ಉಡುಪಿ: ಜೂನ್ 18, 2017ರಲ್ಲಿ ಉಡುಪಿಯ ಶ್ರೀಕೃಷ್ಣಮಠಕ್ಕೆ ಅಂದಿನ ರಾಷ್ಟ್ರಪತಿಗಳಾಗಿದ್ದ ಪ್ರಣಬ್ ಮುಖರ್ಜಿ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು.
ಪೇಜಾವರ ಶ್ರೀಗಳ 5ನೇ ಪರ್ಯಾಯದ ವೇಳೆ ಕೃಷ್ಣಮಠಕ್ಕೆ ಆಗಮಿಸಿದ್ದ ಪ್ರಣಬ್ ಮುಖರ್ಜಿ, ಕನಕನ ಕಿಂಡಿಯ ಮೂಲಕ ಕೃಷ್ಣನ ದರ್ಶನ ಪಡೆದಿದ್ದರು. ಪೇಜಾವರ ಶ್ರೀಗಳು ಮಠಕ್ಕೆ ಕರೆದೊಯ್ದು ಕೃಷ್ಣನ ಬೆಳ್ಳಿ ವಿಗ್ರಹ ಉಡುಗೊರೆ ನೀಡಿದ್ದರು.
ನಂತರರಜಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮ ಪ್ರಣಬ್ ಭಾಗವಹಿಸಿದ್ದರು. ಇದೇ ಸಂದರ್ಭ ಪಿಪಿಪಿ ಮಾದರಿಯ ಬಿ.ಆರ್.ಶೆಟ್ಟಿ ಆಸ್ಪತ್ರೆಗೆ ಶಿಲಾನ್ಯಾಸ ನೇರವೇರಿಸಿ, ಕೊಲ್ಲೂರಿಗೆ ತೆರಳಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.