ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಶಿರಾದಲ್ಲಿ ಅಪಘಾತ | ತಬ್ಬಲಿಯಾದ ಮಗು

Last Updated 25 ಆಗಸ್ಟ್ 2022, 8:02 IST
ಅಕ್ಷರ ಗಾತ್ರ

ತುಮಕೂರು: ಶಿರಾ ತಾಲ್ಲೂಕು ಕಳ್ಳಂಬೆಳ್ಳ ಬಳಿ ನಡೆದ ಅಪಘಾತದಲ್ಲಿ ತಂದೆ, ತಾಯಿ, ತಮ್ಮನನ್ನು ಕಳೆದುಕೊಂಡ ಐದು ವರ್ಷದ ಬಾಲಕ ತಬ್ಬಲಿಯಾಗಿದ್ದಾನೆ.

ತಂದೆ ಪ್ರಭು (30), ತಾಯಿ ಸುಜಾತ (25), ತಮ್ಮ ವಿನೋದ್ (3) ಅಪಘಾತ ನಡೆದ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅದೃಷ್ಟವಶಾತ್‌ ಸಂದೀಪ್‌ (5) ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ರಾಯಚೂರು ಜಿಲ್ಲೆಯ ಸಿರಿವಾರ ತಾಲ್ಲೂಕಿನ ಕುರಕುಂದ ಗ್ರಾಮದ ಪ್ರಭು ಕುಟುಂಬ ಅಪಘಾತಕ್ಕೀಡಾದ ಕ್ರೂಸರ್‌ನಲ್ಲಿ ಸಂಚರಿಸುತಿತ್ತು. ಪ್ರಭು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಹೆಂಡತಿ, ಮಕ್ಕಳು ಎಲ್ಲ ಒಂದೆಡೆ ಇರಬೇಕು ಎಂಬ ಕಾರಣಕ್ಕೆ ಕಳೆದ ಕೆಲವು ದಿನಗಳಿಂದ ಎಲ್ಲರೂ ಬೆಂಗಳೂರಿನಲ್ಲಿ ವಾಸವಿದ್ದರು.

ಬದುಕಿ ಬಾಳಬೇಕಿದ್ದ ವಿನೋದ್‌ ಮಸಣ ಸೇರಿದ್ದರೆ, ಅಪ್ಪ, ಅಮ್ಮನ ಸಾವಿನ ಅರಿವಿಲ್ಲದೆ ಸಂದೀಪ್ ಕುಳಿತಿದ್ದ. ಈ ಕುಟುಂಬದ ಬಾಳಲ್ಲಿ ಅಕ್ಷರಶಃ ವಿಧಿ ಆಟವಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT