<p><strong>ತುಮಕೂರು:</strong> ಗಾಂಧಿ ಸಹಜ ಬೇಸಾಯ ಶಾಲೆಯ ನೇತೃತ್ವದಲ್ಲಿ ಮಧುಗಿರಿ ತಾಲ್ಲೂಕಿನ ರಂಗಾಪುರ, ಕವಣದಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಾನಯನ ಪ್ರದೇಶ ಅಭಿವೃದ್ಧಿಗೆ ಚಾಲನೆ ನೀಡಲಾಯಿತು.</p>.<p>ರಂಗಾಪುರ ಪಂಚಾಯಿತಿಯ ಬೋರಾಗುಂಟೆ, ಗಿಡದಾಗಲಹಳ್ಳಿ, ರಂಗನಹಳ್ಳಿ ವ್ಯಾಪ್ತಿಯ ರೈತರ ಹೊಲ, ಗದ್ದೆ, ತೋಟಗಳನ್ನು ವೀಕ್ಷಿಸಿದ ಸಹಜ ಕೃಷಿ ವಿಜ್ಞಾನಿ ಎಚ್.ಮಂಜುನಾಥ್, ಬೆಳೆ ವಿನ್ಯಾಸ ಮಾಡಿಕೊಟ್ಟರು.</p>.<p>ಜನರು ಸಾಮೂಹಿಕವಾಗಿ ಪಾಲ್ಗೊಂಡು ಗೋಮಾಳ, ಕಾಡು, ತೊರೆ, ಹಳ್ಳ ಕೊಳ್ಳ, ಕೃಷಿ ಭೂಮಿ ಸರಿಮಾಡಿಕೊಳ್ಳುವ ಮೂಲಕ ಅಂತರ್ಜಲ ಸಂರಕ್ಷಿಸಲು ಶಾಶ್ವತ ಪರಿ<br />ಹಾರ ಕಂಡುಕೊಳ್ಳಬೇಕು. ಜಲಾನಯನ ಪ್ರದೇಶವನ್ನು ಸಂಪೂರ್ಣ ಚಿಕಿತ್ಸೆ ಮಾಡಲು ಶ್ರಮದಾನ ಮಾಡಬೇಕು ಎಂದು ಅವರು ಸಲಹೆ ನೀಡಿದರು.</p>.<p>ಗೋಮಾಳ, ದೇವರಕಾಡು, ಗುಂಡು<br />ತೋಪು, ಕಟ್ಟೆಗಳು ಕುರಿ, ಮೇಕೆ, ನರಿ, ನವಿಲು, ತೋಳ, ಮೊಲಕ್ಕೆ ಆಹಾರ ಒದಗಿಸುತ್ತವೆ. ಗೋಮಾಳದಲ್ಲಿ ಬೆಳೆಯುವ ಹುಲ್ಲು 3ರಿಂದ 4 ಅಡಿ ಉದ್ದ ಬೇರು ಬಿಡುತ್ತದೆ. ಇದರಿಂದ ಮಳೆ ನೀರು ಸರಾಗವಾಗಿ ಭೂಮಿಗೆ ಇಂಗುತ್ತದೆ. ಒಂದು ಎಕರೆಗೆ 30 ಲಕ್ಷ ಲೀಟರ್ ನೀರು ಇಂಗಿಸುವ ಸಾಮರ್ಥ್ಯ ಹುಲ್ಲಿಗಿದೆ. ಹುಲ್ಲು ಬೆಳೆಸಿದರೆ ಅಂತರ್ಜಲದ ಮಟ್ಟ ಹೆಚ್ಚುತ್ತದೆ ಎಂದು ಹೇಳಿದರು.</p>.<p>600ರಿಂದ 700 ಮಿ.ಮೀ ಮಳೆಯಾಗುವ ಈ ಪ್ರದೇಶದಲ್ಲಿ ಮಳೆ ನೀರು ಹಿಡಿದಿಟ್ಟುಕೊಳ್ಳಬೇಕು. ಮಣ್ಣಿನ ಕಾರ್ಬನ್ ಮಟ್ಟ ಹೆಚ್ಚಿಸಿದರೆ ಆಗ ಹಳ್ಳಿಗಳು ಸುಭಿಕ್ಷವಾಗುತ್ತವೆ ಎಂದರು.</p>.<p>ತುಮಕೂರು ವಿಜ್ಞಾನ ಕೇಂದ್ರದ ಅಧ್ಯಕ್ಷ ಬಿ.ಮರುಳಯ್ಯ, ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ಗಾಂಧಿ ಸಹಜ ಬೇಸಾಯ ಶಾಲೆಯ ನೇತೃತ್ವದಲ್ಲಿ ಮಧುಗಿರಿ ತಾಲ್ಲೂಕಿನ ರಂಗಾಪುರ, ಕವಣದಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಾನಯನ ಪ್ರದೇಶ ಅಭಿವೃದ್ಧಿಗೆ ಚಾಲನೆ ನೀಡಲಾಯಿತು.</p>.<p>ರಂಗಾಪುರ ಪಂಚಾಯಿತಿಯ ಬೋರಾಗುಂಟೆ, ಗಿಡದಾಗಲಹಳ್ಳಿ, ರಂಗನಹಳ್ಳಿ ವ್ಯಾಪ್ತಿಯ ರೈತರ ಹೊಲ, ಗದ್ದೆ, ತೋಟಗಳನ್ನು ವೀಕ್ಷಿಸಿದ ಸಹಜ ಕೃಷಿ ವಿಜ್ಞಾನಿ ಎಚ್.ಮಂಜುನಾಥ್, ಬೆಳೆ ವಿನ್ಯಾಸ ಮಾಡಿಕೊಟ್ಟರು.</p>.<p>ಜನರು ಸಾಮೂಹಿಕವಾಗಿ ಪಾಲ್ಗೊಂಡು ಗೋಮಾಳ, ಕಾಡು, ತೊರೆ, ಹಳ್ಳ ಕೊಳ್ಳ, ಕೃಷಿ ಭೂಮಿ ಸರಿಮಾಡಿಕೊಳ್ಳುವ ಮೂಲಕ ಅಂತರ್ಜಲ ಸಂರಕ್ಷಿಸಲು ಶಾಶ್ವತ ಪರಿ<br />ಹಾರ ಕಂಡುಕೊಳ್ಳಬೇಕು. ಜಲಾನಯನ ಪ್ರದೇಶವನ್ನು ಸಂಪೂರ್ಣ ಚಿಕಿತ್ಸೆ ಮಾಡಲು ಶ್ರಮದಾನ ಮಾಡಬೇಕು ಎಂದು ಅವರು ಸಲಹೆ ನೀಡಿದರು.</p>.<p>ಗೋಮಾಳ, ದೇವರಕಾಡು, ಗುಂಡು<br />ತೋಪು, ಕಟ್ಟೆಗಳು ಕುರಿ, ಮೇಕೆ, ನರಿ, ನವಿಲು, ತೋಳ, ಮೊಲಕ್ಕೆ ಆಹಾರ ಒದಗಿಸುತ್ತವೆ. ಗೋಮಾಳದಲ್ಲಿ ಬೆಳೆಯುವ ಹುಲ್ಲು 3ರಿಂದ 4 ಅಡಿ ಉದ್ದ ಬೇರು ಬಿಡುತ್ತದೆ. ಇದರಿಂದ ಮಳೆ ನೀರು ಸರಾಗವಾಗಿ ಭೂಮಿಗೆ ಇಂಗುತ್ತದೆ. ಒಂದು ಎಕರೆಗೆ 30 ಲಕ್ಷ ಲೀಟರ್ ನೀರು ಇಂಗಿಸುವ ಸಾಮರ್ಥ್ಯ ಹುಲ್ಲಿಗಿದೆ. ಹುಲ್ಲು ಬೆಳೆಸಿದರೆ ಅಂತರ್ಜಲದ ಮಟ್ಟ ಹೆಚ್ಚುತ್ತದೆ ಎಂದು ಹೇಳಿದರು.</p>.<p>600ರಿಂದ 700 ಮಿ.ಮೀ ಮಳೆಯಾಗುವ ಈ ಪ್ರದೇಶದಲ್ಲಿ ಮಳೆ ನೀರು ಹಿಡಿದಿಟ್ಟುಕೊಳ್ಳಬೇಕು. ಮಣ್ಣಿನ ಕಾರ್ಬನ್ ಮಟ್ಟ ಹೆಚ್ಚಿಸಿದರೆ ಆಗ ಹಳ್ಳಿಗಳು ಸುಭಿಕ್ಷವಾಗುತ್ತವೆ ಎಂದರು.</p>.<p>ತುಮಕೂರು ವಿಜ್ಞಾನ ಕೇಂದ್ರದ ಅಧ್ಯಕ್ಷ ಬಿ.ಮರುಳಯ್ಯ, ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>