ವಿಜ್ಞಾನ ಪರಿಷತ್ ಅಧ್ಯಕ್ಷ ಸಿ.ಯತಿರಾಜು, ‘ದೇಶದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ದೇಶ, ವಿದೇಶಗಳ ಗಮನ ಸೆಳೆದಿದೆ. ರೈತರ ಇಂತಹ ಪರಿಸ್ಥಿತಿಯನ್ನು ಮೊದಲೇ ಗ್ರಹಿಸಿದ್ದ ಪ್ರೊ.ನಂಜುಂಡಸ್ವಾಮಿ, ಗ್ಯಾಟ್ ಒಪ್ಪಂದದ ವಿರುದ್ಧ ದೇಶ, ವಿದೇಶದಲ್ಲಿ ರೈತರನ್ನು ಸಂಘಟಿಸುವ ಕೆಲಸ ಮಾಡಿದ್ದರು. ಕೃಷಿ ಕಾರ್ಪೋರೇಟ್ನಿಂದ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ಮನಗಂಡು, ಎಚ್ಚರಿಸಿದ್ದರು. ಅವರ ಹೋರಾಟದ ದಾರಿಯಲ್ಲೇ ನಾವು ಸಾಗಿಸಬೇಕಿದೆ’ ಎಂದು ಹೇಳಿದರು.