‘ರೈತ ಪ್ರಗತಿಪರ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಟಿಕಾಯಿತ್ ಆದೇಶದ ಮೇರೆಗೆ ಸೆ.27ರಂದು ಇಡೀ ದೇಶದಲ್ಲಿ ‘ಭಾರತ್ ಬಂದ್’ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಾಲ್ಲೂಕು ರೈತಸಂಘ, ಸಿಐಟಿಯು, ದಲಿತ ಸಂಘಟನೆ, ಛಲವಾದಿ ಸಂಘ, ಕಟ್ಟಡ ಕಾರ್ಮಿಕರ ಸಂಘ, ಬೀದಿಬದಿ ವ್ಯಾಪಾರಿ, ಆಟೋ ಚಾಲಕರು, ಅಂಗನವಾಡಿ, ಅಶಾಕಾರ್ಯಕರ್ತರು, ಜಯ ಕರ್ನಾಟಕ, ಕನ್ನಡ ರಕ್ಷಣ ವೇದಿಕೆ, ಜಯಕರ್ನಾಟಕ ಜನಪರ ವೇದಿಕೆ ಹಾಗೂ ಇನ್ನಿತರ ಸಂಘಟನೆಗಳು ಒಟ್ಟುಗೂಡಿ ತಾಲ್ಲೂಕು ಬಂದ್ ಆಚರಿಸಲಾಗುವುದು’ ಎಂದರು.