ಉಡುಪಿ: ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥರ ಸಂಕಲ್ಪದಂತೆ ಜ.14ರಂದು ಮಕರ ಸಂಕ್ರಮಣ ದಿನ ಕೃಷ್ಣಮಠದಲ್ಲಿ ಕೃಷ್ಣನಿಗೆ ಸ್ವರ್ಣ ಛತ್ರ ಸಮರ್ಪಣೆ ನಡೆಯಲಿದೆ.
ಸ್ವರ್ಣ ಛತ್ರ ತಯಾರಿಗೆ 2 ಕೆಜಿ 500 ಗ್ರಾಂ ಚಿನ್ನವನ್ನು ಬಳಕೆ ಮಾಡಲಾಗಿದ್ದು, ₹ 50 ಲಕ್ಷ ವೆಚ್ಚವಾಗಿದೆ. ಉಡುಪಿಯ ಸಂತೋಷ್ ಶೇಟ್ ಅವರ ಉಸ್ತುವಾರಿಯಲ್ಲಿ ಪಾಜಕದ ಶಿಲ್ಪಿ ರಾಘವೇಂದ್ರಾಚಾರ್ಯ ಕುಂಜಾರುಗಿರಿ ಸ್ವರ್ಣ ಛತ್ರ ತಯಾರಿಸಿದ್ದಾರೆ ಎಂದು ಮಠದ ಸಿಬ್ಬಂದಿ ತಿಳಿಸಿದ್ದಾರೆ.