ತುಮಕೂರು: ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ದೊಗ್ಗನಹಳ್ಳಿ ಬಳಿ ಬಾವಿಗೆ ಬಿದ್ದು ಕರಡಿ ಸಾವನ್ನಪ್ಪಿದೆ.
ಆಹಾರ ಅರಸಿ ಮಂಗಳವಾರ ತಡರಾತ್ರಿ ಕರಡಿ ಬಂದಿರಬಹುದು. ಗ್ರಾಮದ ಹನುಮಂತರಾಯಪ್ಪ ಎಂಬುವರಿಗೆ ಸೇರಿದ ಬಾವಿಯಲ್ಲಿ ಕರಡಿ ಮೃತದೇಹ ಪತ್ತೆಯಾಗಿದೆ. ಬಾವಿ ಸಾಕಷ್ಟು ಆಳವಿದ್ದು, ಮೇಲೆ ಬರಲಾರದೆ ಸಾವನ್ನಪ್ಪಿರಬಹುದು ಎನ್ನಲಾಗುತ್ತಿದೆ. ಸ್ಥಳಕ್ಕೆ ಕೊರಟಗೆರೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.