<p><strong>ಬ್ರಹ್ಮಾವರ:</strong> ಕೋಟ ಪಡುಕೆರೆ ಕಡಲ ತೀರದಲ್ಲಿ ಪ್ರವಾಸಿಗರು ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವುದನ್ನು ಮನಗಂಡು ಕೋಟ ಮಣೂರು ಗೀತಾನಂದ ಫೌಂಡೇಷನ್ ವತಿಯಿಂದ ಸಮುದ್ರದ ದಡದಲ್ಲಿ ನೂತನ ಮಾದರಿಯ ಡಸ್ಟ್ಬಿನ್ ರಚಿಸಿ ಕೋಟ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಯಿತು.</p>.<p>ಈ ಸಂದರ್ಭ ಮಾತನಾಡಿದ ಗೀತಾನಂದ ಫೌಂಡೇಷನ್ನ ಪ್ರವರ್ತಕ ಆನಂದ ಸಿ ಕುಂದರ್, ‘ಈ ಹೊಸ ಮಾದರಿಯ ಕಸ ಸಂಗ್ರಹಣೆ ಗೋಲಕ್ಕೆ ಪ್ರವಾಸಿಗರು ಕಸವನ್ನು ಹಾಕಿ, ಬೀಚ್ನ್ನು ತ್ಯಾಜ್ಯಮುಕ್ತವಾಗಿಸಬೇಕು. ಇದರಿಂದ ನಾಗರಿಕರಲ್ಲಿ ಕಸ ವಿಲೇವಾರಿಯ ಸಂಸ್ಕೃತಿ ಬೆಳೆಯಲಿ’ ಎಂದು ಆಶಿಸಿದರು.</p>.<p>ಕೋಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ ಬಂಗೇರ ಪ್ರಶಂಸಾ ಪತ್ರವನ್ನು ವಾಚಿಸಿ, ಆನಂದ ಸಿ ಕುಂದರ್ ಅವರಿಗೆ ನೀಡಿದರು.</p>.<p>ಪಂಚಾಯಿತಿ ಉಪಾಧ್ಯಕ್ಷ ಪಾಂಡು ಪೂಜಾರಿ, ಕಾರ್ಯದರ್ಶಿ ಶೇಖರ ಮರವಂತೆ, ಎಸ್ಎಲ್ಆರ್ಎಂ ಘಟಕದ ಮೇಲ್ವಿಚಾರಕಿ ಭವ್ಯ, ಜನತಾ ಸಂಸ್ಥೆಯ ಎಜಿಎಂ ಶ್ರೀನಿವಾಸ ಕುಂದರ್, ಫ್ಯಾಕ್ಟರಿ ವ್ಯವಸ್ಥಾಪಕ ಮಿಥುನ್, ಗೀತಾನಂದ ಫೌಂಡೇಷನ್ನ ಪ್ರತಿನಿಧಿ ರವಿಕಿರಣ್, ದೀಕ್ಷಿತಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬ್ರಹ್ಮಾವರ:</strong> ಕೋಟ ಪಡುಕೆರೆ ಕಡಲ ತೀರದಲ್ಲಿ ಪ್ರವಾಸಿಗರು ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವುದನ್ನು ಮನಗಂಡು ಕೋಟ ಮಣೂರು ಗೀತಾನಂದ ಫೌಂಡೇಷನ್ ವತಿಯಿಂದ ಸಮುದ್ರದ ದಡದಲ್ಲಿ ನೂತನ ಮಾದರಿಯ ಡಸ್ಟ್ಬಿನ್ ರಚಿಸಿ ಕೋಟ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಯಿತು.</p>.<p>ಈ ಸಂದರ್ಭ ಮಾತನಾಡಿದ ಗೀತಾನಂದ ಫೌಂಡೇಷನ್ನ ಪ್ರವರ್ತಕ ಆನಂದ ಸಿ ಕುಂದರ್, ‘ಈ ಹೊಸ ಮಾದರಿಯ ಕಸ ಸಂಗ್ರಹಣೆ ಗೋಲಕ್ಕೆ ಪ್ರವಾಸಿಗರು ಕಸವನ್ನು ಹಾಕಿ, ಬೀಚ್ನ್ನು ತ್ಯಾಜ್ಯಮುಕ್ತವಾಗಿಸಬೇಕು. ಇದರಿಂದ ನಾಗರಿಕರಲ್ಲಿ ಕಸ ವಿಲೇವಾರಿಯ ಸಂಸ್ಕೃತಿ ಬೆಳೆಯಲಿ’ ಎಂದು ಆಶಿಸಿದರು.</p>.<p>ಕೋಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ ಬಂಗೇರ ಪ್ರಶಂಸಾ ಪತ್ರವನ್ನು ವಾಚಿಸಿ, ಆನಂದ ಸಿ ಕುಂದರ್ ಅವರಿಗೆ ನೀಡಿದರು.</p>.<p>ಪಂಚಾಯಿತಿ ಉಪಾಧ್ಯಕ್ಷ ಪಾಂಡು ಪೂಜಾರಿ, ಕಾರ್ಯದರ್ಶಿ ಶೇಖರ ಮರವಂತೆ, ಎಸ್ಎಲ್ಆರ್ಎಂ ಘಟಕದ ಮೇಲ್ವಿಚಾರಕಿ ಭವ್ಯ, ಜನತಾ ಸಂಸ್ಥೆಯ ಎಜಿಎಂ ಶ್ರೀನಿವಾಸ ಕುಂದರ್, ಫ್ಯಾಕ್ಟರಿ ವ್ಯವಸ್ಥಾಪಕ ಮಿಥುನ್, ಗೀತಾನಂದ ಫೌಂಡೇಷನ್ನ ಪ್ರತಿನಿಧಿ ರವಿಕಿರಣ್, ದೀಕ್ಷಿತಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>