ಅಣೆಕಟ್ಟಿನಿಂದ ಅನೇಕ ರೈತರಿಗೆ ಉಪಯೋಗವಾಗಲಿದೆ. ಕಾರ್ಕಳ ಹಾಗೂ ಹೆಬ್ರಿ ತಾಲ್ಲೂಕಿಗೆ ಸುಮಾರು 257 ಕಿಂಡಿ ಅಣೆಕಟ್ಟುಗಳು ವರದಾನ ಆಗಿದೆ. ಅತ್ಯಂತ ಸಮರ್ಪಕವಾಗಿ ಕೆಲಸಗಳು ಮುಗಿದಿದ್ದು ಶೀಘ್ರದಲ್ಲಿ ಲೋಕಾರ್ಪಣೆಯಾಗಲಿದೆ. ಸುಮಾರು 800 ಹೆಕ್ಟೇರ್ ಪ್ರದೇಶಗಳಿಗೆ ಪ್ರಯೋಜನ ದೊರಕಲಿದೆ.
–ಸುನಿಲ್ ಕುಮಾರ್, ಶಾಸಕ
ಬಹಳ ಕಡಿಮೆ ಅವಧಿಯಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣವಾಗಿದೆ. ಸ್ಥಳೀಯವಾಗಿ ಅಂತರ್ಜಲ ವೃದ್ಧಿಗೆ ಬಾವಿಯಲ್ಲಿ ನೀರು ಹೆಚ್ಚಾಗಲು ಇದರಿಂದ ಸಹಾಯಕವಾಗಲಿದೆ. ಬಹುತೇಕ ಕೆಲಸ ಮುಗಿದಿದೆ. ಶೀಘ್ರದಲ್ಲಿ ಲೋಕಾರ್ಪಣೆಯಾಗಲಿದೆ.
–ಜೆ.ಎಂ.ರಾಥೋಡ್, ಎಇ ಸಣ್ಣ ನೀರಾವರಿ ಇಲಾಖೆ
ಕೇವಲ ಒಂದೇ ವರ್ಷದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟೆ ನಿರ್ಮಾಣವಾಗಿದೆ. ಎಲ್ಲರಿಗೂ ಉಪಯೋಗವಾಗಲಿದೆ. ಸಮರ್ಪಕ ರಸ್ತೆ ಕೊರತೆಯಿಂದ ಸುತ್ತು ಬಳಸಿ ಹೋಗಬೇಕಿತ್ತು. ರಸ್ತೆ ಉತ್ತಮವಾಗಿರದ ಕಾರಣ ಸಂಚಾರ ದುಸ್ತರವಾಗಿತ್ತು. ಸೇತುವೆ ಸಹಿತ ಕಿಂಡಿಆಣೆಕಟ್ಟಿನ ಲೋಕಾರ್ಪಣೆಗೆ ನಾವೆಲ್ಲ ಕಾಯುತ್ತಿದ್ದೇವೆ.