ಕೆಲವು ದಿನಗಳಿಂದ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಭಾನುವಾರ ಮುಂಜಾನೆ ನಡಿಪಟ್ನ ಮೀನುಗಾರಿಕೆಗೆ ತೆರಳಿತ್ತು. ನಾಡದೋಣಿಯಲ್ಲಿದ್ದ ನಡಿಪಟ್ನ ನಿವಾಸಿಗಳಾದ ಕಿರಣ್ ರಾಜ್ ಕರ್ಕೇರ, ದೀಪಕ್ ಕರ್ಕೇರ, ಅಕ್ಷಯ್ ಕೋಟ್ಯಾನ್ ಅವರ ಸಮಯ ಪ್ರಜ್ಞೆಯಿಂದ ರಕ್ಕಸ ಗಾತ್ರದ ಅಲೆಯನ್ನು ಮೀರಿಸಿ ದೋಣಿ ಸುರಕ್ಷಿತವಾಗಿ ದಡ ಸೇರಿಸಿದ್ದಾರೆ.