<p><strong>ಉಡುಪಿ:</strong> ತೆಂಕನಿಡಿಯೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕೆಲವು ಗ್ರಾ.ಪಂ. ಸದಸ್ಯರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಗ್ರಾ.ಪಂ. ಸದಸ್ಯ ರವಿರಾಜ್ ಎಂಬುವವರು ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.</p>.<p>ಸಾಮಾನ್ಯ ಸಭೆಗೆ ಚರ್ಚೆ ನಡೆಯುವ ಮೊದಲೇ ಬಂದಿದ್ದ ಸದಸ್ಯರಾದ ವಿನೋದ್, ಮಾಲಿನಿ, ರೇಖಾ, ಪ್ರಶಾಂತ್, ನಿರ್ಮಲಾ, ಸತೀಶ್, ಗೀತಾ, ಅರುಣ್ ಮತ್ತು ಪ್ರದೀಪ್ ಅವರು, ಸಭೆ ನಿಲ್ಲಿಸುವಂತೆ ಹೇಳಿ, ತಮ್ಮ ಮೇಲೆ ಹಲ್ಲೆ ನಡೆಸಿ ನಿಂದಿಸಿರುವುದಾಗಿ ರವಿರಾಜ್ ಅವರು ದೂರಿನಲ್ಲಿ ತಿಳಿಸಿದ್ದಾರೆ.</p>.<p>ಮನೆಯಿಂದ ಕಳವು</p>.<p>ಉಡುಪಿ: ಮನೆಯಿಂದ ಬೆಲೆಬಾಳುವ ಪೀಠೋಪಕರಣಗಳು ಕಳ್ಳತನವಾಗಿರುವ ಕುರಿತು ಬೈಲಕೆರೆಯ ನವ್ಯ ಎಂಬುವವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.</p>.<p>ವಸಂತ್ ಎಂಬುವವರು ತಡರಾತ್ರಿ ತಮ್ಮ ಮನೆಯ ಬೀಗ ಮುರಿದು ಒಳ ಪ್ರವೇಶಿಸಿ, ಪೀಠೋಪಕರಣಗಳನ್ನು ಕಳವು ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.</p>.<p>ಮನೆಯಿಂದ ಚಿನ್ನ ಕಳವು</p>.<p>ಉಡುಪಿ: ಮನೆಯಿಂದ ಚಿನ್ನ ಕಳ್ಳತನವಾಗಿರುವ ಕುರಿತು ಕಕ್ಕುಂಜೆ ಗ್ರಾಮದ ಅದಯ್ಯ ಹಿರೇಮಠ ಅವರು ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.</p>.<p>ತಮ್ಮ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ 16 ಗ್ರಾಂ. ಚಿನ್ನ ಮತ್ತು ದಾಖಲೆಗಳನ್ನು ಕದ್ದಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> ತೆಂಕನಿಡಿಯೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕೆಲವು ಗ್ರಾ.ಪಂ. ಸದಸ್ಯರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಗ್ರಾ.ಪಂ. ಸದಸ್ಯ ರವಿರಾಜ್ ಎಂಬುವವರು ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.</p>.<p>ಸಾಮಾನ್ಯ ಸಭೆಗೆ ಚರ್ಚೆ ನಡೆಯುವ ಮೊದಲೇ ಬಂದಿದ್ದ ಸದಸ್ಯರಾದ ವಿನೋದ್, ಮಾಲಿನಿ, ರೇಖಾ, ಪ್ರಶಾಂತ್, ನಿರ್ಮಲಾ, ಸತೀಶ್, ಗೀತಾ, ಅರುಣ್ ಮತ್ತು ಪ್ರದೀಪ್ ಅವರು, ಸಭೆ ನಿಲ್ಲಿಸುವಂತೆ ಹೇಳಿ, ತಮ್ಮ ಮೇಲೆ ಹಲ್ಲೆ ನಡೆಸಿ ನಿಂದಿಸಿರುವುದಾಗಿ ರವಿರಾಜ್ ಅವರು ದೂರಿನಲ್ಲಿ ತಿಳಿಸಿದ್ದಾರೆ.</p>.<p>ಮನೆಯಿಂದ ಕಳವು</p>.<p>ಉಡುಪಿ: ಮನೆಯಿಂದ ಬೆಲೆಬಾಳುವ ಪೀಠೋಪಕರಣಗಳು ಕಳ್ಳತನವಾಗಿರುವ ಕುರಿತು ಬೈಲಕೆರೆಯ ನವ್ಯ ಎಂಬುವವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.</p>.<p>ವಸಂತ್ ಎಂಬುವವರು ತಡರಾತ್ರಿ ತಮ್ಮ ಮನೆಯ ಬೀಗ ಮುರಿದು ಒಳ ಪ್ರವೇಶಿಸಿ, ಪೀಠೋಪಕರಣಗಳನ್ನು ಕಳವು ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.</p>.<p>ಮನೆಯಿಂದ ಚಿನ್ನ ಕಳವು</p>.<p>ಉಡುಪಿ: ಮನೆಯಿಂದ ಚಿನ್ನ ಕಳ್ಳತನವಾಗಿರುವ ಕುರಿತು ಕಕ್ಕುಂಜೆ ಗ್ರಾಮದ ಅದಯ್ಯ ಹಿರೇಮಠ ಅವರು ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.</p>.<p>ತಮ್ಮ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ 16 ಗ್ರಾಂ. ಚಿನ್ನ ಮತ್ತು ದಾಖಲೆಗಳನ್ನು ಕದ್ದಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>