ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಪ.ಪಂ ನಿರೀಕ್ಷೆಯಲ್ಲಿ ವೈ.ಎನ್.ಹೊಸಕೋಟೆ

Published : 20 ನವೆಂಬರ್ 2023, 7:31 IST
Last Updated : 20 ನವೆಂಬರ್ 2023, 7:31 IST
ಫಾಲೋ ಮಾಡಿ
Comments
ಪಟ್ಟಣ ಪಂಚಾಯಿತಿ ನಿರೀಕ್ಷೆಯಲ್ಲಿ ವೈ.ಎನ್.ಹೊಸಕೋಟೆ ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿ
ಪಟ್ಟಣ ಪಂಚಾಯಿತಿ ನಿರೀಕ್ಷೆಯಲ್ಲಿ ವೈ.ಎನ್.ಹೊಸಕೋಟೆ ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿ
ಚುರುಕುಪಡೆಯದ ಕಡತದ ವೇಗ
2012-13ನೇ ಸಾಲಿನಲ್ಲಿ 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗಳನ್ನಾಗಿಸಲು ಸರ್ಕಾರ ಆದೇಶ ಹೊರಡಿಸಿತು. ಅದರನ್ವಯ ಯಾವುದೇ ತೊಡಕಿಲ್ಲದ ರೀತಿಯಲ್ಲಿ ಅರ್ಜಿ ಸಲ್ಲಿಸಿಕೆಯಾಗಿದೆ. ನಂತರದ ವಿಧಾನಸಭೆಯ ಕಲಾಪ ಚರ್ಚೆಯ ಮಾನದಂಡ ಜನಸಂಖ್ಯೆಯನ್ನು 15 ಸಾವಿರಕ್ಕೆ ನಿಗದಿಪಡಿಸಿದ್ದು ತೊಡಕಾಗಿ ಕಡತವು ನಗರಾಭಿವೃದ್ಧಿ ಇಲಾಖೆಗೆ ತಲುಪಿ ನಿಂತಿದೆ.
ಆರ್ಥಿಕ ಚಟುವಟಿಕೆಗೆ ಪೂರಕ
ಪಟ್ಟಣವು ಇಂದಿಗೂ ಗ್ರಾಮ ಪಂಚಾಯಿತಿ ಸ್ಥಾನಮಾನ ಹೊಂದಿರುವುದರಿಂದ ನೋಂದಣಿ ಇಲಾಖೆಯನುಸಾರ ಸ್ಥಳೀಯ ಆಸ್ತಿ ಮೌಲ್ಯ ಕಡಿಮೆ ಇದೆ. ಸಣ್ಣ ಕೈಗಾರಿಕೆ ಪವರ್ ಲೂಮ್ಸ್‌ಗಳಂತಹ ಚಟುವಟಿಕೆಗಳನ್ನು ಕೈಗೊಳ್ಳುವ ಸಲುವಾಗಿ ಬ್ಯಾಂಕ್ ಇನ್ನಿತರೆ ಆರ್ಥಿಕ ಸಂಸ್ಥೆಗಳಲ್ಲಿ ಸಾಲ ಪಡೆಯುವ ವೇಳೆ ಸಮಸ್ಯೆಯಾಗುತ್ತಿದೆ. ಪಟ್ಟಣ ಪಂಚಾಯಿತಿಯಾದರೆ ಸ್ವತ್ತುಗಳ ಮೌಲ್ಯವೇರಿ ಸಾಲ ಸೌಲಭ್ಯಗಳು ಪ್ರಮಾಣ ಹೆಚ್ಚಾಗಿ ಆರ್ಥಿಕ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ. ಟಿ.ಉಮೇಶ್ ಮುಖಂಡರು ವೈ.ಎನ್.ಹೊಸಕೋಟೆ ಹೆಚ್ಚಿನ ಅನುದಾನ ಅಗತ್ಯ ಗ್ರಾಮ ಪಂಚಾಯಿತಿಗೆ ನೀಡುತ್ತಿರುವ ಸರ್ಕಾರದ ಅನುದಾನ ಸಾಕಾಗುತ್ತಿಲ್ಲ. ದೊರೆಯುವ ಸಂಪನ್ಮೂಲಗಳಿಂದ ಪಟ್ಟಣದ ಕುಡಿಯುವ ನೀರು ಇನ್ನಿತರೆ ಮೂಲ ಸೌಕರ್ಯಗಳ ಸಮಸ್ಯೆಗಳ ನಿವಾರಣೆ ಸಾಧ್ಯವಾಗುತ್ತಿಲ್ಲ. ಪಟ್ಟಣ ಬದಲಾಗಬೇಕಾದರೆ ಹೆಚ್ಚಿನ ಆದಾಯ ಮತ್ತು ಅನುದಾನ ಗಳಿಸುವುದು ಅನಿವಾರ್ಯ. ಜಿ.ಬಿ.ಸತ್ಯನಾರಾಯಣ ಮುಖಂಡರು ವೈ.ಎನ್.ಹೊಸಕೋಟೆ ಕಸ ತುಂಬಿದ ಚರಂಡಿ ಹೆಚ್ಚಾಗುತ್ತಿರುವ ಜನಸಂಖ್ಯೆಗನುಗುಣವಾಗಿ ಮನೆ ಲೇಔಟ್‌ಗಳು ನಿರ್ಮಾಣವಾಗುತ್ತಿವೆ. ರಸ್ತೆ ಬೀದಿದೀಪ ಮತ್ತು ಚರಂಡಿಗಳ ಸಮಸ್ಯೆ ಕಾಡುತ್ತಿದೆ. ಎಲ್ಲೆಡೆ ತೆರೆದ ಚರಂಡಿ ವ್ಯವಸ್ಥೆ ಇರುವುದರಿಂದ ಕಸ ತುಂಬಿ ಕೊಳಚೆ ಶೇಖರಣೆಗೊಂಡು ಕ್ರಿಮಿಕೀಟಗಳ ಹೆಚ್ಚಾಗಿ ರೋಗಗಳಿಗೆ ಕಾರಣವಾಗುತ್ತಿದೆ. ಪಟ್ಟಣ ಪಂಚಾಯಿತಿಯಾದರೆ ಒಳ ಚರಂಡಿ ವ್ಯವಸ್ಥೆ ನಿರ್ಮಾಣಕ್ಕೆ ಅವಕಾಶವಿದೆ. ವೆಂಕಟೇಶ್ ಮುಖಂಡರು ವೈ.ಎನ್.ಹೊಸಕೋಟೆ ಸಮಸ್ಯೆಗಳಿಗಿಲ್ಲ ಪರಿಹಾರ ಪಟ್ಟಣದಲ್ಲಿ ಒಟ್ಟು 9 ವಾರ್ಡ್‌ಗಳಿದ್ದು ಪ್ರತಿ ವಾರ್ಡ್‌ನಿಂದ 4-5 ಜನ ಸದಸ್ಯರಿದ್ದಾರೆ. ವಾರ್ಡ್‌ನಲ್ಲಿ ಸಮಸ್ಯೆ ಉದ್ಭವಿಸಿ ಸದಸ್ಯರ ಬಳಿ ಹೋದಾಗ ರಾಜಕೀಯ ಜಾತಿ ವೈಯುಕ್ತಿಕ ಸಮಸ್ಯೆಗಳ ಉದ್ದೇಶದಿಂದ ಒಬ್ಬರ ಮೇಲೆ ಮತ್ತೊಬ್ಬರು ಹೇಳಿ ನುಣುಚಿಕೊಳ್ಳುತ್ತಾರೆ. ಸಮಸ್ಯೆ ಬಗೆ ಹರಿಯುವುದಿಲ್ಲ. ಪಟ್ಟಣ ಪಂಚಾಯಿತಿಯಾದರೆ ಒಂದು ವಾರ್ಡ್‌ಗೆ ಒಬ್ಬನೇ ಸದಸ್ಯ ಇರುವುದರಿಂದ ನುಣಿಚಿಕೊಳ್ಳಲು ಸಾಧ್ಯವಿಲ್ಲದೆ ಸಮಸ್ಯೆಗಳ ನಿವಾರಣೆಗೆ ಒತ್ತು ನೀಡಲೇಬೇಕಾಗುತ್ತದೆ. ನೂರ್ ಮಹಮ್ಮದ್ ವ್ಯಾಪಾರಿ ವೈ.ಎನ್.ಹೊಸಕೋಟೆ ಜನಪ್ರತಿನಿಧಿಗಳಿಗಿಲ್ಲ ಆಸಕ್ತಿ ನಾವು ಅರ್ಜಿ ಸಲ್ಲಿಸಿದ ನಂತರ ಅರ್ಜಿ ಸಲ್ಲಿಸಿದ್ದ ಹುಳಿಯಾರು ಪಟ್ಟಣ ಪಂಚಾಯಿತಿಯಾಗುವಲ್ಲಿ ಯಶಸ್ವಿಯಾಗಿದೆ. ಅಲ್ಲಿನ ಜನಪ್ರತಿನಿಧಿಗಳ ಆಸಕ್ತಿಯು ಈ ಕಾರ್ಯದಲ್ಲಿ ಹೆಚ್ಚು ಪ್ರಭಾವ ಬೀರಿದೆ. ಅಂತಹುದೇ ಕೆಲಸ ಇಲ್ಲಿ ನಡೆಯಬೇಕು. ಲೀಲಾವತಿ ತಿಪ್ಪೇಸ್ವಾಮಿ ಗ್ರಾಮ ಪಂಚಾಯಿತಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT