<p><strong>ತುಮಕೂರು</strong>: ಸಾಲ ತೀರಿಸಲಾಗದೆ ಅದಕ್ಕೆ ಬದಲಾಗಿ ಮಾರಾಟ ಮಾಡಿದ್ದ ತುಮಕೂರಿನ ಬಾಲಕಿಯನ್ನು ಆಂಧ್ರಪ್ರದೇಶದ ಹಿಂದೂಪುರದಲ್ಲಿ ನಗರ ಠಾಣೆಯ ಪೊಲೀಸರು ರಕ್ಷಿಸಿ, ನಗರಕ್ಕೆ ಕರೆ ತಂದಿದ್ದಾರೆ.</p>.<p>ನಗರದ ಹೊರವಲಯ ದಿಬ್ಬೂರಿನ ಚೌಡಮ್ಮ ಎಂಬುವರ 11 ವರ್ಷದ ಪುತ್ರಿಯನ್ನು ರಕ್ಷಿಸಿ ಕರೆತಂದಿರುವ ಪೊಲೀಸರು ನಗರದ ಬಾಲ ಮಂದಿರದ ಸುಪರ್ದಿಗೆ ಒಪ್ಪಿಸಿದ್ದಾರೆ.</p>.<p>ಆಂಧ್ರಪ್ರದೇಶದ ಹಿಂದೂಪುರದಲ್ಲಿ ನೆಲೆಸಿರುವ ಸಹೋದರಿ ಸುಜಾತ ಮನೆಗೆ ಚೌಡಮ್ಮ ಕೆಲ ದಿನಗಳ ಹಿಂದೆ ಮಗಳನ್ನು ಕಳಿಸಿದ್ದರು. ಶ್ರೀರಾಮುಲು ಎಂಬುವರಿಗೆ ಕೊಡಬೇಕಿದ್ದ ₹35 ಸಾವಿರ ಸಾಲದ ಬದಲಾಗಿ ಸಹೋದರಿಯ ಮಗಳನ್ನು ಸುಜಾತಾ ಮಾರಾಟ ಮಾಡಿದ್ದರು.</p>.<p>ಬಾಲಕಿಯನ್ನು ಕರೆದೊಯ್ದ ಶ್ರೀರಾಮುಲು ಬಾತುಕೋಳಿ ಮೇಯಿಸಲು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಈ ವಿಷಯ ತಿಳಿದ ಚೌಡಮ್ಮ ಹಿಂದೂಪುರಕ್ಕೆ ತೆರಳಿ ಮಗಳನ್ನು ತನ್ನೊಂದಿಗೆ ಕಳುಹಿಸುವಂತೆ ಬೇಡಿಕೊಂಡಿದ್ದರು. ಆದರೆ, ಶ್ರೀರಾಮುಲು ಒಪ್ಪಿರಲಿಲ್ಲ. ಬಾಲಕಿಯನ್ನು ತಾನು ಖರೀದಿಸಿದ್ದು, ಸಾಲದ ಹಣ ಕೊಟ್ಟು ಕರೆದುಕೊಂಡು ಹೋಗುವಂತೆ ಹೇಳಿದ್ದರು ಎನ್ನಲಾಗಿದೆ. </p>.<p>‘ನನ್ನ ಮಗಳನ್ನು ಹಿಂದೂಪುರದ ಶ್ರೀರಾಮುಲು ಎಂಬುವರು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ. ಒತ್ತೆಯಾಳಾಗಿ ದುಡಿಯುತ್ತಿರುವ ತನ್ನ ಮಗಳನ್ನು ರಕ್ಷಿಸುವಂತೆ’ ಹಿಂದೂಪುರದಿಂದ ಈಚೆಗೆ ಮರಳಿದ್ದ ಚೌಡಮ್ಮ, ತುಮಕೂರು ಜಿಲ್ಲಾ ಕಾರ್ಮಿಕ ಅಧಿಕಾರಿ ತೇಜಾವತಿ ಅವರಿಗೆ ಮನವಿ ಸಲ್ಲಿಸಿದ್ದರು.</p>.<p>ಕೂಡಲೇ ಕಾರ್ಮಿಕರ ಅಧಿಕಾರಿ ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಬಾಲಕಿಯನ್ನು ರಕ್ಷಿಸಿ, ಕರೆತರುವ ಜವಾಬ್ದಾರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯು ನಗರ ಠಾಣೆ ಪೊಲೀಸರಿಗೆ ವಹಿಸಿದ್ದರು.</p>.<p>ದೂರು ಬಂದ ಒಂದು ವಾರದಲ್ಲೇ ಬಾಲಕಿಯನ್ನು ಪೊಲೀಸರು ರಕ್ಷಿಸಿ ಕರೆ ತಂದಿದ್ದಾರೆ ಎಂದು ಕಾರ್ಮಿಕ ಅಧಿಕಾರಿ ತೇಜಾವತಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ಸಾಲ ತೀರಿಸಲಾಗದೆ ಅದಕ್ಕೆ ಬದಲಾಗಿ ಮಾರಾಟ ಮಾಡಿದ್ದ ತುಮಕೂರಿನ ಬಾಲಕಿಯನ್ನು ಆಂಧ್ರಪ್ರದೇಶದ ಹಿಂದೂಪುರದಲ್ಲಿ ನಗರ ಠಾಣೆಯ ಪೊಲೀಸರು ರಕ್ಷಿಸಿ, ನಗರಕ್ಕೆ ಕರೆ ತಂದಿದ್ದಾರೆ.</p>.<p>ನಗರದ ಹೊರವಲಯ ದಿಬ್ಬೂರಿನ ಚೌಡಮ್ಮ ಎಂಬುವರ 11 ವರ್ಷದ ಪುತ್ರಿಯನ್ನು ರಕ್ಷಿಸಿ ಕರೆತಂದಿರುವ ಪೊಲೀಸರು ನಗರದ ಬಾಲ ಮಂದಿರದ ಸುಪರ್ದಿಗೆ ಒಪ್ಪಿಸಿದ್ದಾರೆ.</p>.<p>ಆಂಧ್ರಪ್ರದೇಶದ ಹಿಂದೂಪುರದಲ್ಲಿ ನೆಲೆಸಿರುವ ಸಹೋದರಿ ಸುಜಾತ ಮನೆಗೆ ಚೌಡಮ್ಮ ಕೆಲ ದಿನಗಳ ಹಿಂದೆ ಮಗಳನ್ನು ಕಳಿಸಿದ್ದರು. ಶ್ರೀರಾಮುಲು ಎಂಬುವರಿಗೆ ಕೊಡಬೇಕಿದ್ದ ₹35 ಸಾವಿರ ಸಾಲದ ಬದಲಾಗಿ ಸಹೋದರಿಯ ಮಗಳನ್ನು ಸುಜಾತಾ ಮಾರಾಟ ಮಾಡಿದ್ದರು.</p>.<p>ಬಾಲಕಿಯನ್ನು ಕರೆದೊಯ್ದ ಶ್ರೀರಾಮುಲು ಬಾತುಕೋಳಿ ಮೇಯಿಸಲು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಈ ವಿಷಯ ತಿಳಿದ ಚೌಡಮ್ಮ ಹಿಂದೂಪುರಕ್ಕೆ ತೆರಳಿ ಮಗಳನ್ನು ತನ್ನೊಂದಿಗೆ ಕಳುಹಿಸುವಂತೆ ಬೇಡಿಕೊಂಡಿದ್ದರು. ಆದರೆ, ಶ್ರೀರಾಮುಲು ಒಪ್ಪಿರಲಿಲ್ಲ. ಬಾಲಕಿಯನ್ನು ತಾನು ಖರೀದಿಸಿದ್ದು, ಸಾಲದ ಹಣ ಕೊಟ್ಟು ಕರೆದುಕೊಂಡು ಹೋಗುವಂತೆ ಹೇಳಿದ್ದರು ಎನ್ನಲಾಗಿದೆ. </p>.<p>‘ನನ್ನ ಮಗಳನ್ನು ಹಿಂದೂಪುರದ ಶ್ರೀರಾಮುಲು ಎಂಬುವರು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ. ಒತ್ತೆಯಾಳಾಗಿ ದುಡಿಯುತ್ತಿರುವ ತನ್ನ ಮಗಳನ್ನು ರಕ್ಷಿಸುವಂತೆ’ ಹಿಂದೂಪುರದಿಂದ ಈಚೆಗೆ ಮರಳಿದ್ದ ಚೌಡಮ್ಮ, ತುಮಕೂರು ಜಿಲ್ಲಾ ಕಾರ್ಮಿಕ ಅಧಿಕಾರಿ ತೇಜಾವತಿ ಅವರಿಗೆ ಮನವಿ ಸಲ್ಲಿಸಿದ್ದರು.</p>.<p>ಕೂಡಲೇ ಕಾರ್ಮಿಕರ ಅಧಿಕಾರಿ ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಬಾಲಕಿಯನ್ನು ರಕ್ಷಿಸಿ, ಕರೆತರುವ ಜವಾಬ್ದಾರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯು ನಗರ ಠಾಣೆ ಪೊಲೀಸರಿಗೆ ವಹಿಸಿದ್ದರು.</p>.<p>ದೂರು ಬಂದ ಒಂದು ವಾರದಲ್ಲೇ ಬಾಲಕಿಯನ್ನು ಪೊಲೀಸರು ರಕ್ಷಿಸಿ ಕರೆ ತಂದಿದ್ದಾರೆ ಎಂದು ಕಾರ್ಮಿಕ ಅಧಿಕಾರಿ ತೇಜಾವತಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>