<p><strong>ಉಡುಪಿ:</strong> ನಗರಸಭೆ ವ್ಯಾಪ್ತಿಯ 7 ಕಿ.ಮೀ ಪ್ರದೇಶದಲ್ಲಿ ಆಟೊ ಓಡಿಸಬಹುದು, ಯಾವ ನಿಲ್ದಾಣಗಳಲ್ಲಿ ಬೇಕಾದರೂ ರಿಕ್ಷಾ ನಿಲ್ಲಿಸಬಹುದು ಎಂಬ ನಿಮಯವಿದ್ದರೂ ಪಾಲನೆಯಾಗುತ್ತಿಲ್ಲ ಎಂದು ಕೋರ್ಟ್ ಹಿಂಬದಿ ರಸ್ತೆಯ ರಿಕ್ಷಾ ಚಾಲಕರ ಹಾಗೂ ಮಾಲೀಕರ ಸಂಘಟನೆ ಅಧ್ಯಕ್ಷ ರಾಜೇಶ್ ಬಿ.ಶೆಟ್ಟಿ ದೂರಿದರು.</p>.<p>ನಗರದ ಕೆಲವು ಆಟೊ ನಿಲ್ದಾಣಗಳಲ್ಲಿ ಪ್ರತ್ಯೇಕ ಕಾನೂನು ರಚಿಸಿಕೊಂಡಿದ್ದಾರೆ. ಬೇರೆ ನಿಲ್ದಾಣಗಳ ಚಾಲಕರು ಆಟೊ ನಿಲ್ಲಿಸಲು ಹೋದರೆ ಕಿರುಕುಳ ನೀಡಿ ಹಲ್ಲೆ ನಡೆಸಲಾಗುತ್ತಿದೆ. ನಿಲ್ದಾಣದಿಂದ ಆಟೊ ಹೊರದಬ್ಬಲಾಗುತ್ತಿದೆ. ದೌರ್ಜನ್ಯದ ವಿರುದ್ಧ ದೂರುಗಳನ್ನು ನೀಡಿದರೂ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.</p>.<p>ಆಟೊ ಚಾಲಕರ ಸಂಘಟನೆಗಳಲ್ಲಿ ರಾಜಕೀಯ ನುಸುಳಿದ್ದು ಇಬ್ಭಾಗವಾಗಿವೆ. ರಾಜಕೀಯ ನಾಯಕರ ಅನುದಾನದಿಂದ ನಿರ್ಮಾಣವಾಗಿರುವ ರಿಕ್ಷಾ ನಿಲ್ದಾಣಗಳನ್ನು ಖಾಸಗಿ ಆಸ್ತಿಯಂತೆ ಕೆಲವರು ಉಪಯೋಗಿಸುತ್ತಿದ್ದಾರೆ. ಇದರಿಂದ ಬಡ ಆಟೊ ಚಾಲಕರಿಗೆ ಸಮಸ್ಯೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>ನಿಲ್ದಾಣಗಳಲ್ಲಿ ಹೊಸ ಸದಸ್ಯರ ನೇಮಕಾತಿಗೆ ₹ 10000 ದಿಂದ ₹ 30000ದವರೆಗೆ ಸದಸ್ಯತ್ವ ಶುಲ್ಕ ಪಡೆಯಲಾಗುತ್ತಿದೆ. ವಲಯ–1ರ ಆಟೊಗಳು ನಗರಸಭೆಯ 7 ಕಿ.ಮೀ ವ್ಯಾಪ್ತಿಯಲ್ಲಿರುವ ಎಲ್ಲ ನಿಲ್ದಾಣಗಳಲ್ಲಿ ದುಡಿಯಬಹುದು ಎಂಬ ನ್ಯಾಯಾಲಯದ ಆದೇಶವಿದ್ದರೂ ಪಾಲನೆಯಾಗುತ್ತಿಲ್ಲ. ಪ್ರಾದೇಶಿಕ ಸಾರಿಗೆ ಅಧಿಕಾರಿ ವಲಯ 1ರ ಸ್ಟಿಕ್ಕರ್ ನೀಡುವುದನ್ನು ನಿಲ್ಲಿಸಿದ್ದು, ಚಾಲಕರಿಗೆ ಸಮಸ್ಯೆಯಾಗಿದೆ ಎಂದರು.</p>.<p>ಸುದ್ದಿಗೋಷ್ಠಿಯಲ್ಲಿ ಚೆನ್ನಕೇಶವ ಭಟ್, ವಿಠಲ ಜತ್ತನ್ನ, ಸ್ಟೇನ್ಲಿ ಬಂಗೇರ, ರಾಜೇಶ್ ಸುವರ್ಣ, ಗಿರೀಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> ನಗರಸಭೆ ವ್ಯಾಪ್ತಿಯ 7 ಕಿ.ಮೀ ಪ್ರದೇಶದಲ್ಲಿ ಆಟೊ ಓಡಿಸಬಹುದು, ಯಾವ ನಿಲ್ದಾಣಗಳಲ್ಲಿ ಬೇಕಾದರೂ ರಿಕ್ಷಾ ನಿಲ್ಲಿಸಬಹುದು ಎಂಬ ನಿಮಯವಿದ್ದರೂ ಪಾಲನೆಯಾಗುತ್ತಿಲ್ಲ ಎಂದು ಕೋರ್ಟ್ ಹಿಂಬದಿ ರಸ್ತೆಯ ರಿಕ್ಷಾ ಚಾಲಕರ ಹಾಗೂ ಮಾಲೀಕರ ಸಂಘಟನೆ ಅಧ್ಯಕ್ಷ ರಾಜೇಶ್ ಬಿ.ಶೆಟ್ಟಿ ದೂರಿದರು.</p>.<p>ನಗರದ ಕೆಲವು ಆಟೊ ನಿಲ್ದಾಣಗಳಲ್ಲಿ ಪ್ರತ್ಯೇಕ ಕಾನೂನು ರಚಿಸಿಕೊಂಡಿದ್ದಾರೆ. ಬೇರೆ ನಿಲ್ದಾಣಗಳ ಚಾಲಕರು ಆಟೊ ನಿಲ್ಲಿಸಲು ಹೋದರೆ ಕಿರುಕುಳ ನೀಡಿ ಹಲ್ಲೆ ನಡೆಸಲಾಗುತ್ತಿದೆ. ನಿಲ್ದಾಣದಿಂದ ಆಟೊ ಹೊರದಬ್ಬಲಾಗುತ್ತಿದೆ. ದೌರ್ಜನ್ಯದ ವಿರುದ್ಧ ದೂರುಗಳನ್ನು ನೀಡಿದರೂ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.</p>.<p>ಆಟೊ ಚಾಲಕರ ಸಂಘಟನೆಗಳಲ್ಲಿ ರಾಜಕೀಯ ನುಸುಳಿದ್ದು ಇಬ್ಭಾಗವಾಗಿವೆ. ರಾಜಕೀಯ ನಾಯಕರ ಅನುದಾನದಿಂದ ನಿರ್ಮಾಣವಾಗಿರುವ ರಿಕ್ಷಾ ನಿಲ್ದಾಣಗಳನ್ನು ಖಾಸಗಿ ಆಸ್ತಿಯಂತೆ ಕೆಲವರು ಉಪಯೋಗಿಸುತ್ತಿದ್ದಾರೆ. ಇದರಿಂದ ಬಡ ಆಟೊ ಚಾಲಕರಿಗೆ ಸಮಸ್ಯೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>ನಿಲ್ದಾಣಗಳಲ್ಲಿ ಹೊಸ ಸದಸ್ಯರ ನೇಮಕಾತಿಗೆ ₹ 10000 ದಿಂದ ₹ 30000ದವರೆಗೆ ಸದಸ್ಯತ್ವ ಶುಲ್ಕ ಪಡೆಯಲಾಗುತ್ತಿದೆ. ವಲಯ–1ರ ಆಟೊಗಳು ನಗರಸಭೆಯ 7 ಕಿ.ಮೀ ವ್ಯಾಪ್ತಿಯಲ್ಲಿರುವ ಎಲ್ಲ ನಿಲ್ದಾಣಗಳಲ್ಲಿ ದುಡಿಯಬಹುದು ಎಂಬ ನ್ಯಾಯಾಲಯದ ಆದೇಶವಿದ್ದರೂ ಪಾಲನೆಯಾಗುತ್ತಿಲ್ಲ. ಪ್ರಾದೇಶಿಕ ಸಾರಿಗೆ ಅಧಿಕಾರಿ ವಲಯ 1ರ ಸ್ಟಿಕ್ಕರ್ ನೀಡುವುದನ್ನು ನಿಲ್ಲಿಸಿದ್ದು, ಚಾಲಕರಿಗೆ ಸಮಸ್ಯೆಯಾಗಿದೆ ಎಂದರು.</p>.<p>ಸುದ್ದಿಗೋಷ್ಠಿಯಲ್ಲಿ ಚೆನ್ನಕೇಶವ ಭಟ್, ವಿಠಲ ಜತ್ತನ್ನ, ಸ್ಟೇನ್ಲಿ ಬಂಗೇರ, ರಾಜೇಶ್ ಸುವರ್ಣ, ಗಿರೀಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>