<p><strong>ಬ್ರಹ್ಮಾವರ</strong>: ಡಾ.ಉಪ್ಪಂಗಳ ರಾಮ ಭಟ್ ಸ್ಥಾಪಿಸಿದ ಅಕಲಂಕ ಪ್ರಕಾಶನ, ಪ್ರತಿಷ್ಠಾನದ ಅಕಲಂಕ ಪ್ರಶಸ್ತಿಗೆ ಲೇಖಕಿ, ಪ್ರಕಾಶಕಿ ಇಂದಿರಾ ಹಾಲಂಬಿ ಆಯ್ಕೆಯಾಗಿದ್ದಾರೆ.</p>.<p>ಇದೇ 23ರಂದು ಸಂಜೆ 4ಕ್ಕೆ ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಪ್ರಶಸ್ತಿಯು ₹15 ಸಾವಿರ ನಗದು ಪುರಸ್ಕಾರ ಹೊಂದಿದೆ. 2015ರಲ್ಲಿ ಆರಂಭವಾದ ಪ್ರಶಸ್ತಿಯು, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ನಿಧಿ ನೀಡಿ, ಪರಿಷತ್ತಿನ ಮೂಲಕ ಕೊಡಮಾಡುವ ವ್ಯವಸ್ಥೆ ಡಾ.ಉಪ್ಪಂಗಳ ರಾಮ ಭಟ್ ಮಾಡಿದ್ದು, ಅವರ ಮರಣಾನಂತರ ಪತ್ನಿ ಶಂಕರಿ ಆರ್.ಭಟ್ ಮುಂದುವರಿಸಿದ್ದಾರೆ.</p>.<p>ಇಂದಿರಾ ಹಾಲಂಬಿ ಅವರು ‘ಗಿರಿವಾಸಿನಿ’ ಕಾವ್ಯನಾಮದಿಂದ ಗುರುತಿಸಿಕೊಂಡಿದ್ದಾರೆ. 40 ವರ್ಷ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಅವರು ಪ್ರಕಾಶನ, ಹಾಡು, ಕತೆ, ಲೇಖನ, ಮಕ್ಕಳ ಸಾಹಿತ್ಯ, ಚಿಂತನ, ನಾಟಕ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. 1980ರಲ್ಲಿ ಸಂದೀಪ ಸಾಹಿತ್ಯ ಹೆಸರಿನಲ್ಲಿ ಪುಸ್ತಕ ಪ್ರಕಟಣೆ ಆರಂಭಿಸಿದ್ದು, ಈ ತನಕ 138 ಕೃತಿಗಳನ್ನು ಪ್ರಕಟಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬ್ರಹ್ಮಾವರ</strong>: ಡಾ.ಉಪ್ಪಂಗಳ ರಾಮ ಭಟ್ ಸ್ಥಾಪಿಸಿದ ಅಕಲಂಕ ಪ್ರಕಾಶನ, ಪ್ರತಿಷ್ಠಾನದ ಅಕಲಂಕ ಪ್ರಶಸ್ತಿಗೆ ಲೇಖಕಿ, ಪ್ರಕಾಶಕಿ ಇಂದಿರಾ ಹಾಲಂಬಿ ಆಯ್ಕೆಯಾಗಿದ್ದಾರೆ.</p>.<p>ಇದೇ 23ರಂದು ಸಂಜೆ 4ಕ್ಕೆ ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಪ್ರಶಸ್ತಿಯು ₹15 ಸಾವಿರ ನಗದು ಪುರಸ್ಕಾರ ಹೊಂದಿದೆ. 2015ರಲ್ಲಿ ಆರಂಭವಾದ ಪ್ರಶಸ್ತಿಯು, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ನಿಧಿ ನೀಡಿ, ಪರಿಷತ್ತಿನ ಮೂಲಕ ಕೊಡಮಾಡುವ ವ್ಯವಸ್ಥೆ ಡಾ.ಉಪ್ಪಂಗಳ ರಾಮ ಭಟ್ ಮಾಡಿದ್ದು, ಅವರ ಮರಣಾನಂತರ ಪತ್ನಿ ಶಂಕರಿ ಆರ್.ಭಟ್ ಮುಂದುವರಿಸಿದ್ದಾರೆ.</p>.<p>ಇಂದಿರಾ ಹಾಲಂಬಿ ಅವರು ‘ಗಿರಿವಾಸಿನಿ’ ಕಾವ್ಯನಾಮದಿಂದ ಗುರುತಿಸಿಕೊಂಡಿದ್ದಾರೆ. 40 ವರ್ಷ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಅವರು ಪ್ರಕಾಶನ, ಹಾಡು, ಕತೆ, ಲೇಖನ, ಮಕ್ಕಳ ಸಾಹಿತ್ಯ, ಚಿಂತನ, ನಾಟಕ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. 1980ರಲ್ಲಿ ಸಂದೀಪ ಸಾಹಿತ್ಯ ಹೆಸರಿನಲ್ಲಿ ಪುಸ್ತಕ ಪ್ರಕಟಣೆ ಆರಂಭಿಸಿದ್ದು, ಈ ತನಕ 138 ಕೃತಿಗಳನ್ನು ಪ್ರಕಟಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>