ಹಿರಿಯ ರಾಜಕೀಯ ಮುಖಂಡರೊಬ್ಬರು ಪ್ರಿತಿಕ್ರಿಯಿಸಿ, ತಾಲ್ಲೂಕಿನಲ್ಲಿ ತಮ್ಮಣ್ಣಗೌಡ, ಅಂದಾನಯ್ಯ, ಹುಚ್ಚಮಾಸ್ತಿಗೌಡ, ಡಿ.ನಾಗರಾಜಯ್ಯ ಮತ್ತು ಮುದ್ದಹನುಮೆಗೌಡ ಅಧಿಕಾರ ಆವಧಿಯಲ್ಲಿ ಜನಪ್ರತಿನಿಧಿಗಳು ಜನಮನ ಗೆದ್ದು, ಜನಪ್ರಿಯ ರಾಜಕಾರಣಿಗಳು ಎನಿಸಿಕೊಂಡಿದ್ದರು. ವೈ.ಕೆ.ರಾಮಯ್ಯ ನಿರಂತರ ಅಭಿವೃದ್ಧಿ ಕಾರ್ಯಗಳಿಂದ ಜನಪ್ರಿಯತೆಗೆ ಬದಲಾಗಿ ಜನಪರ ರಾಜಕೀಯಕ್ಕೆ ಮುನ್ನುಡಿ ಬರೆದರು. ಇತ್ತೀಚೆಗೆ ತಾಲ್ಲೂಕಿನಲ್ಲಿ ಹಣಪರ ರಾಜಕೀಯ (ಫೈನಾನ್ಸ್ ಪಾಲಿಟಿಕ್ಸ್) ಹೆಚ್ಚು ಗಮನ ಸೆಳೆಯುತ್ತಿದೆ’ ಎಂದರು.