪ ನಡೆದ ಅಪಘಾತದಲ್ಲಿ ಗಾಯಗೊಂಡ ಮೌನಿಕ ಅವರು ತಮ್ಮ ನೋವು ತೋಡಿಕೊಂಡರು.

ನಮ್ಮ ಯಜಮಾನ ಎಲ್ಲಿದಾನೆ ರೀ.. ನೀವು ಹೇಳೋದು ಸುಳ್ಳಾ, ಕರೆವೋ ನನ್ನ ಯಜಮಾನನ್ನ ಚೆನ್ನಾಗಿ ನೋಡ್ಕೊಳ್ಳಿ ಎಂದು ಆಸ್ಪತ್ರೆಯ ಸಿಬ್ಬಂದಿಗೆ ಹೇಳುವಾಗ ಅವರು ಕಣ್ಣೀರಾದರು.

ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿ ನವಿಲುಕೊರೆ ಗ್ರಾಮದ ಮೌನಿಕ ಕುಟುಂಬ ಸಮೇತ ಬೆಂಗಳೂರಿನ ಕಡೆಗೆ ದುಡಿಯಲು ಹೊರಟಿದ್ದರು. ಇಬ್ಬರು ಮಕ್ಕಳು, ಗಂಡ ಸೇರಿದಂತೆ ಮೌನಿಕ ಅವರು ಗಾಯಗೊಂಡಿದ್ದಾರೆ.

ಎಲ್ಲ ಬೇರೆ ಬೇರೆ ಊರುಗಳಿಂದ ಬಂದಿದ್ದರು. ಟೆಂಪೋದಲ್ಲಿ ಸುಮಾರು 30 ಜ‌ನರಿದ್ದರು ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT