<p><strong>ತುಮಕೂರು:</strong> ‘ನವ್ಯ ಕಾಲದ ಸಾಹಿತ್ಯ ವಿಮರ್ಶಕರು ಸಂವೇದನೆಯನ್ನು ದೂರ ತಳ್ಳಿ, ಪಾಂಡಿತ್ಯವನ್ನೇ ದೊಡ್ಡದು ಮಾಡಿದರು. ಆದರೆ ನನ್ನ ಪ್ರಕಾರ ಸಂವೇದನೆಯೇದೊಡ್ಡದು’ ಎಂದು ಇಂಟೆಲ್ ದಕ್ಷಿಣ ಏಷಿಯಾ ಸಲಹೆಗಾರ, ವಿಮರ್ಶಕ ಎಸ್.ಆರ್.ವಿಜಯಶಂಕರ ಅಭಿಪ್ರಾಯಪಟ್ಟರು.</p>.<p>ತುಮಕೂರು ವಿಶ್ವವಿದ್ಯಾನಿಲಯ ಪ್ರಸಾರಾಂಗ, ಬೆಸುಗೆ ಟ್ರಸ್ಟ್ ಸಹಯೋಗದಲ್ಲಿ ವಿ.ವಿ.ಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ನಿತ್ಯಾನಂದ ಬಿ ಶೆಟ್ಟಿ ಅವರ ‘ಮಾರ್ಗಾನ್ವೇಷಣೆ’– ಸಾಹಿತ್ಯ ಸಂಶೋಧನೆಯ ರೀತಿ–ನೀತಿ ಕೃತಿಯನ್ನು ಬಿಡುಗಡೆಮಾಡಿ ಮಾತನಾಡಿದರು.</p>.<p>ಮಾರ್ಗಾನ್ವೇಷಣೆ ಕೃತಿಯು ಪಾಂಡಿತ್ಯವನ್ನು ಒಳಗೊಂಡಿದೆ. ಪ್ರಾಮಾಣಿಕವಾಗಿ ಅಧ್ಯಾಪನ, ಸಂಶೋಧನೆಯಲ್ಲಿ ತೊಡಗಿಸಿಕೊಂಡವರಿಗೆ ಮಾರ್ಗದರ್ಶನ ಮಾಡುತ್ತದೆ. ವಿದ್ಯಾರ್ಥಿಗಳನ್ನು ಸಂಶೋಧನೆಗೆ ಅಣಿಗೊಳಿಸಿ, ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತೆ ಮಾಡದಿದ್ದರೆ ಇಂತಹ ಪುಸ್ತಕ ರಚಿಸಲು ಸಾಧ್ಯವಿಲ್ಲ. ಅಂತಹ ಕೆಲಸವನ್ನು ನಿತ್ಯಾನಂದ ಶೆಟ್ಟಿ ಅವರು ಮಾಡಿದ್ದಾರೆ.ಇದೊಂದು ಸಾಂದರ್ಭಿಕವಾದ ವಿದ್ವತ್ ಕೃತಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.</p>.<p>ವಿಮರ್ಶೆ, ಪಾಂಡಿತ್ಯ, ಸಂವೇದನೆ ಇದ್ದರೆ ಸಂಶೋಧನೆಗೆ ಒಂದು ಅರ್ಥ ಬರುತ್ತದೆ. ಸತ್ಯ ಶೋಧನೆಗಿಂತ ಚಿಂತನೆ, ವಿಚಾರದ ಕಡೆಗೆ ಸಂಶೋಧನೆಗಳು ಸಾಗಬೇಕು. ಆಗ ಅದಕ್ಕೊಂದು ಮಹತ್ವ ರೂಪುಗೊಳ್ಳುತ್ತದೆ. ಸಂಶೋಧನೆ ಒಂದು ಹಂತಕ್ಕೆ ನಿಲ್ಲುತ್ತದೆ. ಆದರೆ ಅನ್ವೇಷಣೆ ನಿರಂತರವಾಗಿರುತ್ತದೆ. ಈ ಕೃತಿಯೂ ಅದನ್ನೇ ಧ್ವನಿಸುತ್ತದೆ ಎಂದು ಹೇಳಿದರು.</p>.<p>ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ‘ಗುಣಾತ್ಮಕ ಸಂಶೋಧನೆಗಳು ಹೆಚ್ಚಾಗಬೇಕು. ಹೊಸ ಚಿಂತನೆಯ ಅಲೆಗಳು ಮೂಡಿಬರಬೇಕು. ಜ್ಞಾನ ಪಡೆಯಲು, ನಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಅನ್ವೇಷಣೆಗಳು ಬಹಳ ಮುಖ್ಯವಾಗುತ್ತವೆ’ ಎಂದು ತಿಳಿಸಿದರು.</p>.<p>ಸಮಾಜ ನಿರಂತರವಾಗಿ ಬದಲಾವಣೆ ಕಾಣುತ್ತಿರುತ್ತದೆ. ಅದಕ್ಕೆ ಪೂರಕವಾಗಿ ನಮ್ಮ ಚಿಂತನಾಲಹರಿ ಸಾಗಬೇಕು. ಬದಲಾವಣೆಗೆ ತಕ್ಕಂತೆ ಜ್ಞಾನದ ಮಟ್ಟವನ್ನು ವೃದ್ಧಿಸಿಕೊಂಡು ಸ್ಪಂದಿಸುವ ಕೆಲಸವಾಗಬೇಕು ಎಂದು ಸಲಹೆ ಮಾಡಿದರು.</p>.<p>ಕವಿ ರಘುನಂದನ, ‘ಗ್ರೀಕ್ ಕಾಲದಿಂದ ಆರಂಭಿಸಿ ಇಂದಿನವರೆಗಿನ ಎಲ್ಲ ಮುಖ್ಯ ವಿದ್ಯಮಾನಗಳನ್ನು ವಿಮರ್ಶಿಸುವ ಪುಸ್ತಕ ಬರೆದು ನಿತ್ಯಾನಂದ ಶೆಟ್ಟಿ ಅವರು ಕನ್ನಡ ಸಂಶೋಧನಾ ಲೋಕಕ್ಕೆ ಬಹಳ ದೊಡ್ಡ ಕೊಡುಗೆ ಕೊಟ್ಟಿದ್ದಾರೆ’ ಎಂದು ಅಭಿಪ್ರಾಯಪಟ್ಟರು.</p>.<p>ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ‘ವಿಶ್ವವಿದ್ಯಾಲಯಗಳು ಏನು ಮಾಡಬೇಕಾಗಿದೆ ಎಂಬ ಪ್ರಶ್ನೆಗೆ ಮಾರ್ಗಾನ್ವೇಷಣೆ ಒಂದು ಉತ್ತರವಾಗಿದೆ’ ಎಂದರು.</p>.<p>ಮಾರ್ಗಾನ್ವೇಷಣೆ ಲೇಖಕ ನಿತ್ಯಾನಂದ ಬಿ.ಶೆಟ್ಟಿ, ಕುಲಸಚಿವ ಪ್ರೊ.ಕೆ.ಶಿವಚಿತ್ತಪ್ಪ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ‘ನವ್ಯ ಕಾಲದ ಸಾಹಿತ್ಯ ವಿಮರ್ಶಕರು ಸಂವೇದನೆಯನ್ನು ದೂರ ತಳ್ಳಿ, ಪಾಂಡಿತ್ಯವನ್ನೇ ದೊಡ್ಡದು ಮಾಡಿದರು. ಆದರೆ ನನ್ನ ಪ್ರಕಾರ ಸಂವೇದನೆಯೇದೊಡ್ಡದು’ ಎಂದು ಇಂಟೆಲ್ ದಕ್ಷಿಣ ಏಷಿಯಾ ಸಲಹೆಗಾರ, ವಿಮರ್ಶಕ ಎಸ್.ಆರ್.ವಿಜಯಶಂಕರ ಅಭಿಪ್ರಾಯಪಟ್ಟರು.</p>.<p>ತುಮಕೂರು ವಿಶ್ವವಿದ್ಯಾನಿಲಯ ಪ್ರಸಾರಾಂಗ, ಬೆಸುಗೆ ಟ್ರಸ್ಟ್ ಸಹಯೋಗದಲ್ಲಿ ವಿ.ವಿ.ಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ನಿತ್ಯಾನಂದ ಬಿ ಶೆಟ್ಟಿ ಅವರ ‘ಮಾರ್ಗಾನ್ವೇಷಣೆ’– ಸಾಹಿತ್ಯ ಸಂಶೋಧನೆಯ ರೀತಿ–ನೀತಿ ಕೃತಿಯನ್ನು ಬಿಡುಗಡೆಮಾಡಿ ಮಾತನಾಡಿದರು.</p>.<p>ಮಾರ್ಗಾನ್ವೇಷಣೆ ಕೃತಿಯು ಪಾಂಡಿತ್ಯವನ್ನು ಒಳಗೊಂಡಿದೆ. ಪ್ರಾಮಾಣಿಕವಾಗಿ ಅಧ್ಯಾಪನ, ಸಂಶೋಧನೆಯಲ್ಲಿ ತೊಡಗಿಸಿಕೊಂಡವರಿಗೆ ಮಾರ್ಗದರ್ಶನ ಮಾಡುತ್ತದೆ. ವಿದ್ಯಾರ್ಥಿಗಳನ್ನು ಸಂಶೋಧನೆಗೆ ಅಣಿಗೊಳಿಸಿ, ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತೆ ಮಾಡದಿದ್ದರೆ ಇಂತಹ ಪುಸ್ತಕ ರಚಿಸಲು ಸಾಧ್ಯವಿಲ್ಲ. ಅಂತಹ ಕೆಲಸವನ್ನು ನಿತ್ಯಾನಂದ ಶೆಟ್ಟಿ ಅವರು ಮಾಡಿದ್ದಾರೆ.ಇದೊಂದು ಸಾಂದರ್ಭಿಕವಾದ ವಿದ್ವತ್ ಕೃತಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.</p>.<p>ವಿಮರ್ಶೆ, ಪಾಂಡಿತ್ಯ, ಸಂವೇದನೆ ಇದ್ದರೆ ಸಂಶೋಧನೆಗೆ ಒಂದು ಅರ್ಥ ಬರುತ್ತದೆ. ಸತ್ಯ ಶೋಧನೆಗಿಂತ ಚಿಂತನೆ, ವಿಚಾರದ ಕಡೆಗೆ ಸಂಶೋಧನೆಗಳು ಸಾಗಬೇಕು. ಆಗ ಅದಕ್ಕೊಂದು ಮಹತ್ವ ರೂಪುಗೊಳ್ಳುತ್ತದೆ. ಸಂಶೋಧನೆ ಒಂದು ಹಂತಕ್ಕೆ ನಿಲ್ಲುತ್ತದೆ. ಆದರೆ ಅನ್ವೇಷಣೆ ನಿರಂತರವಾಗಿರುತ್ತದೆ. ಈ ಕೃತಿಯೂ ಅದನ್ನೇ ಧ್ವನಿಸುತ್ತದೆ ಎಂದು ಹೇಳಿದರು.</p>.<p>ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ‘ಗುಣಾತ್ಮಕ ಸಂಶೋಧನೆಗಳು ಹೆಚ್ಚಾಗಬೇಕು. ಹೊಸ ಚಿಂತನೆಯ ಅಲೆಗಳು ಮೂಡಿಬರಬೇಕು. ಜ್ಞಾನ ಪಡೆಯಲು, ನಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಅನ್ವೇಷಣೆಗಳು ಬಹಳ ಮುಖ್ಯವಾಗುತ್ತವೆ’ ಎಂದು ತಿಳಿಸಿದರು.</p>.<p>ಸಮಾಜ ನಿರಂತರವಾಗಿ ಬದಲಾವಣೆ ಕಾಣುತ್ತಿರುತ್ತದೆ. ಅದಕ್ಕೆ ಪೂರಕವಾಗಿ ನಮ್ಮ ಚಿಂತನಾಲಹರಿ ಸಾಗಬೇಕು. ಬದಲಾವಣೆಗೆ ತಕ್ಕಂತೆ ಜ್ಞಾನದ ಮಟ್ಟವನ್ನು ವೃದ್ಧಿಸಿಕೊಂಡು ಸ್ಪಂದಿಸುವ ಕೆಲಸವಾಗಬೇಕು ಎಂದು ಸಲಹೆ ಮಾಡಿದರು.</p>.<p>ಕವಿ ರಘುನಂದನ, ‘ಗ್ರೀಕ್ ಕಾಲದಿಂದ ಆರಂಭಿಸಿ ಇಂದಿನವರೆಗಿನ ಎಲ್ಲ ಮುಖ್ಯ ವಿದ್ಯಮಾನಗಳನ್ನು ವಿಮರ್ಶಿಸುವ ಪುಸ್ತಕ ಬರೆದು ನಿತ್ಯಾನಂದ ಶೆಟ್ಟಿ ಅವರು ಕನ್ನಡ ಸಂಶೋಧನಾ ಲೋಕಕ್ಕೆ ಬಹಳ ದೊಡ್ಡ ಕೊಡುಗೆ ಕೊಟ್ಟಿದ್ದಾರೆ’ ಎಂದು ಅಭಿಪ್ರಾಯಪಟ್ಟರು.</p>.<p>ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ‘ವಿಶ್ವವಿದ್ಯಾಲಯಗಳು ಏನು ಮಾಡಬೇಕಾಗಿದೆ ಎಂಬ ಪ್ರಶ್ನೆಗೆ ಮಾರ್ಗಾನ್ವೇಷಣೆ ಒಂದು ಉತ್ತರವಾಗಿದೆ’ ಎಂದರು.</p>.<p>ಮಾರ್ಗಾನ್ವೇಷಣೆ ಲೇಖಕ ನಿತ್ಯಾನಂದ ಬಿ.ಶೆಟ್ಟಿ, ಕುಲಸಚಿವ ಪ್ರೊ.ಕೆ.ಶಿವಚಿತ್ತಪ್ಪ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>