<p><strong>ಮಂಗಳೂರು:</strong> ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ತಾಸುಗಳಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ನೀರೆಯಲ್ಲಿ 26.1 ಸೆಂ.ಮೀ ಮಳೆ ದಾಖಲಾಗಿದೆ.</p><p>ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ 23.4 ಸೆಂ.ಮೀ, ಕಾಪು ತೆಂಕದಲ್ಲಿ 22 ಸೆಂ.ಮೀ ಮಳೆಯಾಗಿದೆ. </p><p>ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಾಳದಲ್ಲಿ 22 ಸೆಂ.ಮೀ, ಮೂಲ್ಕಿ ಐಕಳದಲ್ಲಿ 21 ಸೆಂ.ಮೀ, ಕಿಲ್ಪಾಡಿ ಮತ್ತು ಕಿನ್ನಿಗೋಳಿಯಲ್ಲಿ 19 ಸೆಂ.ಮೀ, ಸುರತ್ಕಲ್ 18 ಸೆಂ.ಮೀ ಮಳೆ ದಾಖಲಾಗಿದೆ.</p><p>ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಮುಂದುವರಿದಿದೆ. </p><p>ಧಾರಾಕಾರ ಮಳೆಯಾಗುತ್ತಿದ್ದು, ಕಾರ್ಮೋಡ ಆವರಿಸಿದೆ. ಬೆಳಿಗ್ಗೆ 8 ಗಂಟೆ ಕಳೆದರೂ ಬೆಳಕು ಹರಿದಿಲ್ಲ. ವಾಹನ ಸವಾರರು ಲೈಟ್ ಹಾಕಿಕೊಂಡು ವಾಹನ ಚಲಾಯಿಸುತ್ತಿದ್ದಾರೆ. </p><p>ನಗರದ ಕೊಡಿಯಾಲ್ ಗುತ್ತು, ಕೊಟ್ಟಾರ ಚೌಕಿ ಮತ್ತಿತರ ಭಾಗಗಳಲ್ಲಿ ರಸ್ತೆಯೇ ಹೊಳೆಯಂತಾಗಿದೆ. ರಸ್ತೆಯ ಮೇಲೆ ನಿಲ್ಲಿಸಿರುವ ವಾಹನಗಳು ನೀರಿನಲ್ಲಿ ಮುಳುಗಿವೆ.</p><p>ಭಾರತ ಹವಾಮಾನ ಇಲಾಖೆ ಯಲ್ಲೊ ಅಲರ್ಟ್ ನೀಡಿದ್ದು, ಮೀನುಗಾರರು ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡಿದೆ. </p><p>ಜಿಲ್ಲೆಯಲ್ಲಿ ಧಾರಾಕಾರ ಮಳೆ ಆಗುತ್ತಿರುವುದರಿಂದ ಅಂಗನವಾಡಿ, ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ.</p>.Cyclone Fengal | ಶಿವಮೊಗ್ಗ: ಮಳೆ ಮುನ್ಸೂಚನೆ; ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ.Cyclone Fengal: ಚಾಮರಾಜನಗರದಲ್ಲಿ ಭಾರಿ ಮಳೆ; ಶಾಲಾ–ಕಾಲೇಜುಗಳಿಗೆ ರಜೆ.Cyclone Fengal: ಮಂಡ್ಯದಲ್ಲಿ ನಿರಂತರ ಮಳೆ; ಅಂಗನವಾಡಿ, ಶಾಲಾ–ಕಾಲೇಜುಗಳಿಗೆ ರಜೆ.Cyclone Fengal | ಕೇರಳದಲ್ಲಿ ಭಾರಿ ಮಳೆ ಸಾಧ್ಯತೆ; ‘ರೆಡ್ ಅಲರ್ಟ್’ ಘೋಷಣೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ತಾಸುಗಳಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ನೀರೆಯಲ್ಲಿ 26.1 ಸೆಂ.ಮೀ ಮಳೆ ದಾಖಲಾಗಿದೆ.</p><p>ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ 23.4 ಸೆಂ.ಮೀ, ಕಾಪು ತೆಂಕದಲ್ಲಿ 22 ಸೆಂ.ಮೀ ಮಳೆಯಾಗಿದೆ. </p><p>ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಾಳದಲ್ಲಿ 22 ಸೆಂ.ಮೀ, ಮೂಲ್ಕಿ ಐಕಳದಲ್ಲಿ 21 ಸೆಂ.ಮೀ, ಕಿಲ್ಪಾಡಿ ಮತ್ತು ಕಿನ್ನಿಗೋಳಿಯಲ್ಲಿ 19 ಸೆಂ.ಮೀ, ಸುರತ್ಕಲ್ 18 ಸೆಂ.ಮೀ ಮಳೆ ದಾಖಲಾಗಿದೆ.</p><p>ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಮುಂದುವರಿದಿದೆ. </p><p>ಧಾರಾಕಾರ ಮಳೆಯಾಗುತ್ತಿದ್ದು, ಕಾರ್ಮೋಡ ಆವರಿಸಿದೆ. ಬೆಳಿಗ್ಗೆ 8 ಗಂಟೆ ಕಳೆದರೂ ಬೆಳಕು ಹರಿದಿಲ್ಲ. ವಾಹನ ಸವಾರರು ಲೈಟ್ ಹಾಕಿಕೊಂಡು ವಾಹನ ಚಲಾಯಿಸುತ್ತಿದ್ದಾರೆ. </p><p>ನಗರದ ಕೊಡಿಯಾಲ್ ಗುತ್ತು, ಕೊಟ್ಟಾರ ಚೌಕಿ ಮತ್ತಿತರ ಭಾಗಗಳಲ್ಲಿ ರಸ್ತೆಯೇ ಹೊಳೆಯಂತಾಗಿದೆ. ರಸ್ತೆಯ ಮೇಲೆ ನಿಲ್ಲಿಸಿರುವ ವಾಹನಗಳು ನೀರಿನಲ್ಲಿ ಮುಳುಗಿವೆ.</p><p>ಭಾರತ ಹವಾಮಾನ ಇಲಾಖೆ ಯಲ್ಲೊ ಅಲರ್ಟ್ ನೀಡಿದ್ದು, ಮೀನುಗಾರರು ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡಿದೆ. </p><p>ಜಿಲ್ಲೆಯಲ್ಲಿ ಧಾರಾಕಾರ ಮಳೆ ಆಗುತ್ತಿರುವುದರಿಂದ ಅಂಗನವಾಡಿ, ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ.</p>.Cyclone Fengal | ಶಿವಮೊಗ್ಗ: ಮಳೆ ಮುನ್ಸೂಚನೆ; ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ.Cyclone Fengal: ಚಾಮರಾಜನಗರದಲ್ಲಿ ಭಾರಿ ಮಳೆ; ಶಾಲಾ–ಕಾಲೇಜುಗಳಿಗೆ ರಜೆ.Cyclone Fengal: ಮಂಡ್ಯದಲ್ಲಿ ನಿರಂತರ ಮಳೆ; ಅಂಗನವಾಡಿ, ಶಾಲಾ–ಕಾಲೇಜುಗಳಿಗೆ ರಜೆ.Cyclone Fengal | ಕೇರಳದಲ್ಲಿ ಭಾರಿ ಮಳೆ ಸಾಧ್ಯತೆ; ‘ರೆಡ್ ಅಲರ್ಟ್’ ಘೋಷಣೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>