ಬಾರ್ ಬಳಿ ಸುನಿಲ್ ನಿಲ್ಲಿಸಿದ್ದ ಬೈಕ್ ಸ್ಟಾರ್ಟ್ ಆಗದಂತೆ ಸೈಲೆನ್ಸರ್ಗೆ ಬಟ್ಟೆ ತುರುಕಿದ್ದರು. ಮದ್ಯ ಸೇವಿಸಿ ಹೊರಬಂದ ಸುನಿಲ್, ಬೈಕ್ ಸ್ಟಾರ್ಟ್ ಮಾಡಲು ಪ್ರಯತ್ನಿಸಿದ್ದಾನೆ. ಅದೇ ಸಮಯಕ್ಕೆ ಹೊಂಚುಹಾಕಿ ಕುಳಿತಿದ್ದ ರಂಗಯ್ಯ, ಸುನಿಲ್ನನ್ನು ಬೈಕ್ನಿಂದ ತಳ್ಳಿ, ಆತನ ತಲೆಯ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಕೊಲೆಮಾಡಿ ಪರಾರಿಯಾಗಿದ್ದರು. ಅನುಮಾನ ಬಂದ ಪೊಲೀಸರು ನಿರ್ಮಲಾಳನ್ನು ವಿಚಾರಣೆಗೆ ಒಳಪಡಿಸಿದಾಗ ಎಲ್ಲಾ ವಿಚಾರವನ್ನು ಬಾಯಿ ಬಿಟ್ಟಿದ್ದಾರೆ.