<p><strong>ತೋವಿನಕೆರೆ</strong>: ಪಾಯಸಾಗರ್ ಮುನಿ ಚಾತುರ್ಮಾಸ ಕೈಗೊಂಡ ನಂತರ ತೋವಿನಕೆರೆ ಚಂದ್ರನಾಥ ಸ್ವಾಮಿ ದೇವಾಲಯ ಜೈನ ಯಾತ್ರಾ ಸ್ಥಳವಾಗಿ ಮಾರ್ಪಟ್ಟಿದೆ.</p>.<p>ಇಂದೋರ್, ಮುಂಬೈ, ಗುಜರಾತ್ನ ಹಲವೆಡೆಗಳಿಂದ ನೂರಾರು ಜೈನ ಭಕ್ತರು ಪ್ರತಿನಿತ್ಯ ಇಲ್ಲಿಗೆ ಬಂದು ಮುನಿಗಳ ದರ್ಶನ ಪಡೆಯುತ್ತಿದ್ದಾರೆ. ವಿಶೇಷ ಪೂಜೆಗಳನ್ನು ಮಾಡಿಸುತ್ತಿದ್ದು, ರಾಜ್ಯದ ವಿವಿಧ ಕಡೆಗಳಿಂದ ಭಕ್ತರು ಭಾಗವಹಿಸುತ್ತಿದ್ದಾರೆ.</p>.<p>ದೂರದಿಂದ ಬರುವ ಭಕ್ತರು 2-3 ದಿನ ಇಲ್ಲಿಯೇ ವಾಸ್ತವ್ಯ ಹೂಡಿ ದೇವರಿಗೆ ಅಭಿಷೇಕ ಮಾಡುವುದು, ಸ್ವಾಮೀಜಿಗೆ ಆಹಾರ ನೀಡುವುದು, ಬೆಳಿಗ್ಗೆಯಿಂದ ಸಂಜೆವರೆಗೆ ಉಪನ್ಯಾಸದಲ್ಲಿ ಭಾಗವಹಿಸುತ್ತಿದ್ದಾರೆ.</p>.<p>ಮುನಿಗಳು ಪ್ರತಿನಿತ್ಯ ಬೆಳಗ್ಗೆ ಒಂದು ಸಲ ಮಾತ್ರ ಆಹಾರ ಸೇವಿಸುತ್ತಿದ್ದಾರೆ. ಮಳೆ ನೀರು ಸಂಗ್ರಹ ಮತ್ತು ಉಪಯೋಗದ ಬಗ್ಗೆ ಭಕ್ತರಿಗೆ ಅರಿವು ಮೂಡಿಸುತ್ತಿದ್ದಾರೆ.</p>.<p>‘ನಿತ್ಯ ಮೂರು ಕಡೆ ಆಹಾರದ ವ್ಯವಸ್ಥೆ ಮಾಡಲಾಗುತ್ತದೆ. ಮುನಿಗೆ ಎಲ್ಲಿ ಸಮಾಧಾನವಾಗುತ್ತದೆಯೊ ಅಲ್ಲಿ ಆಹಾರ ತೆಗೆದುಕೊಳ್ಳುತ್ತಾರೆ. ಕಂದಮೂಲ ಸೇರಿದಂತೆ ಹಲವು ಪದಾರ್ಥಗಳನ್ನು ಉಪಯೋಗಿಸದೇ ಆಹಾರ ತಯಾರಿಸುತ್ತೇವೆ. ಆಹಾರ ತಯಾರಿಕೆಯಲ್ಲಿ ಶುಚಿತ್ವದ ಬಗ್ಗೆ ಕಾಳಜಿ ವಹಿಸುತ್ತೇವೆ’ ಎನ್ನುತ್ತಾರೆ ಲತಾಧರಣೇಂದ್ರ ಕುಮಾರ್ ಜವಳಿ.</p>.<p>‘ಸ್ವಾಮೀಜಿ ಆಹಾರ ತಯಾರಿಸಲು ಮಳೆ ನೀರು, ಬಾವಿ ನೀರನ್ನು ಉಪಯೋಗಿಸುತ್ತಾರೆ. ಬಾವಿ ನೀರನ್ನು ದೂರದಿಂದ ತರುತ್ತಿದ್ದೇವೆ. ಮುನಿಗಳು ಪಾಲಿಸುವ ಸಂಪ್ರದಾಯಕ್ಕೆ ತೊಂದರೆಯಾಗದಂತೆ ನಿಗಾ ವಹಿಸಿದ್ದೇವೆ’ ಎನ್ನುತ್ತಾರೆ ನಮಿತ ಜೈನ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೋವಿನಕೆರೆ</strong>: ಪಾಯಸಾಗರ್ ಮುನಿ ಚಾತುರ್ಮಾಸ ಕೈಗೊಂಡ ನಂತರ ತೋವಿನಕೆರೆ ಚಂದ್ರನಾಥ ಸ್ವಾಮಿ ದೇವಾಲಯ ಜೈನ ಯಾತ್ರಾ ಸ್ಥಳವಾಗಿ ಮಾರ್ಪಟ್ಟಿದೆ.</p>.<p>ಇಂದೋರ್, ಮುಂಬೈ, ಗುಜರಾತ್ನ ಹಲವೆಡೆಗಳಿಂದ ನೂರಾರು ಜೈನ ಭಕ್ತರು ಪ್ರತಿನಿತ್ಯ ಇಲ್ಲಿಗೆ ಬಂದು ಮುನಿಗಳ ದರ್ಶನ ಪಡೆಯುತ್ತಿದ್ದಾರೆ. ವಿಶೇಷ ಪೂಜೆಗಳನ್ನು ಮಾಡಿಸುತ್ತಿದ್ದು, ರಾಜ್ಯದ ವಿವಿಧ ಕಡೆಗಳಿಂದ ಭಕ್ತರು ಭಾಗವಹಿಸುತ್ತಿದ್ದಾರೆ.</p>.<p>ದೂರದಿಂದ ಬರುವ ಭಕ್ತರು 2-3 ದಿನ ಇಲ್ಲಿಯೇ ವಾಸ್ತವ್ಯ ಹೂಡಿ ದೇವರಿಗೆ ಅಭಿಷೇಕ ಮಾಡುವುದು, ಸ್ವಾಮೀಜಿಗೆ ಆಹಾರ ನೀಡುವುದು, ಬೆಳಿಗ್ಗೆಯಿಂದ ಸಂಜೆವರೆಗೆ ಉಪನ್ಯಾಸದಲ್ಲಿ ಭಾಗವಹಿಸುತ್ತಿದ್ದಾರೆ.</p>.<p>ಮುನಿಗಳು ಪ್ರತಿನಿತ್ಯ ಬೆಳಗ್ಗೆ ಒಂದು ಸಲ ಮಾತ್ರ ಆಹಾರ ಸೇವಿಸುತ್ತಿದ್ದಾರೆ. ಮಳೆ ನೀರು ಸಂಗ್ರಹ ಮತ್ತು ಉಪಯೋಗದ ಬಗ್ಗೆ ಭಕ್ತರಿಗೆ ಅರಿವು ಮೂಡಿಸುತ್ತಿದ್ದಾರೆ.</p>.<p>‘ನಿತ್ಯ ಮೂರು ಕಡೆ ಆಹಾರದ ವ್ಯವಸ್ಥೆ ಮಾಡಲಾಗುತ್ತದೆ. ಮುನಿಗೆ ಎಲ್ಲಿ ಸಮಾಧಾನವಾಗುತ್ತದೆಯೊ ಅಲ್ಲಿ ಆಹಾರ ತೆಗೆದುಕೊಳ್ಳುತ್ತಾರೆ. ಕಂದಮೂಲ ಸೇರಿದಂತೆ ಹಲವು ಪದಾರ್ಥಗಳನ್ನು ಉಪಯೋಗಿಸದೇ ಆಹಾರ ತಯಾರಿಸುತ್ತೇವೆ. ಆಹಾರ ತಯಾರಿಕೆಯಲ್ಲಿ ಶುಚಿತ್ವದ ಬಗ್ಗೆ ಕಾಳಜಿ ವಹಿಸುತ್ತೇವೆ’ ಎನ್ನುತ್ತಾರೆ ಲತಾಧರಣೇಂದ್ರ ಕುಮಾರ್ ಜವಳಿ.</p>.<p>‘ಸ್ವಾಮೀಜಿ ಆಹಾರ ತಯಾರಿಸಲು ಮಳೆ ನೀರು, ಬಾವಿ ನೀರನ್ನು ಉಪಯೋಗಿಸುತ್ತಾರೆ. ಬಾವಿ ನೀರನ್ನು ದೂರದಿಂದ ತರುತ್ತಿದ್ದೇವೆ. ಮುನಿಗಳು ಪಾಲಿಸುವ ಸಂಪ್ರದಾಯಕ್ಕೆ ತೊಂದರೆಯಾಗದಂತೆ ನಿಗಾ ವಹಿಸಿದ್ದೇವೆ’ ಎನ್ನುತ್ತಾರೆ ನಮಿತ ಜೈನ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>