<p>ತುಮಕೂರು: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಿಂದ ಆರಂಭಿಸಿರುವ ನೀರು ಪರೀಕ್ಷಾ ಪ್ರಯೋಗಾಲಯಗಳಲ್ಲಿ ಕುಡಿಯುವ ನೀರಿನ ಮೂಲಗಳ ಗುಣಮಟ್ಟ ಪರೀಕ್ಷೆ ನಡೆಸಿ, ವರದಿ ನೀಡುವ ಕೆಲಸ ಕೆಲ ದಿನಗಳಿಂದ ಸ್ಥಗಿತಗೊಂಡಿದೆ.</p>.<p>ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಆವರಣ, ತಿಪಟೂರು ಮತ್ತು ಮಧುಗಿರಿ ಪಟ್ಟಣದಲ್ಲಿ ಪ್ರಯೋಗಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಕೊರೆಸಿದ ಕೊಳವೆ ಬಾವಿಗಳ ನೀರಿನ ಗುಣಮಟ್ಟವನ್ನು ಈ ಪ್ರಯೋಗಾಲಯಗಳಲ್ಲಿ ಪರೀಕ್ಷೆ ಮಾಡಲಾಗುತ್ತದೆ. ಆದರೆ ಈಗ ಈ ಕೆಲಸ ಅರ್ಧಂಬರ್ಧ ನಡೆಯುತ್ತಿದೆ.</p>.<p>ಈ ಹಿಂದೆ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಿ, ಐಎಂಐಎಸ್ ವೆಬ್ಸೈಟ್ನಲ್ಲಿ ಮಾಹಿತಿ ಸಲ್ಲಿಸಿದ ತಕ್ಷಣಕ್ಕೆ ವರದಿಯ ಪ್ರಮಾಣ ಪತ್ರ ಪಡೆಯಬಹುದಾಗಿತ್ತು. ಆದರೆ, ಕಳೆದ ಆಗಸ್ಟ್ 16ರಿಂದ ಈ ವೆಬ್ಸೈಟ್ ಬದಲಾಗಿ ಜಲ ಜೀವನ್ ಮಿಷನ್ ಯೋಜನೆಯ ನೀರಿನ ಗುಣಮಟ್ಟ, ನಿರ್ವಹಣೆ, ಮಾಹಿತಿ, ತಂತ್ರಜ್ಞಾನ (ಡಬ್ಲ್ಯೂಕ್ಯೂಎಂಐಎಸ್)<br />ವೆಬ್ಸೈಟ್ ಮೂಲಕ ನೀರಿನ ಶುದ್ಧೀಕರಣದ ವರದಿ ನೀಡಲಾಗುತ್ತಿದೆ. ಇದರ ಮೂಲಕ ಎಲ್ಲಾ ಕೆಲಸಗಳು ನಡೆಯುತ್ತಿವೆ.</p>.<p>ಆದರೆ, ನೂತನ ವೆಬ್ಸೈಟ್ ಇನ್ನೂ ಸಮರ್ಪಕವಾಗಿ ಬಳಕೆಗೆ ಲಭ್ಯವಾಗುತ್ತಿಲ್ಲ. ಇದರಲ್ಲಿ ಅಗತ್ಯ ಮಾಹಿತಿ ಸಲ್ಲಿಸಲು ಆಗದೆ ಪ್ರಯೋಗಾಲಯದ ಸಿಬ್ಬಂದಿ ಪರದಾಡುತ್ತಿದ್ದಾರೆ.ಕೊಳವೆ ಬಾವಿಗಳ ಗುಣಮಟ್ಟ ಪರಿಶೀಲನೆ ನಡೆಸಿದರೂ, ಪ್ರಮಾಣ ಪತ್ರ ನೀಡಲು ಆಗುತ್ತಿಲ್ಲ. ವೆಬ್ಸೈಟ್ನಲ್ಲಿ ಸರ್ವರ್ ಬ್ಯುಸಿ ಎಂದು ತೋರಿಸುತ್ತಿದ್ದು, ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ.</p>.<p>ಜಿಲ್ಲೆಯಾದ್ಯಂತ ಪ್ರತಿ ನಿತ್ಯ ಸುಮಾರು 50 ನೀರಿನ ಮೂಲಗಳ ಗುಣಮಟ್ಟ ಪರೀಕ್ಷೆ ನಡೆಯುತ್ತಿದೆ. ಹಳೆಯ ವಿಧಾನದಂತೆ ಕೆಲಸ ನಡೆಯುತ್ತಿಲ್ಲ. ಹೊಸ<br />ವೆಬ್ಸೈಟ್ನಲ್ಲಿ ಪದೇ ಪದೇ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಈ ಹಿಂದಿನ ಮಾಹಿತಿಯೂ<br />ವೆಬ್ಸೈಟ್ನಲ್ಲಿ ಲಭ್ಯವಾಗುತ್ತಿಲ್ಲ. ಹೀಗಾಗಿ ತುಂಬಾ<br />ಜನರಿಗೆ ಗುಣಮಟ್ಟ ಪರೀಕ್ಷೆಯ ಪ್ರಮಾಣ ಪತ್ರ ನೀಡಲು ಆಗುತ್ತಿಲ್ಲ ಎಂದು ಪ್ರಯೋಗಾಲಯದ ಸಿಬ್ಬಂದಿಯೊಬ್ಬರು ತಮ್ಮ ಅಳಲು ತೋಡಿಕೊಂಡರು.</p>.<p>ವರದಿ ನೀಡುವಂತೆ ಪ್ರತಿ ನಿತ್ಯ ಸಾರ್ವಜನಿಕರು ಪ್ರಯೋಗಾಲಯಕ್ಕೆ ಅಲೆಯುವ ಕೆಲಸ ಮಾಡುತ್ತಿದ್ದಾರೆ. ಕೆಲವು ಕಡೆಗಳಲ್ಲಿ<br />ನೀರಿನ ಪರೀಕ್ಷೆ ಮಾಡದಿರುವ ಕೊಳವೆ ಬಾವಿಗಳಿಂದ ಜನರಿಗೆ ನೀರು ಪೂರೈಸುವ<br />ಕೆಲಸವಾಗುತ್ತಿದೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ವರದಿ ನೀಡುವ ಕೆಲಸಕ್ಕೆ ವೇಗ ಕೊಡಬೇಕು ಎಂದು ಜಿ.ಪಂ ಕಚೇರಿಗೆ ಭೇಟಿ ನೀಡಿದ್ದ ರೈತ ಬಸವರಾಜಪ್ಪ ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತುಮಕೂರು: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಿಂದ ಆರಂಭಿಸಿರುವ ನೀರು ಪರೀಕ್ಷಾ ಪ್ರಯೋಗಾಲಯಗಳಲ್ಲಿ ಕುಡಿಯುವ ನೀರಿನ ಮೂಲಗಳ ಗುಣಮಟ್ಟ ಪರೀಕ್ಷೆ ನಡೆಸಿ, ವರದಿ ನೀಡುವ ಕೆಲಸ ಕೆಲ ದಿನಗಳಿಂದ ಸ್ಥಗಿತಗೊಂಡಿದೆ.</p>.<p>ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಆವರಣ, ತಿಪಟೂರು ಮತ್ತು ಮಧುಗಿರಿ ಪಟ್ಟಣದಲ್ಲಿ ಪ್ರಯೋಗಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಕೊರೆಸಿದ ಕೊಳವೆ ಬಾವಿಗಳ ನೀರಿನ ಗುಣಮಟ್ಟವನ್ನು ಈ ಪ್ರಯೋಗಾಲಯಗಳಲ್ಲಿ ಪರೀಕ್ಷೆ ಮಾಡಲಾಗುತ್ತದೆ. ಆದರೆ ಈಗ ಈ ಕೆಲಸ ಅರ್ಧಂಬರ್ಧ ನಡೆಯುತ್ತಿದೆ.</p>.<p>ಈ ಹಿಂದೆ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಿ, ಐಎಂಐಎಸ್ ವೆಬ್ಸೈಟ್ನಲ್ಲಿ ಮಾಹಿತಿ ಸಲ್ಲಿಸಿದ ತಕ್ಷಣಕ್ಕೆ ವರದಿಯ ಪ್ರಮಾಣ ಪತ್ರ ಪಡೆಯಬಹುದಾಗಿತ್ತು. ಆದರೆ, ಕಳೆದ ಆಗಸ್ಟ್ 16ರಿಂದ ಈ ವೆಬ್ಸೈಟ್ ಬದಲಾಗಿ ಜಲ ಜೀವನ್ ಮಿಷನ್ ಯೋಜನೆಯ ನೀರಿನ ಗುಣಮಟ್ಟ, ನಿರ್ವಹಣೆ, ಮಾಹಿತಿ, ತಂತ್ರಜ್ಞಾನ (ಡಬ್ಲ್ಯೂಕ್ಯೂಎಂಐಎಸ್)<br />ವೆಬ್ಸೈಟ್ ಮೂಲಕ ನೀರಿನ ಶುದ್ಧೀಕರಣದ ವರದಿ ನೀಡಲಾಗುತ್ತಿದೆ. ಇದರ ಮೂಲಕ ಎಲ್ಲಾ ಕೆಲಸಗಳು ನಡೆಯುತ್ತಿವೆ.</p>.<p>ಆದರೆ, ನೂತನ ವೆಬ್ಸೈಟ್ ಇನ್ನೂ ಸಮರ್ಪಕವಾಗಿ ಬಳಕೆಗೆ ಲಭ್ಯವಾಗುತ್ತಿಲ್ಲ. ಇದರಲ್ಲಿ ಅಗತ್ಯ ಮಾಹಿತಿ ಸಲ್ಲಿಸಲು ಆಗದೆ ಪ್ರಯೋಗಾಲಯದ ಸಿಬ್ಬಂದಿ ಪರದಾಡುತ್ತಿದ್ದಾರೆ.ಕೊಳವೆ ಬಾವಿಗಳ ಗುಣಮಟ್ಟ ಪರಿಶೀಲನೆ ನಡೆಸಿದರೂ, ಪ್ರಮಾಣ ಪತ್ರ ನೀಡಲು ಆಗುತ್ತಿಲ್ಲ. ವೆಬ್ಸೈಟ್ನಲ್ಲಿ ಸರ್ವರ್ ಬ್ಯುಸಿ ಎಂದು ತೋರಿಸುತ್ತಿದ್ದು, ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ.</p>.<p>ಜಿಲ್ಲೆಯಾದ್ಯಂತ ಪ್ರತಿ ನಿತ್ಯ ಸುಮಾರು 50 ನೀರಿನ ಮೂಲಗಳ ಗುಣಮಟ್ಟ ಪರೀಕ್ಷೆ ನಡೆಯುತ್ತಿದೆ. ಹಳೆಯ ವಿಧಾನದಂತೆ ಕೆಲಸ ನಡೆಯುತ್ತಿಲ್ಲ. ಹೊಸ<br />ವೆಬ್ಸೈಟ್ನಲ್ಲಿ ಪದೇ ಪದೇ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಈ ಹಿಂದಿನ ಮಾಹಿತಿಯೂ<br />ವೆಬ್ಸೈಟ್ನಲ್ಲಿ ಲಭ್ಯವಾಗುತ್ತಿಲ್ಲ. ಹೀಗಾಗಿ ತುಂಬಾ<br />ಜನರಿಗೆ ಗುಣಮಟ್ಟ ಪರೀಕ್ಷೆಯ ಪ್ರಮಾಣ ಪತ್ರ ನೀಡಲು ಆಗುತ್ತಿಲ್ಲ ಎಂದು ಪ್ರಯೋಗಾಲಯದ ಸಿಬ್ಬಂದಿಯೊಬ್ಬರು ತಮ್ಮ ಅಳಲು ತೋಡಿಕೊಂಡರು.</p>.<p>ವರದಿ ನೀಡುವಂತೆ ಪ್ರತಿ ನಿತ್ಯ ಸಾರ್ವಜನಿಕರು ಪ್ರಯೋಗಾಲಯಕ್ಕೆ ಅಲೆಯುವ ಕೆಲಸ ಮಾಡುತ್ತಿದ್ದಾರೆ. ಕೆಲವು ಕಡೆಗಳಲ್ಲಿ<br />ನೀರಿನ ಪರೀಕ್ಷೆ ಮಾಡದಿರುವ ಕೊಳವೆ ಬಾವಿಗಳಿಂದ ಜನರಿಗೆ ನೀರು ಪೂರೈಸುವ<br />ಕೆಲಸವಾಗುತ್ತಿದೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ವರದಿ ನೀಡುವ ಕೆಲಸಕ್ಕೆ ವೇಗ ಕೊಡಬೇಕು ಎಂದು ಜಿ.ಪಂ ಕಚೇರಿಗೆ ಭೇಟಿ ನೀಡಿದ್ದ ರೈತ ಬಸವರಾಜಪ್ಪ ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>