<p><strong>ಗುಬ್ಬಿ:</strong> ತಾಲ್ಲೂಕಿನಲ್ಲಿ ಈ ವರ್ಷ ಉತ್ತಮ ಮಳೆಯಾಗುತ್ತಿರುವುದರಿಂದ ಸಣ್ಣಪುಟ್ಟ ಕೆರೆ-ಕಟ್ಟೆಗಳು ತುಂಬಿರುವ ಜೊತೆಗೆ ದನಕರು, ಮೇಕೆ, ಕುರಿಗಳ ಮೇವಿನ ಬರ ನೀಗುತ್ತಿದೆ.</p>.<p>ಎಲ್ಲೆಡೆಯೂ ಹಸಿರು ಚಿಗುರಿ ಮೇಯಲು ಅನುಕೂಲವಾಗಿದೆ. ಹಳ್ಳ ಕೊಳ್ಳಗಳಲ್ಲಿ ನೀರು ನಿಂತಿರುವುದರಿಂದ ತಕ್ಷಣಕ್ಕೆ ರೈತರಿಗೆ ಯಾವುದೇ ತೊಂದರೆ ಇಲ್ಲವಾಗಿದೆ.</p>.<p>ಹೊಲ, ತೋಟ, ಬದು ಹಾಗೂ ಗದ್ದೆ ಬಯಲುಗಳಲ್ಲಿ ಹಸಿರು ಚಿಗುರಿರುವ ಜೊತೆಗೆ ರೈತರು ರಾಸುಗಳ ಮೇವನ್ನು ಬಿತ್ತನೆ ಮಾಡಿಕೊಂಡಿರುವುದರಿಂದ ಮೇವಿನ ಬರ ನೀಗಿದೆ. ಗಿಡ, ಮರಗಳು ಚಿಗುರಿರುವುದರಿಂದ ಕುರಿ ಮತ್ತು ಮೇಕೆಗಳಿಗೂ ಅನುಕೂಲವಾಗಿದೆ.</p>.<p>ಕಳೆದ ವರ್ಷ ತೀವ್ರ ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತರು ಈ ಬಾರಿ ಮುಂಗಾರು ಮಳೆ ಉತ್ತಮವಾಗಿರುವುದರಿಂದ ದನ ಕರುಗಳನ್ನು ಉಳಿಸಿಕೊಳ್ಳಬಹುದು ಎಂಬ ಆಶಯದಲ್ಲಿ ಇದ್ದಾರೆ.</p>.<p>ತಾಲ್ಲೂಕಿನ ಹಲವೆಡೆ ರೋಗಬಾಧೆಯಿಂದ ತೆಂಗಿನ ಬೆಳೆ ಇಲ್ಲವಾಗಿತ್ತು. ನೀರಿನ ಕೊರತೆಯಿಂದ ಅಡಿಕೆ ಬೆಳೆಗೂ ಕುತ್ತು ಬಂದಿದ್ದ ಸಮಯದಲ್ಲಿ ಮಳೆ ಬಂದಿರುವುದು ರೈತರಲ್ಲಿ ಸಂತಸ ತಂದಿದೆ.</p>.<p>ಬರಗಾಲದಿಂದ ಮೇವು ಹಾಗೂ ಕುಡಿಯುವ ನೀರಿಗೂ ತೊಂದರೆಯಾಗಿದ್ದರಿಂದ ಮನೆಯಲ್ಲಿದ್ದ ನಾಲ್ಕು ಹಸುಗಳಲ್ಲಿ ಎರಡನ್ನು ಮಾರಾಟ ಮಾಡಿದ್ದೆ. ಈಗ ಉತ್ತಮ ಮಳೆಯಾಗಿ ಮೇವಿನ ಬರ ಇಲ್ಲವಾಗುತ್ತಿದೆ. ಸಾಧ್ಯವಾದಲ್ಲಿ ಮತ್ತೆ ಎರಡು ಹಸುಗಳನ್ನು ಖರೀದಿಸಲು ಯೋಚಿಸುತ್ತಿದ್ದೇನೆ ಎನ್ನುತ್ತಾರೆ ರೈತ ಕೆಂಪರಾಜು.</p>.<p>ಅನೇಕ ವರ್ಷಗಳಿಂದ ಕುರಿಗಳನ್ನು ಸಾಕಿ ಬದುಕು ಕಟ್ಟಿಕೊಂಡಿದ್ದೆ. ಈ ಬಾರಿಯ ಬರಗಾಲದಿಂದಾಗಿ ಸಂಕಷ್ಟಕ್ಕೆ ಸಿಲುಕಿ ಕುರಿಗಳನ್ನು ಮಾರಲು ನಿರ್ಧರಿಸಿದ್ದೆ. ಈಗ ಮಳೆಯಾಗಿರುವುದರಿಂದ ಕುರಿ ಮೇಯಿಸಲು ಯಾವುದೇ ತೊಂದರೆಯಾಗುತ್ತಿಲ್ಲ ಎನ್ನುತ್ತಾರೆ ಕುರಿಗಾಹಿ ತಿಮ್ಮಯ್ಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಬ್ಬಿ:</strong> ತಾಲ್ಲೂಕಿನಲ್ಲಿ ಈ ವರ್ಷ ಉತ್ತಮ ಮಳೆಯಾಗುತ್ತಿರುವುದರಿಂದ ಸಣ್ಣಪುಟ್ಟ ಕೆರೆ-ಕಟ್ಟೆಗಳು ತುಂಬಿರುವ ಜೊತೆಗೆ ದನಕರು, ಮೇಕೆ, ಕುರಿಗಳ ಮೇವಿನ ಬರ ನೀಗುತ್ತಿದೆ.</p>.<p>ಎಲ್ಲೆಡೆಯೂ ಹಸಿರು ಚಿಗುರಿ ಮೇಯಲು ಅನುಕೂಲವಾಗಿದೆ. ಹಳ್ಳ ಕೊಳ್ಳಗಳಲ್ಲಿ ನೀರು ನಿಂತಿರುವುದರಿಂದ ತಕ್ಷಣಕ್ಕೆ ರೈತರಿಗೆ ಯಾವುದೇ ತೊಂದರೆ ಇಲ್ಲವಾಗಿದೆ.</p>.<p>ಹೊಲ, ತೋಟ, ಬದು ಹಾಗೂ ಗದ್ದೆ ಬಯಲುಗಳಲ್ಲಿ ಹಸಿರು ಚಿಗುರಿರುವ ಜೊತೆಗೆ ರೈತರು ರಾಸುಗಳ ಮೇವನ್ನು ಬಿತ್ತನೆ ಮಾಡಿಕೊಂಡಿರುವುದರಿಂದ ಮೇವಿನ ಬರ ನೀಗಿದೆ. ಗಿಡ, ಮರಗಳು ಚಿಗುರಿರುವುದರಿಂದ ಕುರಿ ಮತ್ತು ಮೇಕೆಗಳಿಗೂ ಅನುಕೂಲವಾಗಿದೆ.</p>.<p>ಕಳೆದ ವರ್ಷ ತೀವ್ರ ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತರು ಈ ಬಾರಿ ಮುಂಗಾರು ಮಳೆ ಉತ್ತಮವಾಗಿರುವುದರಿಂದ ದನ ಕರುಗಳನ್ನು ಉಳಿಸಿಕೊಳ್ಳಬಹುದು ಎಂಬ ಆಶಯದಲ್ಲಿ ಇದ್ದಾರೆ.</p>.<p>ತಾಲ್ಲೂಕಿನ ಹಲವೆಡೆ ರೋಗಬಾಧೆಯಿಂದ ತೆಂಗಿನ ಬೆಳೆ ಇಲ್ಲವಾಗಿತ್ತು. ನೀರಿನ ಕೊರತೆಯಿಂದ ಅಡಿಕೆ ಬೆಳೆಗೂ ಕುತ್ತು ಬಂದಿದ್ದ ಸಮಯದಲ್ಲಿ ಮಳೆ ಬಂದಿರುವುದು ರೈತರಲ್ಲಿ ಸಂತಸ ತಂದಿದೆ.</p>.<p>ಬರಗಾಲದಿಂದ ಮೇವು ಹಾಗೂ ಕುಡಿಯುವ ನೀರಿಗೂ ತೊಂದರೆಯಾಗಿದ್ದರಿಂದ ಮನೆಯಲ್ಲಿದ್ದ ನಾಲ್ಕು ಹಸುಗಳಲ್ಲಿ ಎರಡನ್ನು ಮಾರಾಟ ಮಾಡಿದ್ದೆ. ಈಗ ಉತ್ತಮ ಮಳೆಯಾಗಿ ಮೇವಿನ ಬರ ಇಲ್ಲವಾಗುತ್ತಿದೆ. ಸಾಧ್ಯವಾದಲ್ಲಿ ಮತ್ತೆ ಎರಡು ಹಸುಗಳನ್ನು ಖರೀದಿಸಲು ಯೋಚಿಸುತ್ತಿದ್ದೇನೆ ಎನ್ನುತ್ತಾರೆ ರೈತ ಕೆಂಪರಾಜು.</p>.<p>ಅನೇಕ ವರ್ಷಗಳಿಂದ ಕುರಿಗಳನ್ನು ಸಾಕಿ ಬದುಕು ಕಟ್ಟಿಕೊಂಡಿದ್ದೆ. ಈ ಬಾರಿಯ ಬರಗಾಲದಿಂದಾಗಿ ಸಂಕಷ್ಟಕ್ಕೆ ಸಿಲುಕಿ ಕುರಿಗಳನ್ನು ಮಾರಲು ನಿರ್ಧರಿಸಿದ್ದೆ. ಈಗ ಮಳೆಯಾಗಿರುವುದರಿಂದ ಕುರಿ ಮೇಯಿಸಲು ಯಾವುದೇ ತೊಂದರೆಯಾಗುತ್ತಿಲ್ಲ ಎನ್ನುತ್ತಾರೆ ಕುರಿಗಾಹಿ ತಿಮ್ಮಯ್ಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>