ಪಡುಬಿದ್ರಿ ಸೊಸೈಟಿಗೆ ಮೆಚ್ಚುಗೆ
ಸಹಕಾರಿ ಸಂಸ್ಥೆಗಳಿಂದ ರೈತರಿಗೆ ಸೇವೆ ನೀಡುವುದರೊಂದಿಗೆ ಜನರಿಗೆ ಅನೇಕ ಸೌಲಭ್ಯಗಳನ್ನು ಮಾಡಿಕೊಡುವ ಮೂಲಕ ಸಾಮಾಜಿಕ ಸೆವೆಯಲ್ಲಿ ತೊಡಗಿಸಿಕೊಂಡು ಮೆಚ್ಚುಗೆಗೆ ಪಾತ್ರವಾಗಿರುವ ಪಡುಬಿದ್ರಿ ಸಹಕಾರಿ ಸಂಘವು ಅವಿಭಜಿತ ದ.ಕ. ಜಿಲ್ಲೆಯಲ್ಲಿ ಹವಾನಿಯಂತ್ರಿತಗೊಂಡಿರುವ ಏಕೈಕ ಸಹಕಾರಿ ಸಂಸ್ಥೆ ಎಂದು ಎಂ.ಎನ್. ರಾಜೇಂದ್ರ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು. ಪಲಿಮಾರು ಶಾಖಾ ಕಟ್ಟಡದ ಕೆಲಸ ಕಾರ್ಯಗಳಿಗಾಗಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮೂಲಕ ₹10 ಲಕ್ಷ ನೀಡುವುದಾಗಿ ಘೋಷಿಸಿದರು.