ಕಾಂಗ್ರೆಸ್ ಮುಖಂಡ ಜಿ.ಪರಮೇಶ್ವರ್ ಅವರ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೂ, ಪರಮೇಶ್ವರ್ ಒಳಮೀಸಲಾತಿ ಪರ ಇಲ್ಲ ಎಂಬ ಕಾರಣಕ್ಕೆ ‘ಕಾಂಗ್ರೆಸ್ ಗೆಲ್ಲಿಸಿ, ಪರಮೇಶ್ವರ್ ಸೋಲಿಸಿ’ ಎಂಬ ಅಭಿಯಾನವನ್ನು ಕೆ.ಬಿ.ಸಿದ್ದಯ್ಯ ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಕೊರಟಗೆರೆಯಲ್ಲಿ ಆರಂಭಿಸಿದ್ದರು. ಇದರಿಂದ ವಿವಾದ ಬುಗಿಲೆದ್ದು ಪರ–ವಿರೋಧದ ಚರ್ಚೆ ಚುನಾವಣಾ ಕಾಲದಲ್ಲಿ ತೀವ್ರಗೊಂಡಿತ್ತು.