<figcaption>""</figcaption>.<p><strong>ತುಮಕೂರು: </strong>ಶಿವಕುಮಾರ ಸ್ವಾಮೀಜಿ ಅವರ14 ಅಡಿ ಎತ್ತರದ ಪುತ್ಥಳಿಯನ್ನು ಮುಂದಿನ ತಿಂಗಳು ಬೆಂಗಳೂರಿನ ಗೋವಿಂದರಾಜ ನಗರದಲ್ಲಿ ಮುಖ್ಯಮಂತ್ರಿ ಅನಾವರಣ ಮಾಡುವರು. ₹16 ಕೋಟಿ ವೆಚ್ಚದಲ್ಲಿ ಈ ಪುತ್ಥಳಿ ತಯಾರಾಗುತ್ತಿದೆ ಎಂದುಸಚಿವ ಸೋಮಣ್ಣ ತಿಳಿಸಿದರು.</p>.<p>ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಂದೇಶ ವಾಚಿಸಿದ ಸೋಮಣ್ಣ, ‘ಸ್ವಾಮೀಜಿ ಇದ್ದಷ್ಟು ದಿನ ತುಮಕೂರು ಜಿಲ್ಲೆ ಅವರ ಹೆಸರಿನ ಮೇಲೆ ನಿಂತಿತ್ತು. ಈಗ ಅವರ ಸ್ಮರಣೆ ಮೇಲೆ ನಿಂತಿದೆ’ ಎಂದು ನುಡಿದರು.</p>.<p>ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ‘ಒಮ್ಮೆ ನಾನು ಮಠಕ್ಕೆ ಭೇಟಿ ನೀಡಿದ್ದೆ ಆಗ ಇಬ್ವರು ಅಣ್ಣ ತಮ್ಮಂದಿರು ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದರು. ಆಗ ನೋಡಪ್ಪ ಹೀಗಿದೆ ಸ್ಥಿತಿ ನೀವು ಯಾವ ಬಡತನ ನಿವಾರಿಸುತ್ತಿದ್ದೀರಿ ಎಂದು ಸ್ವಾಮೀಜಿ ಪ್ರಶ್ನಿಸಿದ್ದರು ಎಂದು ನೆನಪಿಸಿಕೊಂಡರು.</p>.<p>‘ಶರಣ ಧರ್ಮದಲ್ಲಿ ಭಯ ಇರಬಾರದು. ನಿಜ ಶರಣರು ಭಕ್ತರಾರುತ್ತಾರೆ.ಎಲ್ಲರೂ ಇಂದು ಬಸವಣ್ಣನ ಬಗ್ಗೆ ಮಾತನಾಡುತ್ತಾರೆ. ಆದರೆ ಹಾಗೆ ಬದುಕಲಿಲ್ಲ. ಶಿವಕುಮಾರ ಸ್ವಾಮೀಜಿ ಜಾತಿ ಮತಗಳನ್ನು ಮೀರಿ ಬೆಳೆದರು. ಅವರ ಒಡನಾಟವನ್ನು ನಮ್ಮ ಬದುಕಿನ ಶ್ರೇಷ್ಠ ಕ್ಷಣ ಗಳು ಎಂದುಕೊಳ್ಳಬೇಕು’ಎಂದು ಅಭಿಪ್ರಾಯಪಟ್ಟರು.</p>.<p>ಸಚಿವ ಸಿ.ಟಿ.ರವಿ ಮಾತನಾಡಿ, ‘ರಾಜಕೀಯದಲ್ಲಿ ಜನನಾಯಕರು ಎನಿಸಿಕೊಂಡ ಬಹಳ ಜನ ಜನ ಹಿತಕ್ಕಿಂತ ಸ್ವಜನ ಹಿತಕ್ಕೆ ಆದ್ಯತೆ ನೀಡುತ್ತಿದ್ದಾರೆ.ಹೊರಗಿನ ಶತ್ರು ನಿಗ್ರಹಿಸುವುದು ಸುಲಭ.ಆದರೆ ಒಳಗಿನ ಶತ್ರುಗಳು ನಮ್ಮನ್ನು ಹಾಳು ಮಾಡುತ್ತವೆ’ ಎಂದು ಹೇಳಿದರು.</p>.<div style="text-align:center"><figcaption><em><strong>ಶಿವಕುಮಾರ ಸ್ವಾಮೀಜಿ ಪುಣ್ಯ ಸ್ಮರಣೆ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.</strong></em></figcaption></div>.<p><strong>ಸನ್ಮಾನ</strong></p>.<p>ನವದೆಹಲಿಯ ಉದ್ಯಮಿ ಮುಖೇಶ್ ಗರ್ಗ್, ನವದೆಹಲಿಯ ಉಗ್ರ ನಿಗ್ರಹ ದಳದ ಮಣೀಂದ್ರ ಜೀತ್ ಸಿಂಗ್ ಬಿಟ್ಟ ಹಾಗೂ ಬಿಜಿಎಸ್ ಆಸ್ಪತ್ರೆಯ ಡಾ.ರವೀಂದ್ರನಾಥ್ ಅವರನ್ನು ಸನ್ಮಾನಿಸಲಾಯಿತು.</p>.<p>ಮುಖೇಶ್ ಗರ್ಗ್ಮೂರು ಅಡಿ ಎತ್ತರದ 50 ಕೆ.ಜಿ ತೂಕದ ಬೆಳ್ಳಿ ಪುತ್ಥಳಿ ಮಾಡಿಸಿಕೊಟ್ಟಿದ್ದಾರೆ. ಮಠದ ದಾಸೋಹಕ್ಕೆ ಪ್ರತಿ ತಿಂಗಳು ₹ 1 ಲಕ್ಷ ದೇಣಿಗೆ ನೀಡುತ್ತಿದ್ದಾರೆ. ಈ ಪುತ್ಥಳಿಯನ್ನು ಇಂದು ಮಠಕ್ಕೆ ಅವರು ನೀಡಿದರು.</p>.<p>ಪಂಜಾಬ್ನಮಣೀಂದರ್ ಸಿಂಗ್ ಅವರುಪಿ.ವಿ.ನರಸಿಂಹರಾವ್ ಪ್ರಧಾನಿ ಆಗಿದ್ದಾಗ ರಾಷ್ಟೀಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಪಂಜಾಬ್ನಲ್ಲಿ ಸಚಿವರಾಗಿದ್ದರು. ಮಠದ ಪರಮ ಭಕ್ತರು.</p>.<p>ಆಂಧ್ರಪ್ರದೇಶದ ರವೀಂದ್ರಅವರು.ಅಂಗಾಂಗ ಕಸಿ ತಜ್ಞರು. ಶಿವಕುಮಾರ ಸ್ವಾಮೀಜಿ ಅನಾರೋಗ್ಯಕ್ಕೆ ತುತ್ತಾದ ಸಮಯದಲ್ಲಿ ಚಿಕಿತ್ಸೆ ನೀಡಿದ ಪ್ರಮುಖರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<p><strong>ತುಮಕೂರು: </strong>ಶಿವಕುಮಾರ ಸ್ವಾಮೀಜಿ ಅವರ14 ಅಡಿ ಎತ್ತರದ ಪುತ್ಥಳಿಯನ್ನು ಮುಂದಿನ ತಿಂಗಳು ಬೆಂಗಳೂರಿನ ಗೋವಿಂದರಾಜ ನಗರದಲ್ಲಿ ಮುಖ್ಯಮಂತ್ರಿ ಅನಾವರಣ ಮಾಡುವರು. ₹16 ಕೋಟಿ ವೆಚ್ಚದಲ್ಲಿ ಈ ಪುತ್ಥಳಿ ತಯಾರಾಗುತ್ತಿದೆ ಎಂದುಸಚಿವ ಸೋಮಣ್ಣ ತಿಳಿಸಿದರು.</p>.<p>ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಂದೇಶ ವಾಚಿಸಿದ ಸೋಮಣ್ಣ, ‘ಸ್ವಾಮೀಜಿ ಇದ್ದಷ್ಟು ದಿನ ತುಮಕೂರು ಜಿಲ್ಲೆ ಅವರ ಹೆಸರಿನ ಮೇಲೆ ನಿಂತಿತ್ತು. ಈಗ ಅವರ ಸ್ಮರಣೆ ಮೇಲೆ ನಿಂತಿದೆ’ ಎಂದು ನುಡಿದರು.</p>.<p>ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ‘ಒಮ್ಮೆ ನಾನು ಮಠಕ್ಕೆ ಭೇಟಿ ನೀಡಿದ್ದೆ ಆಗ ಇಬ್ವರು ಅಣ್ಣ ತಮ್ಮಂದಿರು ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದರು. ಆಗ ನೋಡಪ್ಪ ಹೀಗಿದೆ ಸ್ಥಿತಿ ನೀವು ಯಾವ ಬಡತನ ನಿವಾರಿಸುತ್ತಿದ್ದೀರಿ ಎಂದು ಸ್ವಾಮೀಜಿ ಪ್ರಶ್ನಿಸಿದ್ದರು ಎಂದು ನೆನಪಿಸಿಕೊಂಡರು.</p>.<p>‘ಶರಣ ಧರ್ಮದಲ್ಲಿ ಭಯ ಇರಬಾರದು. ನಿಜ ಶರಣರು ಭಕ್ತರಾರುತ್ತಾರೆ.ಎಲ್ಲರೂ ಇಂದು ಬಸವಣ್ಣನ ಬಗ್ಗೆ ಮಾತನಾಡುತ್ತಾರೆ. ಆದರೆ ಹಾಗೆ ಬದುಕಲಿಲ್ಲ. ಶಿವಕುಮಾರ ಸ್ವಾಮೀಜಿ ಜಾತಿ ಮತಗಳನ್ನು ಮೀರಿ ಬೆಳೆದರು. ಅವರ ಒಡನಾಟವನ್ನು ನಮ್ಮ ಬದುಕಿನ ಶ್ರೇಷ್ಠ ಕ್ಷಣ ಗಳು ಎಂದುಕೊಳ್ಳಬೇಕು’ಎಂದು ಅಭಿಪ್ರಾಯಪಟ್ಟರು.</p>.<p>ಸಚಿವ ಸಿ.ಟಿ.ರವಿ ಮಾತನಾಡಿ, ‘ರಾಜಕೀಯದಲ್ಲಿ ಜನನಾಯಕರು ಎನಿಸಿಕೊಂಡ ಬಹಳ ಜನ ಜನ ಹಿತಕ್ಕಿಂತ ಸ್ವಜನ ಹಿತಕ್ಕೆ ಆದ್ಯತೆ ನೀಡುತ್ತಿದ್ದಾರೆ.ಹೊರಗಿನ ಶತ್ರು ನಿಗ್ರಹಿಸುವುದು ಸುಲಭ.ಆದರೆ ಒಳಗಿನ ಶತ್ರುಗಳು ನಮ್ಮನ್ನು ಹಾಳು ಮಾಡುತ್ತವೆ’ ಎಂದು ಹೇಳಿದರು.</p>.<div style="text-align:center"><figcaption><em><strong>ಶಿವಕುಮಾರ ಸ್ವಾಮೀಜಿ ಪುಣ್ಯ ಸ್ಮರಣೆ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.</strong></em></figcaption></div>.<p><strong>ಸನ್ಮಾನ</strong></p>.<p>ನವದೆಹಲಿಯ ಉದ್ಯಮಿ ಮುಖೇಶ್ ಗರ್ಗ್, ನವದೆಹಲಿಯ ಉಗ್ರ ನಿಗ್ರಹ ದಳದ ಮಣೀಂದ್ರ ಜೀತ್ ಸಿಂಗ್ ಬಿಟ್ಟ ಹಾಗೂ ಬಿಜಿಎಸ್ ಆಸ್ಪತ್ರೆಯ ಡಾ.ರವೀಂದ್ರನಾಥ್ ಅವರನ್ನು ಸನ್ಮಾನಿಸಲಾಯಿತು.</p>.<p>ಮುಖೇಶ್ ಗರ್ಗ್ಮೂರು ಅಡಿ ಎತ್ತರದ 50 ಕೆ.ಜಿ ತೂಕದ ಬೆಳ್ಳಿ ಪುತ್ಥಳಿ ಮಾಡಿಸಿಕೊಟ್ಟಿದ್ದಾರೆ. ಮಠದ ದಾಸೋಹಕ್ಕೆ ಪ್ರತಿ ತಿಂಗಳು ₹ 1 ಲಕ್ಷ ದೇಣಿಗೆ ನೀಡುತ್ತಿದ್ದಾರೆ. ಈ ಪುತ್ಥಳಿಯನ್ನು ಇಂದು ಮಠಕ್ಕೆ ಅವರು ನೀಡಿದರು.</p>.<p>ಪಂಜಾಬ್ನಮಣೀಂದರ್ ಸಿಂಗ್ ಅವರುಪಿ.ವಿ.ನರಸಿಂಹರಾವ್ ಪ್ರಧಾನಿ ಆಗಿದ್ದಾಗ ರಾಷ್ಟೀಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಪಂಜಾಬ್ನಲ್ಲಿ ಸಚಿವರಾಗಿದ್ದರು. ಮಠದ ಪರಮ ಭಕ್ತರು.</p>.<p>ಆಂಧ್ರಪ್ರದೇಶದ ರವೀಂದ್ರಅವರು.ಅಂಗಾಂಗ ಕಸಿ ತಜ್ಞರು. ಶಿವಕುಮಾರ ಸ್ವಾಮೀಜಿ ಅನಾರೋಗ್ಯಕ್ಕೆ ತುತ್ತಾದ ಸಮಯದಲ್ಲಿ ಚಿಕಿತ್ಸೆ ನೀಡಿದ ಪ್ರಮುಖರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>