ಲುಕ್ಸಾನ್ (20) ಹಾಗೂ ಅಪ್ರೋಜ್ (18) ಮೃತಪಟ್ಟವರು. ಲುಕ್ಸಾನ್ ನಗರದ ಸದಾಶಿವನಗರ ನಿವಾಸಿಯಾಗಿದ್ದು, ತನ್ನ ಸ್ನೇಹಿತ ಹೆಗ್ಗೆರೆ ನಿವಾಸಿ ಅಪ್ರೋಜ್ ಮನೆಗೆ ಪ್ರತಿ ದಿನವೂ ಬೆಳಗಿನ ಜಾವ ತೆರಳಿ ರಂಜಾನ್ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಇಂದೂ ಸಹ ಪ್ರಾರ್ಥನೆ ಸಲ್ಲಿಸಿ, ಊಟ ಮುಗಿಸಿ ಮನೆಯಿಂದ ಹೊರಟಿದ್ದಾರೆ. ಸ್ನೇಹಿತನನ್ನು ಬಿಟ್ಟು ಬರಲು ಅಪ್ರೋಜ್ ಬೈಕ್ನಲ್ಲಿ ತೆರಳುತ್ತಿದ್ದಾಗ ತುಮಕೂರು ಕಡೆಯಿಂದ ಎದುರಿಗೆ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.