ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ತಿಲಕರು ʼಸ್ವರಾಜ್ಯʼದ ಕಲ್ಪನೆ ಕೊಟ್ಟರು. ನಂತರ ಗಾಂಧೀಜಿ ಗ್ರಾಮ ಸ್ವರಾಜ್ಯದ ಆಶಯ ತುಂಬಿದರು. ಇದೀಗ ಬಿಜೆಪಿ ಇಬ್ಬರು ಮಹನೀಯರ ಕನಸುಗಳನ್ನು ಹಳ್ಳಿಹಳ್ಳಿಗಳಲ್ಲಿ ಸಾಕಾರಗೊಳಿಸುತ್ತಿದೆ. ಪಕ್ಷದ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಮಟ್ಟದ ನಾಯಕರು ಪಕ್ಷದ ಆಶಯ, ಗುರಿಗಳ ಬಗ್ಗೆ ಸ್ಟಷ್ಟತೆ ಹೊಂದಿ ಪಕ್ಷವನ್ನು ಸಂಘಟಿಸಬೇಕು ಎಂದು ಸಲಹೆ ಮಾಡಿದರು.