<p><strong>ಉಡುಪಿ: </strong>ಯಾರು ಗಾಂಧೀಜಿ ಅವರನ್ನು ಕೊಂದರೋ ಅವರೇ ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ, ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಅವರನ್ನು ಕೊಂದಿರುವುದು ಸ್ಷಷ್ಟವಾಗಿದೆ ಎಂದು ಕೋಮು ಸೌಹಾರ್ದ ವೇದಿಕೆ ಜಿಲ್ಲಾಧ್ಯಕ್ಷ ರಾಜಶೇಖರ್ ಅಭಿಪ್ರಾಯಪಟ್ಟರು.</p>.<p>ನಗರದ ಅಜ್ಜರಕಾಡು ಹುತಾತ್ಮರ ಚೌಕದ ಎದುರು ಕೋಮು ಸೌಹಾರ್ದ ವೇದಿಕೆ ಹಾಗೂ ದಲಿತ ಸಂಘಟನೆಗಳ ಮಹಾ ಒಕ್ಕೂಟ ಹಮ್ಮಿಕೊಂಡಿದ್ದ ಗೌರಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದರು.</p>.<p>ಹಿಂದೆ ಇದೇ ಜಾಗದಲ್ಲಿ ಪ್ರತಿಭಟನೆ ನಡೆಸಿ, ಗಾಂಧಿಯನ್ನು ಕೊಂದವರು ಗೌರಿಯನ್ನು ಕೊಂದರೇ ಎಂದು ಘೋಷಣೆ ಕೂಗಲಾಗಿತ್ತು. ಅದು ನಿಜವಾದಂತೆ ಕಾಣುತ್ತಿದೆ. ಗೌರಿ ಲಂಕೇಶ್ ಹತ್ಯೆ ಆರೋಪಿಗಳ ಬೇರು ಸಂಘಪರಿವಾರದಲ್ಲಿ ಆಳವಾಗಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.</p>.<p>ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪರಶುರಾಮ ವಾಗ್ಮೋರೆ ಕೆಲವರ್ಷಗಳ ಹಿಂದೆ ಸಿಂಧಗಿಯಲ್ಲಿ ಪಾಕ್ ಧ್ವಜ ಹಾರಿಸಿ ಗಲಭೆ ಸೃಷ್ಟಿಸಲು ಯತ್ನಿಸಿದ್ದ. ಈ ಪ್ರಕರಣದಲ್ಲಿ ತಾಂತ್ರಿಕ ಕಾರಣದಿಂದ ನ್ಯಾಯಾಲಯ ವಾಗ್ಮೋರೆಯನ್ನು ಬಿಡುಗಡೆಮಾಡಿದೆ. ಗೌರಿ ಲಂಕೇಶ್ ಪ್ರಕರಣದಲ್ಲೂ ತಾಂತ್ರಿಕ ಕಾರಣದಿಂದ ಆರೋಪಿಗಳು ಬಿಡುಗಡೆಯಾದರೂ ಅಚ್ಚರಿಯಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.</p>.<p>ಸಾರ್ವಕರ್ ಪ್ರಣೀತ ಸಾರ್ವರ್ಕರ್ ಸಿದ್ಧಾಂತ ಸಾವಿರಾರು ಜನರ ಹತ್ಯೆಗೆ ಕಾರಣವಾಗಿದೆ. ಸರಣಿ ಹತ್ಯಾಕಾಂಡದಲ್ಲಿ ನೂರಾರು ಅಮಾಯಕರು ಬಲಿಯಾಗಿದ್ದಾರೆ. ಈ ಎಲ್ಲ ಸಾವುಗಳನ್ನು ನಾವೆಲ್ಲ ಖಂಡಿಸಬೇಕಿದೆ. ಹಿಂದುತ್ವದ ಸಿದ್ಧಾಂತಕ್ಕೆ ನಾವೆಲ್ಲ ದಿಕ್ಕಾರ ಕೂಗಬೇಕಿದೆ ಎಂದರು.</p>.<p>ಹೋರಾಟಗಾರ ಹಯವದನ ಉಪಾಧ್ಯಾಯ ಮಾತನಾಡಿ, ‘ದೇಶದಲ್ಲಿ ವೈಚಾರಿಕ ಹೋರಾಟವನ್ನು ದಮನಮಾಡಲಾಗುತ್ತಿದೆ. ಧರ್ಮದ ಹೆಸರಿನಲ್ಲಿ ಅಭಿವ್ತಕ್ತಿ ಸ್ವಾತಂತ್ರ್ಯವನ್ನು ಕಸಿಯಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.</p>.<p>ದಲಿತ ಸಂಘಟನೆ ಮುಖಂಡ ಸುಂದರ್ ಮಾಸ್ತರ್ ಮಾತನಾಡಿ, ‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಹಿಂದೂಗಳು ದಲಿತರನ್ನು ದಮನ ಮಾಡುತ್ತಿರುವುದು ಖಂಡನೀಯ’ ಎಂದರು.</p>.<p>ಪ್ರತಿಭಟನೆಯಲ್ಲಿ ಮುಖಂಡರಾದ ಸಂದೇಶ್ ಭಂಡಾರಿ, ಅಲೋಕ್ ರಾಜವಾಡೆ, ವಿಲಿಯಂ ಮಾರ್ಟಿಸ್, ಇದ್ರಿಸ್ ಊಡೆ, ಶಾಮರಾಜ್ ಬಿರ್ತಿ, ಸಮರ್ಥ ಸಹೀಲ್ ಅವರೂ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ: </strong>ಯಾರು ಗಾಂಧೀಜಿ ಅವರನ್ನು ಕೊಂದರೋ ಅವರೇ ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ, ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಅವರನ್ನು ಕೊಂದಿರುವುದು ಸ್ಷಷ್ಟವಾಗಿದೆ ಎಂದು ಕೋಮು ಸೌಹಾರ್ದ ವೇದಿಕೆ ಜಿಲ್ಲಾಧ್ಯಕ್ಷ ರಾಜಶೇಖರ್ ಅಭಿಪ್ರಾಯಪಟ್ಟರು.</p>.<p>ನಗರದ ಅಜ್ಜರಕಾಡು ಹುತಾತ್ಮರ ಚೌಕದ ಎದುರು ಕೋಮು ಸೌಹಾರ್ದ ವೇದಿಕೆ ಹಾಗೂ ದಲಿತ ಸಂಘಟನೆಗಳ ಮಹಾ ಒಕ್ಕೂಟ ಹಮ್ಮಿಕೊಂಡಿದ್ದ ಗೌರಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದರು.</p>.<p>ಹಿಂದೆ ಇದೇ ಜಾಗದಲ್ಲಿ ಪ್ರತಿಭಟನೆ ನಡೆಸಿ, ಗಾಂಧಿಯನ್ನು ಕೊಂದವರು ಗೌರಿಯನ್ನು ಕೊಂದರೇ ಎಂದು ಘೋಷಣೆ ಕೂಗಲಾಗಿತ್ತು. ಅದು ನಿಜವಾದಂತೆ ಕಾಣುತ್ತಿದೆ. ಗೌರಿ ಲಂಕೇಶ್ ಹತ್ಯೆ ಆರೋಪಿಗಳ ಬೇರು ಸಂಘಪರಿವಾರದಲ್ಲಿ ಆಳವಾಗಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.</p>.<p>ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪರಶುರಾಮ ವಾಗ್ಮೋರೆ ಕೆಲವರ್ಷಗಳ ಹಿಂದೆ ಸಿಂಧಗಿಯಲ್ಲಿ ಪಾಕ್ ಧ್ವಜ ಹಾರಿಸಿ ಗಲಭೆ ಸೃಷ್ಟಿಸಲು ಯತ್ನಿಸಿದ್ದ. ಈ ಪ್ರಕರಣದಲ್ಲಿ ತಾಂತ್ರಿಕ ಕಾರಣದಿಂದ ನ್ಯಾಯಾಲಯ ವಾಗ್ಮೋರೆಯನ್ನು ಬಿಡುಗಡೆಮಾಡಿದೆ. ಗೌರಿ ಲಂಕೇಶ್ ಪ್ರಕರಣದಲ್ಲೂ ತಾಂತ್ರಿಕ ಕಾರಣದಿಂದ ಆರೋಪಿಗಳು ಬಿಡುಗಡೆಯಾದರೂ ಅಚ್ಚರಿಯಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.</p>.<p>ಸಾರ್ವಕರ್ ಪ್ರಣೀತ ಸಾರ್ವರ್ಕರ್ ಸಿದ್ಧಾಂತ ಸಾವಿರಾರು ಜನರ ಹತ್ಯೆಗೆ ಕಾರಣವಾಗಿದೆ. ಸರಣಿ ಹತ್ಯಾಕಾಂಡದಲ್ಲಿ ನೂರಾರು ಅಮಾಯಕರು ಬಲಿಯಾಗಿದ್ದಾರೆ. ಈ ಎಲ್ಲ ಸಾವುಗಳನ್ನು ನಾವೆಲ್ಲ ಖಂಡಿಸಬೇಕಿದೆ. ಹಿಂದುತ್ವದ ಸಿದ್ಧಾಂತಕ್ಕೆ ನಾವೆಲ್ಲ ದಿಕ್ಕಾರ ಕೂಗಬೇಕಿದೆ ಎಂದರು.</p>.<p>ಹೋರಾಟಗಾರ ಹಯವದನ ಉಪಾಧ್ಯಾಯ ಮಾತನಾಡಿ, ‘ದೇಶದಲ್ಲಿ ವೈಚಾರಿಕ ಹೋರಾಟವನ್ನು ದಮನಮಾಡಲಾಗುತ್ತಿದೆ. ಧರ್ಮದ ಹೆಸರಿನಲ್ಲಿ ಅಭಿವ್ತಕ್ತಿ ಸ್ವಾತಂತ್ರ್ಯವನ್ನು ಕಸಿಯಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.</p>.<p>ದಲಿತ ಸಂಘಟನೆ ಮುಖಂಡ ಸುಂದರ್ ಮಾಸ್ತರ್ ಮಾತನಾಡಿ, ‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಹಿಂದೂಗಳು ದಲಿತರನ್ನು ದಮನ ಮಾಡುತ್ತಿರುವುದು ಖಂಡನೀಯ’ ಎಂದರು.</p>.<p>ಪ್ರತಿಭಟನೆಯಲ್ಲಿ ಮುಖಂಡರಾದ ಸಂದೇಶ್ ಭಂಡಾರಿ, ಅಲೋಕ್ ರಾಜವಾಡೆ, ವಿಲಿಯಂ ಮಾರ್ಟಿಸ್, ಇದ್ರಿಸ್ ಊಡೆ, ಶಾಮರಾಜ್ ಬಿರ್ತಿ, ಸಮರ್ಥ ಸಹೀಲ್ ಅವರೂ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>