<p><strong>ಕಾರ್ಕಳ:</strong> ತಾಲ್ಲೂಕಿನ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಇಂಡಿಯನ್ ನಾಲೆಡ್ಜ್ ಸಿಸ್ಟಮ್ಸ್ (ಐಕೆಎಸ್) ಸಹಯೋಗದಲ್ಲಿ ಸಿವಿಲ್ ಎಂಜಿನಿಯರಿಂಗ್ನಲ್ಲಿ ‘ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳು: ವಾಸ್ತು ಶಾಸ್ತ್ರದ ಒಳನೋಟಗಳು’ ಕಾರ್ಯಾಗಾರ ಆಯೋಜಿಸಿತ್ತು.</p>.<p>ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ನಿರಂಜನ್ ಎನ್. ಚಿಪ್ಲುಂಕರ್ ಮಾತನಾಡಿ, ಸುಸ್ಥಿರ ಅಭಿವೃದ್ಧಿಗಾಗಿ ಪ್ರಾಚೀನ ವಾಸ್ತುಶಿಲ್ಪದ ಜ್ಞಾನವನ್ನು ಆಧುನಿಕ ಸಿವಿಲ್ ಎಂಜಿನಿಯರಿಂಗ್ ಅಭ್ಯಾಸಗಳೊಂದಿಗೆ ಬೆರೆಸುವ ಮಹತ್ವವಿದೆ ಎಂದರು.</p>.<p>‘ಪರಿಹಾರ ವಾಸ್ತು: ಪ್ರಾಯೋಗಿಕ ದೃಷ್ಟಿಕೋನ’ ಕುರಿತು ಗೋಷ್ಠಿ ನಡೆಸಿಕೊಟ್ಟ ಸಿವಿಲ್ ಎಂಜಿನಿಯರ್ ಎ.ಆರ್. ಸತೀಶ್ ರಾವ್ ಇಡ್ಯ ಅವರು, ಇದು ಸಾಮಾನ್ಯ ನಿರ್ಮಾಣ ಸವಾಲುಗಳಿಗೆ ಪರಿಹಾರಗಳನ್ನು ತೋರಿಸಲಿದೆ ಎಂದರು.</p>.<p>ಉಡುಪಿ ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಗೋಪಾಲಾಚಾರ್ ಅವರು ವಾಸ್ತುಶಾಸ್ತ್ರ ತತ್ವಗಳ ಅನಿವಾರ್ಯತೆ, ವಾಸ್ತುವಿನ ಅನಿವಾರ್ಯತೆಯನ್ನು ಪ್ರಸ್ತುತಪಡಿಸಿದರು.</p>.<p>ಮಣಿಪಾಲದ ಮುನಿಯಾಲ್ ಆಯುರ್ವೇದಿಕ್ ಕಾಲೇಜಿನ ಪ್ರೊ.ಹರಿಪ್ರಸಾದ್ ಭಟ್ ಹೆರ್ಗಾ ಅವರು ಮನೆ ನಿರ್ಮಾಣದ ಪ್ರಾಯೋಗಿಕ ಸಲಹೆಗಳೊಂದಿಗೆ ‘ವಸತಿ ಕಟ್ಟಡ ವಾಸ್ತು ಮಾರ್ಗದರ್ಶನ’ ಬಗ್ಗೆ ಗೋಷ್ಠಿ ನಡೆಸಿಕೊಟ್ಟರು. ವಾಸ್ತು ಸಲಹೆಗಾರ, ಸಿವಿಲ್ ಎಂಜಿನಿಯರ್ ಎ. ಮುರಳೀಧರ್ ಹೆಗಡೆ ಅವರು ಸಮಾರೋಪ ಸಮಾರಂಭದಲ್ಲಿ ‘ವಾಸ್ತು ಕುರಿತ ಆಧುನಿಕ ದೃಷ್ಟಿಕೋನಗಳು’ ಬಗ್ಗೆ ಮಾತನಾಡಿದರು. ಸಿವಿಲ್ ಎಂಜಿನಿಯರಿಂಗ್ ವಿಭಾಗ ನಿರ್ದೇಶಕ ಸುಧೀರ್ ರಾಜ್ ಕೆ. ಅವರು ‘ಸಿವಿಲ್ ಎಂಜಿನಿಯರಿಂಗ್ನ ಭವಿಷ್ಯವನ್ನು ಹೆಚ್ಚಿಸುವಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಗಳ ಪ್ರಸ್ತುತತೆ’ ಬಗ್ಗೆ ಮಾತನಾಡಿದರು.</p>.<p>ಸಿವಿಲ್ ಎಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಅರುಣ್ ಕುಮಾರ್ ಭಟ್ ವಂದಿಸಿದರು. ಸಹಾಯಕ ಪ್ರಾಧ್ಯಾಪಕ ಪ್ರದೀಪ್ ಕಾರಂತ್, ತುಷಾರ್ ಎಸ್. ಶೆಟ್ಟಿ ಕಾರ್ಯಾಗಾರ ಸಂಯೋಜಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರ್ಕಳ:</strong> ತಾಲ್ಲೂಕಿನ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಇಂಡಿಯನ್ ನಾಲೆಡ್ಜ್ ಸಿಸ್ಟಮ್ಸ್ (ಐಕೆಎಸ್) ಸಹಯೋಗದಲ್ಲಿ ಸಿವಿಲ್ ಎಂಜಿನಿಯರಿಂಗ್ನಲ್ಲಿ ‘ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳು: ವಾಸ್ತು ಶಾಸ್ತ್ರದ ಒಳನೋಟಗಳು’ ಕಾರ್ಯಾಗಾರ ಆಯೋಜಿಸಿತ್ತು.</p>.<p>ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ನಿರಂಜನ್ ಎನ್. ಚಿಪ್ಲುಂಕರ್ ಮಾತನಾಡಿ, ಸುಸ್ಥಿರ ಅಭಿವೃದ್ಧಿಗಾಗಿ ಪ್ರಾಚೀನ ವಾಸ್ತುಶಿಲ್ಪದ ಜ್ಞಾನವನ್ನು ಆಧುನಿಕ ಸಿವಿಲ್ ಎಂಜಿನಿಯರಿಂಗ್ ಅಭ್ಯಾಸಗಳೊಂದಿಗೆ ಬೆರೆಸುವ ಮಹತ್ವವಿದೆ ಎಂದರು.</p>.<p>‘ಪರಿಹಾರ ವಾಸ್ತು: ಪ್ರಾಯೋಗಿಕ ದೃಷ್ಟಿಕೋನ’ ಕುರಿತು ಗೋಷ್ಠಿ ನಡೆಸಿಕೊಟ್ಟ ಸಿವಿಲ್ ಎಂಜಿನಿಯರ್ ಎ.ಆರ್. ಸತೀಶ್ ರಾವ್ ಇಡ್ಯ ಅವರು, ಇದು ಸಾಮಾನ್ಯ ನಿರ್ಮಾಣ ಸವಾಲುಗಳಿಗೆ ಪರಿಹಾರಗಳನ್ನು ತೋರಿಸಲಿದೆ ಎಂದರು.</p>.<p>ಉಡುಪಿ ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಗೋಪಾಲಾಚಾರ್ ಅವರು ವಾಸ್ತುಶಾಸ್ತ್ರ ತತ್ವಗಳ ಅನಿವಾರ್ಯತೆ, ವಾಸ್ತುವಿನ ಅನಿವಾರ್ಯತೆಯನ್ನು ಪ್ರಸ್ತುತಪಡಿಸಿದರು.</p>.<p>ಮಣಿಪಾಲದ ಮುನಿಯಾಲ್ ಆಯುರ್ವೇದಿಕ್ ಕಾಲೇಜಿನ ಪ್ರೊ.ಹರಿಪ್ರಸಾದ್ ಭಟ್ ಹೆರ್ಗಾ ಅವರು ಮನೆ ನಿರ್ಮಾಣದ ಪ್ರಾಯೋಗಿಕ ಸಲಹೆಗಳೊಂದಿಗೆ ‘ವಸತಿ ಕಟ್ಟಡ ವಾಸ್ತು ಮಾರ್ಗದರ್ಶನ’ ಬಗ್ಗೆ ಗೋಷ್ಠಿ ನಡೆಸಿಕೊಟ್ಟರು. ವಾಸ್ತು ಸಲಹೆಗಾರ, ಸಿವಿಲ್ ಎಂಜಿನಿಯರ್ ಎ. ಮುರಳೀಧರ್ ಹೆಗಡೆ ಅವರು ಸಮಾರೋಪ ಸಮಾರಂಭದಲ್ಲಿ ‘ವಾಸ್ತು ಕುರಿತ ಆಧುನಿಕ ದೃಷ್ಟಿಕೋನಗಳು’ ಬಗ್ಗೆ ಮಾತನಾಡಿದರು. ಸಿವಿಲ್ ಎಂಜಿನಿಯರಿಂಗ್ ವಿಭಾಗ ನಿರ್ದೇಶಕ ಸುಧೀರ್ ರಾಜ್ ಕೆ. ಅವರು ‘ಸಿವಿಲ್ ಎಂಜಿನಿಯರಿಂಗ್ನ ಭವಿಷ್ಯವನ್ನು ಹೆಚ್ಚಿಸುವಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಗಳ ಪ್ರಸ್ತುತತೆ’ ಬಗ್ಗೆ ಮಾತನಾಡಿದರು.</p>.<p>ಸಿವಿಲ್ ಎಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಅರುಣ್ ಕುಮಾರ್ ಭಟ್ ವಂದಿಸಿದರು. ಸಹಾಯಕ ಪ್ರಾಧ್ಯಾಪಕ ಪ್ರದೀಪ್ ಕಾರಂತ್, ತುಷಾರ್ ಎಸ್. ಶೆಟ್ಟಿ ಕಾರ್ಯಾಗಾರ ಸಂಯೋಜಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>