ಉಡುಪಿ: ಪುತ್ತಿಗೆ ಶ್ರೀಗಳ ಷಷ್ಟ್ಯಬ್ಧಿ ಪ್ರಯುಕ್ತ ಮಠದ ವಿದೇಶಿ ಶಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವಿದ್ಯಾಪೀಠದ ಹಳೆಯ ವಿದ್ಯಾರ್ಥಿಗಳು ₹ 1.25 ಕೋಟಿ ವೆಚ್ಚದ ವಾಹನವನ್ನು ಮಠದ ಸುಗುಣೇಂದ್ರ ತೀರ್ಥ ಶ್ರೀಗಳಿಗೆ ಗುರುವಾರ ಸಮರ್ಪಿಸಿದರು.
ಈ ಸಂದರ್ಭ ಪುತ್ತಿಗೆ ನರಸಿಂಹ ದೇವರ ಸನ್ನಿಧಾನದಲ್ಲಿ ಭೀಮನಕಟ್ಟೆ ಮಠಾಧೀಶರಾದ ರಘುಮಾನ್ಯ ತೀರ್ಥರರು ನಡೆಸಿದ್ದ ಮೂವತ್ತೆರಡು ಲಕ್ಷ ಲಕ್ಷ್ಮೀ ನರಸಿಂಹ ಮಂತ್ರ ಜಪದ ಅಂಗವಾಗಿ ಹೋಮ ನಡೆಸಲಾಯಿತು.
ಈ ಸಂದರ್ಭ ಪುತ್ತಿಗೆ ಶ್ರೀಗಳು ಮಾತನಾಡಿ, ‘ಮುಂದಿನ ನಾಲ್ಕನೇ ಪರ್ಯಾಯದ ನಿಮಿತ್ತ ನೀಡಿರುವ ವಾಹನವು ವಿಠ್ಠಲದೇವರ ರಥೋತ್ಸವದಂತೆ ದೇಶ ಸಂಚಾರ ನಡೆಯಲಿ’ ಎಂದು ಹಾರೈಸಿದರು.