<p><strong>ಕೋಟ (ಬ್ರಹ್ಮಾವರ):</strong> ಮಕ್ಕಳನ್ನು ಸುಸಂಸ್ಕೃತರನ್ನಾಗಿಸುವುದರ ಜೊತೆಗೆ ಆರೋಗ್ಯವಂತರು, ಪರಿಸರ ಸ್ನೇಹಿಯಾಗಿ ಬೆಳೆಸಿ ಎಂದು ಹಿರಿಯ ವಿದ್ಯಾರ್ಥಿ ಸುಜಾತ ಬಾಯರಿ ಹೇಳಿದರು.</p>.<p>ಕೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದ ವಲ್ಲರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಕ್ಕಳನ್ನು ಜಂಕ್ಫುಡ್ಗಳಿಂದ ರಕ್ಷಿಸಿ. ಅವರ ಜನ್ಮದಿನವನ್ನು ಮನೆ ವಠಾರದಲ್ಲಿ ಗಿಡ ನೆಟ್ಟು ಬೆಳೆಸಿ ಆಚರಿಸಿ. ಮೊಬೈಲ್ ಗೀಳಿನಿಂದ ರಕ್ಷಿಸಿ ವಿದ್ಯಾರ್ಥಿ ಜೀವನವನ್ನು ಅರ್ಥಪೂರ್ಣವಾಗಿಸಲು ಪೋಷಕರು ವಿಶೇಷ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.</p>.<p>ಬಹುಮಾನ ವಿತರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕಿ ಪುಷ್ಪಲತಾ ಅವರನ್ನು ಗೌರವಿಸಲಾಯಿತು. ಶಾಲೆಯ ಹಸ್ತಪ್ರತಿ ‘ವಲ್ಲರಿ’ಯನ್ನು ನಿವೃತ್ತ ಪ್ರಾಂಶುಪಾಲ ರಾಘವೇಂದ್ರ ಭಟ್ ಬಿಡುಗಡೆಗೊಳಿಸಿದರು. ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ ಕುಂದರ್ ಬಾರಿಕೆರೆ ಅಧ್ಯಕ್ಷತೆ ವಹಿಸಿದ್ದರು.</p>.<p>ರಂಗಯ್ಯ ಅಡಿಗ, ಭಾರತಿ ಪೂಜಾರಿ, ಉದಯ ಗಾಣಿಗ, ವಿದ್ಯಾರ್ಥಿ ನಾಯಕರಾದ ನಿತೀಶ್, ಅನುಜ್ಞಾ ಭಾಗವಹಿಸಿದ್ದರು. ಗೌರವ ಶಿಕ್ಷಕಿಯರಾದ ಶಾರದಾ, ಸುಮಾ, ಶ್ರೀದೇವಿ, ಮಾನಸ ದತ್ತಿನಿಧಿ, ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಮುಖ್ಯಶಿಕ್ಷಕಿ ಪುಷ್ಪಾವತಿ ಹೊಳ್ಳ ವರದಿ ವಾಚಿಸಿದರು. ಎಸ್ಡಿಎಂಸಿ ಅಧ್ಯಕ್ಷೆ ಮಹಾಲಕ್ಷ್ಮೀ ಸೋಮಯಾಜಿ ಸ್ವಾಗತಿಸಿದರು. ಶಿಕ್ಷಕ ರೂಬಿ ಪಿಂಟೊ ನಿರೂಪಿಸಿದರು. ಶಿಕ್ಷಕಿ ವಿನಯಾ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಟ (ಬ್ರಹ್ಮಾವರ):</strong> ಮಕ್ಕಳನ್ನು ಸುಸಂಸ್ಕೃತರನ್ನಾಗಿಸುವುದರ ಜೊತೆಗೆ ಆರೋಗ್ಯವಂತರು, ಪರಿಸರ ಸ್ನೇಹಿಯಾಗಿ ಬೆಳೆಸಿ ಎಂದು ಹಿರಿಯ ವಿದ್ಯಾರ್ಥಿ ಸುಜಾತ ಬಾಯರಿ ಹೇಳಿದರು.</p>.<p>ಕೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದ ವಲ್ಲರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಕ್ಕಳನ್ನು ಜಂಕ್ಫುಡ್ಗಳಿಂದ ರಕ್ಷಿಸಿ. ಅವರ ಜನ್ಮದಿನವನ್ನು ಮನೆ ವಠಾರದಲ್ಲಿ ಗಿಡ ನೆಟ್ಟು ಬೆಳೆಸಿ ಆಚರಿಸಿ. ಮೊಬೈಲ್ ಗೀಳಿನಿಂದ ರಕ್ಷಿಸಿ ವಿದ್ಯಾರ್ಥಿ ಜೀವನವನ್ನು ಅರ್ಥಪೂರ್ಣವಾಗಿಸಲು ಪೋಷಕರು ವಿಶೇಷ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.</p>.<p>ಬಹುಮಾನ ವಿತರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕಿ ಪುಷ್ಪಲತಾ ಅವರನ್ನು ಗೌರವಿಸಲಾಯಿತು. ಶಾಲೆಯ ಹಸ್ತಪ್ರತಿ ‘ವಲ್ಲರಿ’ಯನ್ನು ನಿವೃತ್ತ ಪ್ರಾಂಶುಪಾಲ ರಾಘವೇಂದ್ರ ಭಟ್ ಬಿಡುಗಡೆಗೊಳಿಸಿದರು. ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ ಕುಂದರ್ ಬಾರಿಕೆರೆ ಅಧ್ಯಕ್ಷತೆ ವಹಿಸಿದ್ದರು.</p>.<p>ರಂಗಯ್ಯ ಅಡಿಗ, ಭಾರತಿ ಪೂಜಾರಿ, ಉದಯ ಗಾಣಿಗ, ವಿದ್ಯಾರ್ಥಿ ನಾಯಕರಾದ ನಿತೀಶ್, ಅನುಜ್ಞಾ ಭಾಗವಹಿಸಿದ್ದರು. ಗೌರವ ಶಿಕ್ಷಕಿಯರಾದ ಶಾರದಾ, ಸುಮಾ, ಶ್ರೀದೇವಿ, ಮಾನಸ ದತ್ತಿನಿಧಿ, ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಮುಖ್ಯಶಿಕ್ಷಕಿ ಪುಷ್ಪಾವತಿ ಹೊಳ್ಳ ವರದಿ ವಾಚಿಸಿದರು. ಎಸ್ಡಿಎಂಸಿ ಅಧ್ಯಕ್ಷೆ ಮಹಾಲಕ್ಷ್ಮೀ ಸೋಮಯಾಜಿ ಸ್ವಾಗತಿಸಿದರು. ಶಿಕ್ಷಕ ರೂಬಿ ಪಿಂಟೊ ನಿರೂಪಿಸಿದರು. ಶಿಕ್ಷಕಿ ವಿನಯಾ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>