<p><strong>ಪಾವಗಡ:</strong> ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್ನಲ್ಲಿ ದೂರವಾಗಿದ್ದ ಮೂರು ಜೋಡಿಗಳು ಮತ್ತೆ ಒಂದಾದರು. 847 ಪ್ರಕರಣ ಇತ್ಯರ್ಥವಾದವು. ₹1.57 ಕೋಟಿ ಮೊತ್ತ ಇತ್ಯರ್ಥವಾಯಿತು.</p>.<p>ಪಟ್ಟಣದ ನ್ಯಾಯಾಲಯ ಆವರಣ, ಮೂರು ನ್ಯಾಯಾಲಯಗಳು ಜನರಿಂದ ತುಂಬಿತ್ತು. ಬೆಳಿಗ್ಗೆಯಿಂದಲೇ ಲೋಕ ಅದಾಲತ್ಗೆ ಜನತೆ ಕಾದು ಕುಳಿತಿದ್ದರು.</p>.<p>ನ್ಯಾಯಾಧೀಶ ವಿ. ಮಾದೇಶ 33 ಪ್ರಕರಣಗಳನ್ನು ಇತ್ಯರ್ಥಪಡಿಸಿದರು.</p>.<p>ವರ್ಷಗಳ ಕಾಲ ದೂರವಾಗಿ ವಿಚ್ಛೇದನಕ್ಕೆ ದಾವೆ ಹೂಡಿದ್ದ ಮೂರು ಜೋಡಿಗಳನ್ನು ಬುದ್ದಿವಾದ ಹೇಳಿ ಅದಾಲತ್ನಲ್ಲಿ ಮತ್ತೆ ಒಂದಾಗುವಂತೆ ಮಾಡಿದರು. ನ್ಯಾಯಾಲಯದಲ್ಲಿಯೇ ದಂಪತಿಗಳಿಗೆ ಹಾರ ಹಾಕಿಸಿ, ಸಿಹಿ ಹಂಚಿ ವಕೀಲರು, ಸಿಬ್ಬಂದಿ ಸಂತಸ ವ್ಯಕ್ತಪಡಿಸಿದರು.</p>.<p>₹75.97 ಲಕ್ಷ ಮೊತ್ತದ ಸಾಲ, ಕರಾರು ಸೇರಿದಂತೆ ವಿವಿಧ ಪ್ರಕರಣಗಳು ಇತ್ಯರ್ಥವಾದವು.</p>.<p>ನ್ಯಾಯಾಧೀಶ ಸುದೇರ್ 435 ಪ್ರಕರಣಗಳನ್ನು ಇತ್ಯರ್ಥಪಡಿಸಿದರು. ₹39.43 ಲಕ್ಷ ಮೊತ್ತದ ಪ್ರಕರಣಗಳು ಇತ್ಯರ್ಥವಾದವು.</p>.<p>ನ್ಯಾಯಾಧೀಶೆ ಪ್ರಿಯಾಂಕ, 381 ಪ್ರಕರಣಗಳನ್ನು ಬಗೆಹರಿಸಿದರು. ₹42.06 ಲಕ್ಷ ಮೌಲ್ಯದ ದಾವೆಗಳನ್ನು ಇತ್ಯರ್ಥಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾವಗಡ:</strong> ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್ನಲ್ಲಿ ದೂರವಾಗಿದ್ದ ಮೂರು ಜೋಡಿಗಳು ಮತ್ತೆ ಒಂದಾದರು. 847 ಪ್ರಕರಣ ಇತ್ಯರ್ಥವಾದವು. ₹1.57 ಕೋಟಿ ಮೊತ್ತ ಇತ್ಯರ್ಥವಾಯಿತು.</p>.<p>ಪಟ್ಟಣದ ನ್ಯಾಯಾಲಯ ಆವರಣ, ಮೂರು ನ್ಯಾಯಾಲಯಗಳು ಜನರಿಂದ ತುಂಬಿತ್ತು. ಬೆಳಿಗ್ಗೆಯಿಂದಲೇ ಲೋಕ ಅದಾಲತ್ಗೆ ಜನತೆ ಕಾದು ಕುಳಿತಿದ್ದರು.</p>.<p>ನ್ಯಾಯಾಧೀಶ ವಿ. ಮಾದೇಶ 33 ಪ್ರಕರಣಗಳನ್ನು ಇತ್ಯರ್ಥಪಡಿಸಿದರು.</p>.<p>ವರ್ಷಗಳ ಕಾಲ ದೂರವಾಗಿ ವಿಚ್ಛೇದನಕ್ಕೆ ದಾವೆ ಹೂಡಿದ್ದ ಮೂರು ಜೋಡಿಗಳನ್ನು ಬುದ್ದಿವಾದ ಹೇಳಿ ಅದಾಲತ್ನಲ್ಲಿ ಮತ್ತೆ ಒಂದಾಗುವಂತೆ ಮಾಡಿದರು. ನ್ಯಾಯಾಲಯದಲ್ಲಿಯೇ ದಂಪತಿಗಳಿಗೆ ಹಾರ ಹಾಕಿಸಿ, ಸಿಹಿ ಹಂಚಿ ವಕೀಲರು, ಸಿಬ್ಬಂದಿ ಸಂತಸ ವ್ಯಕ್ತಪಡಿಸಿದರು.</p>.<p>₹75.97 ಲಕ್ಷ ಮೊತ್ತದ ಸಾಲ, ಕರಾರು ಸೇರಿದಂತೆ ವಿವಿಧ ಪ್ರಕರಣಗಳು ಇತ್ಯರ್ಥವಾದವು.</p>.<p>ನ್ಯಾಯಾಧೀಶ ಸುದೇರ್ 435 ಪ್ರಕರಣಗಳನ್ನು ಇತ್ಯರ್ಥಪಡಿಸಿದರು. ₹39.43 ಲಕ್ಷ ಮೊತ್ತದ ಪ್ರಕರಣಗಳು ಇತ್ಯರ್ಥವಾದವು.</p>.<p>ನ್ಯಾಯಾಧೀಶೆ ಪ್ರಿಯಾಂಕ, 381 ಪ್ರಕರಣಗಳನ್ನು ಬಗೆಹರಿಸಿದರು. ₹42.06 ಲಕ್ಷ ಮೌಲ್ಯದ ದಾವೆಗಳನ್ನು ಇತ್ಯರ್ಥಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>