<p><strong>ಉಡುಪಿ</strong>: ಗಣೇಶ ಚತುರ್ಥಿ ಹಬ್ಬದ ಆಚರಣೆಯ ಪೂರ್ವಭಾವಿಯಾಗಿ ನಗರದ ಮಾರುಕಟ್ಟೆಗಳಲ್ಲಿ ಸೋಮವಾರ ಹಣ್ಣು, ತರಕಾರಿ, ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿತ್ತು.</p>.<p>ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿ ಹೂವುಗಳನ್ನು ರಾಶಿ ಹಾಕಿ ಮಾರಾಟ ಮಾಡಲಾಗಿತ್ತು. ಗ್ರಾಹಕರು ಮುಗಿಬಿದ್ದು ಹೂವು, ಹಿಂಗಾರ, ಕಬ್ಬನ್ನು ಖರೀದಿಸಿದರು.</p>.<p>ಹಬ್ಬದ ಅಂಗವಾಗಿ ಶಾಪಿಂಗ್ ಮಾಲ್ಗಳಲ್ಲೂ ಜನರು ಕಿಕ್ಕಿರಿದು ತುಂಬಿದ್ದರು. ಕೆಲವು ಬಟ್ಟೆಯಂಗಡಿಗಳಲ್ಲೂ ಖರೀದಿ ಭರಾಟೆ ಜೋರಾಗಿತ್ತು. ಶ್ರೀಕೃಷ್ಣ ಮಠದ ಬಳಿಯ ರಥಬೀದಿಯುದ್ದಕ್ಕೂ ತರಕಾರಿ, ಹಣ್ಣು ಹಂಪಲು, ಹೂವು, ಕಬ್ಬು ಮಾರಾಟ ಗರಿಗೆದರಿತ್ತು.</p>.<p>ಗಣೇಶ ಹಬ್ಬದ ಸಂದರ್ಭದಲ್ಲಿ ಬಹುತೇಕರು ಮನೆಗಳಲ್ಲೂ ಸಣ್ಣ ಗಣಪತಿ ಮೂರ್ತಿ ಇಟ್ಟು ಪೂಜಿಸುತ್ತಾರೆ. ಈ ಕಾರಣಕ್ಕೆ ಪೂಜಾ ಸಾಮಗ್ರಿಗಳ ಖರೀದಿಗೂ ಜನರು ಮಾರುಕಟ್ಟೆಗಳಿಗೆ ಬಂದಿದ್ದರು.</p>.<p>ಉಡುಪಿ ನಗರದ ರಥ ಬೀದಿ, ಡಯಾನ ಸರ್ಕಲ್, ಸರ್ವಿಸ್ ಬಸ್ ನಿಲ್ದಾಣ ಮೊದಲಾದೆಡೆ ಹೂವಿನ ಮಾರಾಟ ನಡೆಯಿತು. ಸಾರ್ವಜನಿಕ ಗಣೇಶೋತ್ಸವದ ಪೆಂಡಲ್ಗಳ ಅಲಂಕಾರಕ್ಕಾಗಿಯೂ ಹೂವಿಗೆ ಹೆಚ್ಚಿನ ಬೇಡಿಕೆ ಇರುತ್ತದೆ.</p>.<p>ಈ ಕಾರಣಕ್ಕೆ ಪ್ರತಿವರ್ಷವೂ ಹಬ್ಬದ ಎರಡು ದಿವಸ ಮೊದಲು ಹಾಸನ, ಶಿವಮೊಗ್ಗ ಮೊದಲಾದೆಡೆಗಳಿಂದ ಹೂವಿನ ಮಾರಾಟಗಾರರು ಉಡುಪಿ ನಗರಕ್ಕೆ ಬರುತ್ತಾರೆ.</p>.<p>ಸೇವಂತಿಗೆ, ಕಾಕಡ, ತುಳಸಿ ದರ ಮಾರಿಗೆ ₹ 100 ಇತ್ತು. ಗುಲಾಬಿ ಹೂವಿನ ಮಾಲೆಯ ದರ ಮಾರಿಗೆ ₹ 150 ಇತ್ತು.</p>.<p>‘ಈ ಸಲ ಮಳೆಯಿಂದಾಗಿ ಹೂವು ಕಡಿಮೆ ಇದೆ. ನಾವು ಕೂಡ ಹೂವು ಬೆಳೆಗಾರರಿಂದ ಖರೀದಿಸಿ ಇಲ್ಲಿಗೆ ಮಾರಾಟ ಮಾಡಲು ತರುತ್ತೇವೆ. ಹೆಚ್ಚು ಬೆಲೆಗೆ ಮಾರಾಟ ಮಾಡಿದರೆ ಇಲ್ಲಿನ ಗ್ರಾಹಕರು ಖರೀದಿಸುವುದಿಲ್ಲ’ ಎಂದು ಹಾಸನದ ಹೂವಿನ ಮಾರಾಟಗಾರ ರಂಗಸ್ವಾಮಿ ತಿಳಿಸಿದರು.</p>.<p>ಗಣೇಶ ಚತುರ್ಥಿಯ ಸಂದರ್ಭದಲ್ಲಿ ಕಬ್ಬಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ಈ ಕಾರಣಕ್ಕೆ ಶಿವಮೊಗ್ಗ ಮೊದಲಾದ ಕಡೆಯ ವ್ಯಾಪಾರಿಗಳು ನಗರಕ್ಕೆ ಕಬ್ಬು ತಂದು ಮಾರಾಟ ಮಾಡುತ್ತಾರೆ. ಈ ಬಾರಿಯೂ ಹಲವು ಮಾರಾಟಗಾರರು ನಗರದಲ್ಲಿ ಕಬ್ಬಿನ ಮಾರಾಟ ನಡೆಸಿದರು. ಒಂದು ಕಬ್ಬಿನ ಬೆಲೆ ₹70ಕ್ಕೆ ಏರಿಕೆಯಾಗಿತ್ತು.</p>.<div><blockquote>ಹೂವು ಬೆಳೆಯುವ ಪ್ರದೇಶಗಳಲ್ಲಿ ಈ ಸಲ ಭಾರಿ ಮಳೆಯಾಗಿರುವ ಕಾರಣ ಬೆಳೆ ನಾಶವಾಗಿದೆ. ಈ ಕಾರಣಕ್ಕೆ ಹೂವಿನ ದರ ಏರಿಕೆಯಾಗಿದೆ </blockquote><span class="attribution"> ರಂಗಸ್ವಾಮಿ ಹೂವಿನ ವ್ಯಾಪಾರಿ ಹಾಸನ</span></div>.<div><blockquote>ಈ ಬಾರಿ ಹೂವು ಕಬ್ಬು ತರಕಾರಿ ಎಲ್ಲದರ ಬೆಲೆಯೂ ಏರಿಕೆಯಾಗಿದೆ. ಹಬ್ಬದ ಸಂದರ್ಭವಾಗಿರುವುದರಿಂದ ಖರೀದಿಸುವ ಅನಿವಾರ್ಯತೆ ಇದೆ</blockquote><span class="attribution">ಶ್ಯಾಮಸುಂದರ್ ಮಣಿಪಾಲ</span></div>.<p><strong>ತರಕಾರಿ ಹಣ್ಣಿನ ದರವೂ ಏರಿಕೆ</strong></p><p> ಗಣೇಶ ಹಬ್ಬದ ಸಂದರ್ಭದಲ್ಲಿ ಏಲಕ್ಕಿ ಬಾಳೆಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ಈ ಕಾರಣಕ್ಕೆ ದರವೂ ಅಧಿಕವಾಗುತ್ತದೆ. ಡಜನ್ ಏಲಕ್ಕಿ ಬಾಳೆಹಣ್ಣಿನ ದರ ಸೋಮವಾರ ₹100 ದಾಟಿತ್ತು. ಡ್ರ್ಯಾಗನ್ ಫ್ರೂಟ್ ದರ ಕೆ.ಜಿ.ಗೆ ₹200 ದಾಳಿಂಬೆ ಹಣ್ಣಿನ ದರ ಕೆ.ಜಿ.ಗೆ ₹ 200 ದಾಟಿತ್ತು. ಹಬ್ಬದ ಸಂದರ್ಭದಲ್ಲಿ ಹಣ್ಣುಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ದರ ಏರಿಕೆಯಾಗುತ್ತದೆ. ಆದರೂ ಕೊಂಡುಕೊಳ್ಳುವ ಗ್ರಾಹಕರ ಸಂಖ್ಯೆ ಕಡಿಮೆಯಾಗಿಲ್ಲ ಎಂದು ಹಣ್ಣಿನ ಮಾರಾಟಗಾರರು ತಿಳಿಸಿದರು. ತರಕಾರಿ ದರವೂ ಗಗನಕ್ಕೇರಿದ್ದು ಕೆ.ಜಿ. ಟೊಮೆಟೊ ದರ ₹50ಕ್ಕೆ ಏರಿಕೆಯಾಗಿತ್ತು. ಕ್ಯಾರೆಟ್ ಕೆ.ಜಿ.ಗೆ ₹80 ಬೀನ್ಸ್ ಕೆ.ಜಿ.ಗೆ ₹80 ಅಲಸಂಡೆ ದರ ಕೆ.ಜಿ.ಗೆ ₹75ಕ್ಕೆ ಏರಿಕೆಯಾಗಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ</strong>: ಗಣೇಶ ಚತುರ್ಥಿ ಹಬ್ಬದ ಆಚರಣೆಯ ಪೂರ್ವಭಾವಿಯಾಗಿ ನಗರದ ಮಾರುಕಟ್ಟೆಗಳಲ್ಲಿ ಸೋಮವಾರ ಹಣ್ಣು, ತರಕಾರಿ, ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿತ್ತು.</p>.<p>ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿ ಹೂವುಗಳನ್ನು ರಾಶಿ ಹಾಕಿ ಮಾರಾಟ ಮಾಡಲಾಗಿತ್ತು. ಗ್ರಾಹಕರು ಮುಗಿಬಿದ್ದು ಹೂವು, ಹಿಂಗಾರ, ಕಬ್ಬನ್ನು ಖರೀದಿಸಿದರು.</p>.<p>ಹಬ್ಬದ ಅಂಗವಾಗಿ ಶಾಪಿಂಗ್ ಮಾಲ್ಗಳಲ್ಲೂ ಜನರು ಕಿಕ್ಕಿರಿದು ತುಂಬಿದ್ದರು. ಕೆಲವು ಬಟ್ಟೆಯಂಗಡಿಗಳಲ್ಲೂ ಖರೀದಿ ಭರಾಟೆ ಜೋರಾಗಿತ್ತು. ಶ್ರೀಕೃಷ್ಣ ಮಠದ ಬಳಿಯ ರಥಬೀದಿಯುದ್ದಕ್ಕೂ ತರಕಾರಿ, ಹಣ್ಣು ಹಂಪಲು, ಹೂವು, ಕಬ್ಬು ಮಾರಾಟ ಗರಿಗೆದರಿತ್ತು.</p>.<p>ಗಣೇಶ ಹಬ್ಬದ ಸಂದರ್ಭದಲ್ಲಿ ಬಹುತೇಕರು ಮನೆಗಳಲ್ಲೂ ಸಣ್ಣ ಗಣಪತಿ ಮೂರ್ತಿ ಇಟ್ಟು ಪೂಜಿಸುತ್ತಾರೆ. ಈ ಕಾರಣಕ್ಕೆ ಪೂಜಾ ಸಾಮಗ್ರಿಗಳ ಖರೀದಿಗೂ ಜನರು ಮಾರುಕಟ್ಟೆಗಳಿಗೆ ಬಂದಿದ್ದರು.</p>.<p>ಉಡುಪಿ ನಗರದ ರಥ ಬೀದಿ, ಡಯಾನ ಸರ್ಕಲ್, ಸರ್ವಿಸ್ ಬಸ್ ನಿಲ್ದಾಣ ಮೊದಲಾದೆಡೆ ಹೂವಿನ ಮಾರಾಟ ನಡೆಯಿತು. ಸಾರ್ವಜನಿಕ ಗಣೇಶೋತ್ಸವದ ಪೆಂಡಲ್ಗಳ ಅಲಂಕಾರಕ್ಕಾಗಿಯೂ ಹೂವಿಗೆ ಹೆಚ್ಚಿನ ಬೇಡಿಕೆ ಇರುತ್ತದೆ.</p>.<p>ಈ ಕಾರಣಕ್ಕೆ ಪ್ರತಿವರ್ಷವೂ ಹಬ್ಬದ ಎರಡು ದಿವಸ ಮೊದಲು ಹಾಸನ, ಶಿವಮೊಗ್ಗ ಮೊದಲಾದೆಡೆಗಳಿಂದ ಹೂವಿನ ಮಾರಾಟಗಾರರು ಉಡುಪಿ ನಗರಕ್ಕೆ ಬರುತ್ತಾರೆ.</p>.<p>ಸೇವಂತಿಗೆ, ಕಾಕಡ, ತುಳಸಿ ದರ ಮಾರಿಗೆ ₹ 100 ಇತ್ತು. ಗುಲಾಬಿ ಹೂವಿನ ಮಾಲೆಯ ದರ ಮಾರಿಗೆ ₹ 150 ಇತ್ತು.</p>.<p>‘ಈ ಸಲ ಮಳೆಯಿಂದಾಗಿ ಹೂವು ಕಡಿಮೆ ಇದೆ. ನಾವು ಕೂಡ ಹೂವು ಬೆಳೆಗಾರರಿಂದ ಖರೀದಿಸಿ ಇಲ್ಲಿಗೆ ಮಾರಾಟ ಮಾಡಲು ತರುತ್ತೇವೆ. ಹೆಚ್ಚು ಬೆಲೆಗೆ ಮಾರಾಟ ಮಾಡಿದರೆ ಇಲ್ಲಿನ ಗ್ರಾಹಕರು ಖರೀದಿಸುವುದಿಲ್ಲ’ ಎಂದು ಹಾಸನದ ಹೂವಿನ ಮಾರಾಟಗಾರ ರಂಗಸ್ವಾಮಿ ತಿಳಿಸಿದರು.</p>.<p>ಗಣೇಶ ಚತುರ್ಥಿಯ ಸಂದರ್ಭದಲ್ಲಿ ಕಬ್ಬಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ಈ ಕಾರಣಕ್ಕೆ ಶಿವಮೊಗ್ಗ ಮೊದಲಾದ ಕಡೆಯ ವ್ಯಾಪಾರಿಗಳು ನಗರಕ್ಕೆ ಕಬ್ಬು ತಂದು ಮಾರಾಟ ಮಾಡುತ್ತಾರೆ. ಈ ಬಾರಿಯೂ ಹಲವು ಮಾರಾಟಗಾರರು ನಗರದಲ್ಲಿ ಕಬ್ಬಿನ ಮಾರಾಟ ನಡೆಸಿದರು. ಒಂದು ಕಬ್ಬಿನ ಬೆಲೆ ₹70ಕ್ಕೆ ಏರಿಕೆಯಾಗಿತ್ತು.</p>.<div><blockquote>ಹೂವು ಬೆಳೆಯುವ ಪ್ರದೇಶಗಳಲ್ಲಿ ಈ ಸಲ ಭಾರಿ ಮಳೆಯಾಗಿರುವ ಕಾರಣ ಬೆಳೆ ನಾಶವಾಗಿದೆ. ಈ ಕಾರಣಕ್ಕೆ ಹೂವಿನ ದರ ಏರಿಕೆಯಾಗಿದೆ </blockquote><span class="attribution"> ರಂಗಸ್ವಾಮಿ ಹೂವಿನ ವ್ಯಾಪಾರಿ ಹಾಸನ</span></div>.<div><blockquote>ಈ ಬಾರಿ ಹೂವು ಕಬ್ಬು ತರಕಾರಿ ಎಲ್ಲದರ ಬೆಲೆಯೂ ಏರಿಕೆಯಾಗಿದೆ. ಹಬ್ಬದ ಸಂದರ್ಭವಾಗಿರುವುದರಿಂದ ಖರೀದಿಸುವ ಅನಿವಾರ್ಯತೆ ಇದೆ</blockquote><span class="attribution">ಶ್ಯಾಮಸುಂದರ್ ಮಣಿಪಾಲ</span></div>.<p><strong>ತರಕಾರಿ ಹಣ್ಣಿನ ದರವೂ ಏರಿಕೆ</strong></p><p> ಗಣೇಶ ಹಬ್ಬದ ಸಂದರ್ಭದಲ್ಲಿ ಏಲಕ್ಕಿ ಬಾಳೆಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ಈ ಕಾರಣಕ್ಕೆ ದರವೂ ಅಧಿಕವಾಗುತ್ತದೆ. ಡಜನ್ ಏಲಕ್ಕಿ ಬಾಳೆಹಣ್ಣಿನ ದರ ಸೋಮವಾರ ₹100 ದಾಟಿತ್ತು. ಡ್ರ್ಯಾಗನ್ ಫ್ರೂಟ್ ದರ ಕೆ.ಜಿ.ಗೆ ₹200 ದಾಳಿಂಬೆ ಹಣ್ಣಿನ ದರ ಕೆ.ಜಿ.ಗೆ ₹ 200 ದಾಟಿತ್ತು. ಹಬ್ಬದ ಸಂದರ್ಭದಲ್ಲಿ ಹಣ್ಣುಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ದರ ಏರಿಕೆಯಾಗುತ್ತದೆ. ಆದರೂ ಕೊಂಡುಕೊಳ್ಳುವ ಗ್ರಾಹಕರ ಸಂಖ್ಯೆ ಕಡಿಮೆಯಾಗಿಲ್ಲ ಎಂದು ಹಣ್ಣಿನ ಮಾರಾಟಗಾರರು ತಿಳಿಸಿದರು. ತರಕಾರಿ ದರವೂ ಗಗನಕ್ಕೇರಿದ್ದು ಕೆ.ಜಿ. ಟೊಮೆಟೊ ದರ ₹50ಕ್ಕೆ ಏರಿಕೆಯಾಗಿತ್ತು. ಕ್ಯಾರೆಟ್ ಕೆ.ಜಿ.ಗೆ ₹80 ಬೀನ್ಸ್ ಕೆ.ಜಿ.ಗೆ ₹80 ಅಲಸಂಡೆ ದರ ಕೆ.ಜಿ.ಗೆ ₹75ಕ್ಕೆ ಏರಿಕೆಯಾಗಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>