<p><strong>ಉಡುಪಿ</strong>: ನಗರದ ಭುಜಂಗ ಪಾರ್ಕ್ನಲ್ಲಿ ಅನುಮತಿ ಇಲ್ಲದೆ ಮರಗಳನ್ನು ಕಡಿದಿದ್ದಕ್ಕೆ ಗುತ್ತಿಗೆದಾರನಿಗೆ ನಗರಸಭೆ ಪೌರಾಯುಕ್ತರು ಮಂಗಳವಾರ ₹25 ಸಾವಿರ ದಂಡ ವಿಧಿಸಿದ್ದಾರೆ.</p>.<p>ಪಾರ್ಕ್ನಲ್ಲಿ ಮರ ಕಡಿಯುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಮರಗಳು ಅಪಾಯಕಾರಿಯಾಗಿವೆ ಎಂಬ ಕಾರಣಕ್ಕೆ ಅವುಗಳನ್ನು ಕಡಿಯಲು ಗುತ್ತಿಗೆದಾರ ಸುರೇಶ್ ಸೂಚಿಸಿರುವುದಾಗಿ ಕಾರ್ಮಿಕರು ತಿಳಿಸಿದ್ದರು.</p>.<p>ಬಳಿಕ ಸಾರ್ವಜನಿಕರು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೌರಾಯುಕ್ತ ರಾಯಪ್ಪ ಗುತ್ತಿಗೆದಾರನನ್ನು ತರಾಟೆಗೆ ತೆಗೆದುಕೊಂಡು, ದಂಡ ವಿಧಿಸಿದರು.</p>.<p>‘ಗಾಳಿ ಮಳೆಗೆ ಮರ ಬಿದ್ದು ಅಪಾಯವಾಗುವ ಸಾಧ್ಯತೆ ಇದೆ ಎಂದು ಯಾವುದೇ ಅನುಮತಿ ಪಡೆಯದೆ ಮರ ಕಡಿದಿದ್ದಾರೆ. ಗುತ್ತಿಗೆದಾರನಿಗೆ ದಂಡ ಹಾಕಿ, ಮರ ಕಡಿದ ಜಾಗದಲ್ಲಿ ಐದು ಸಸಿಗಳನ್ನು ನೆಡಿಸಿದ್ದೇನೆ’ ಎಂದು ಪೌರಾಯುಕ್ತ ರಾಯಪ್ಪ ಅವರು ತಿಳಿಸಿದ್ದಾರೆ.</p>.<p>ಪಾರ್ಕ್ನಲ್ಲಿರುವ ವೇದಿಕೆಯ ಸುತ್ತಲು ಮರಗಳಿದ್ದು, ಬಯಲು ರಂಗಮಂದಿರದಂತಾಗಿತ್ತು. ಈಗ ಮರಗಳನ್ನು ಕಡಿದು ನೆರಳೇ ಇಲ್ಲದಂತಾಗಿದೆ. ಪಾರ್ಕ್ನ ನಿರ್ವಹಣೆ ಸರಿ ಇಲ್ಲ. ಮಳೆ ಬರುವಾಗಲೂ ಸ್ಪ್ರಿಂಕ್ಲರ್ ಮೂಲಕ ಹುಲ್ಲುಗಳಿಗೆ ನೀರು ಬಿಡುತ್ತಾರೆ ಎಂದು ನಾಗರಿಕರು ಆರೋಪಿಸಿದ್ದಾರೆ.</p>.<p>ನಗರಸಭೆಯ ಪರಿಸರ ಎಂಜಿನಿಯರ್ ಸ್ನೇಹಾ ಕೆ.ಎಸ್. ಜೊತೆಗಿದ್ದರು. ಸ್ಥಳಕ್ಕೆ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿಗಳು ಕೂಡ ಭೇಟಿ ನೀಡಿ ಪರಿಶೀಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ</strong>: ನಗರದ ಭುಜಂಗ ಪಾರ್ಕ್ನಲ್ಲಿ ಅನುಮತಿ ಇಲ್ಲದೆ ಮರಗಳನ್ನು ಕಡಿದಿದ್ದಕ್ಕೆ ಗುತ್ತಿಗೆದಾರನಿಗೆ ನಗರಸಭೆ ಪೌರಾಯುಕ್ತರು ಮಂಗಳವಾರ ₹25 ಸಾವಿರ ದಂಡ ವಿಧಿಸಿದ್ದಾರೆ.</p>.<p>ಪಾರ್ಕ್ನಲ್ಲಿ ಮರ ಕಡಿಯುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಮರಗಳು ಅಪಾಯಕಾರಿಯಾಗಿವೆ ಎಂಬ ಕಾರಣಕ್ಕೆ ಅವುಗಳನ್ನು ಕಡಿಯಲು ಗುತ್ತಿಗೆದಾರ ಸುರೇಶ್ ಸೂಚಿಸಿರುವುದಾಗಿ ಕಾರ್ಮಿಕರು ತಿಳಿಸಿದ್ದರು.</p>.<p>ಬಳಿಕ ಸಾರ್ವಜನಿಕರು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೌರಾಯುಕ್ತ ರಾಯಪ್ಪ ಗುತ್ತಿಗೆದಾರನನ್ನು ತರಾಟೆಗೆ ತೆಗೆದುಕೊಂಡು, ದಂಡ ವಿಧಿಸಿದರು.</p>.<p>‘ಗಾಳಿ ಮಳೆಗೆ ಮರ ಬಿದ್ದು ಅಪಾಯವಾಗುವ ಸಾಧ್ಯತೆ ಇದೆ ಎಂದು ಯಾವುದೇ ಅನುಮತಿ ಪಡೆಯದೆ ಮರ ಕಡಿದಿದ್ದಾರೆ. ಗುತ್ತಿಗೆದಾರನಿಗೆ ದಂಡ ಹಾಕಿ, ಮರ ಕಡಿದ ಜಾಗದಲ್ಲಿ ಐದು ಸಸಿಗಳನ್ನು ನೆಡಿಸಿದ್ದೇನೆ’ ಎಂದು ಪೌರಾಯುಕ್ತ ರಾಯಪ್ಪ ಅವರು ತಿಳಿಸಿದ್ದಾರೆ.</p>.<p>ಪಾರ್ಕ್ನಲ್ಲಿರುವ ವೇದಿಕೆಯ ಸುತ್ತಲು ಮರಗಳಿದ್ದು, ಬಯಲು ರಂಗಮಂದಿರದಂತಾಗಿತ್ತು. ಈಗ ಮರಗಳನ್ನು ಕಡಿದು ನೆರಳೇ ಇಲ್ಲದಂತಾಗಿದೆ. ಪಾರ್ಕ್ನ ನಿರ್ವಹಣೆ ಸರಿ ಇಲ್ಲ. ಮಳೆ ಬರುವಾಗಲೂ ಸ್ಪ್ರಿಂಕ್ಲರ್ ಮೂಲಕ ಹುಲ್ಲುಗಳಿಗೆ ನೀರು ಬಿಡುತ್ತಾರೆ ಎಂದು ನಾಗರಿಕರು ಆರೋಪಿಸಿದ್ದಾರೆ.</p>.<p>ನಗರಸಭೆಯ ಪರಿಸರ ಎಂಜಿನಿಯರ್ ಸ್ನೇಹಾ ಕೆ.ಎಸ್. ಜೊತೆಗಿದ್ದರು. ಸ್ಥಳಕ್ಕೆ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿಗಳು ಕೂಡ ಭೇಟಿ ನೀಡಿ ಪರಿಶೀಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>