ಸೋಮವಾರ ಮಧ್ಯಾಹ್ನ ಗುಡುಮಗಟ್ಟೆಯ ಪರಿಚಯಸ್ಥ ಮಹಿಳೆಯೊಂದಿಗೆ ನಾಲೆಯಲ್ಲಿ ಆಟವಾಡಲು ತೆರಳಿದ ಬಾಲಕರು ಆಯಾ ತಪ್ಪಿ ನಾಲೆಗೆ ಬಿದ್ದು ನಾಪತ್ತೆಯಾಗಿದ್ದರು. ಆನವೇರಿ ಮಿಲ್ಟ್ರೀ ಹೋಟೆಲ್ ಮಾಲೀಕ ಉಮೇಶ್ ಶೆಟ್ಟಿ ದಂಪತಿಯ ಮಗ ರಜತ್ (10) ಮತ್ತು ಕುಂದಾಪುರದ ತೆಕ್ಕಟ್ಟೆ ನಿವಾಸಿ ನವೀನ್ ಶೆಟ್ಟಿ ಅವರ ಮಗ ರೋಹನ್ (15) ಮೃತ ಬಾಲಕರು. ರೋಹನ್ ರಜೆಗೆಂದು ಸಂಬಂಧಿಕರ ಮನೆಗೆ ಬಂದಿದ್ದ.