ಗುರುವಾರ ಮುಂಜಾನೆ ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಹತ್ತಿರದ ಬಾಲೆನಹಳ್ಳಿ ಗೇಟ್ ಸಮೀಪ ನಡೆದ ಅಪಘಾತದಲ್ಲಿ ಗಾಯಗೊಂಡ ಮೌನಿಕ ಅವರು ತಮ್ಮ ನೋವು ತೋಡಿಕೊಂಡರು.
ನಮ್ಮ ಯಜಮಾನ ಎಲ್ಲಿದಾನೆ ರೀ.. ನೀವು ಹೇಳೋದು ಸುಳ್ಳಾ, ಕರೆವೋ ನನ್ನ ಯಜಮಾನನ್ನ ಚೆನ್ನಾಗಿ ನೋಡ್ಕೊಳ್ಳಿ ಎಂದು ಆಸ್ಪತ್ರೆಯ ಸಿಬ್ಬಂದಿಗೆ ಹೇಳುವಾಗ ಅವರು ಕಣ್ಣೀರಾದರು.
ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿ ನವಿಲುಕೊರೆ ಗ್ರಾಮದ ಮೌನಿಕ ಕುಟುಂಬ ಸಮೇತ ಬೆಂಗಳೂರಿನ ಕಡೆಗೆ ದುಡಿಯಲು ಹೊರಟಿದ್ದರು. ಇಬ್ಬರು ಮಕ್ಕಳು, ಗಂಡ ಸೇರಿದಂತೆ ಮೌನಿಕ ಅವರು ಗಾಯಗೊಂಡಿದ್ದಾರೆ.
ಎಲ್ಲ ಬೇರೆ ಬೇರೆ ಊರುಗಳಿಂದ ಬಂದಿದ್ದರು. ಟೆಂಪೋದಲ್ಲಿ ಸುಮಾರು 30 ಜನರಿದ್ದರು ಎಂದು ತಿಳಿದು ಬಂದಿದೆ.