ಸರ್ಕಾರಿ ಶಾಲೆಗಳಿಗೆ ನನ್ನಿಂದ ಆಗಬಹುದಾದ ಸೇವೆಯನ್ನು ಯಾವುದೇ ಸ್ವಾರ್ಥವಿಲ್ಲದೆ ಮಾಡಬೇಕು ಎನ್ನುವುದು ನನ್ನ ಬಯಕೆ.
ಎಂ.ಎಸ್. ನರಸಿಂಹಮೂರ್ತಿ ಮುಖ್ಯ ಶಿಕ್ಷಕ
ಶಾಲೆಯ ಮುಖ್ಯಶಿಕ್ಷಕ ಹಾಗೂ ಸಹ ಶಿಕ್ಷಕರು ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಶಾಲೆ ಕಾಂಪೌಂಡ್ ಕೆಲವೆಡೆ ಹಾಳಾಗಿದ್ದು ಪಂಚಾಯಿತಿ ಅನುದಾನದಲ್ಲಿ ಅದನ್ನು ದುರಸ್ತಿ ಮಾಡಿಸಲಾಗುವುದು.
ಲಕ್ಷ್ಮಣ್ ಗ್ರಾಮ ಪಂಚಾಯಿತಿ ಸದಸ್ಯ
ಗ್ರಾಮದ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಎಲ್ಲ ರೀತಿಯ ಅನುಕೂಲವಿದೆ. ಇಂತಹ ಸೌಲಭ್ಯ ಬಿಟ್ಟು ಖಾಸಗಿ ಶಾಲೆಗೆ ಹೋಗಿ ಪೋಷಕರಿಗೆ ಆರ್ಥಿಕ ಹೊರೆ ಏಕೆ ಹೊರಿಸಲಿ
ಅನುರಾಧ 6ನೇ ತರಗತಿ ವಿದ್ಯಾರ್ಥಿ
ವಿದ್ಯಾರ್ಥಿಗಳಿಗೆ ಓದುವುದಕ್ಕೆ ಖಾಸಗಿ ಶಾಲೆಯಾದರೇನು ಸರ್ಕಾರಿ ಶಾಲೆಯಾದರೇನು? ವಿದ್ಯಾಭ್ಯಾಸದ ಅವಧಿಯಲ್ಲಿ ಶ್ರದ್ಧೆ ಜೊತೆಗೆ ಕಠಿಣ ಅಭ್ಯಾಸವಿದ್ದರೆ ಸಾಧನೆ ಸಾದ್ಯ.