ಹಿಂದೆ ಸಭಾಪತಿಯಾಗಿದ್ದ ಡಿ.ಎಚ್.ಶಂಕರಮೂರ್ತಿ ಅವರ ಮೇಲೆ ಕಾಂಗ್ರೆಸ್ ಅವಿಶ್ವಾಸ ಗೊತ್ತುವಳಿ ಮಂಡಿಸಿದಾಗ, ಪೀಠದಿಂದ ಕೆಳಗಿಳಿದು ಉಪಸಭಾಪತಿಯನ್ನು ಕೂರಿಸಿ ಅವಿಶ್ವಾಸ ಗೊತ್ತುವಳಿಗೆ ದಿನ ನಿಗದಿ ಮಾಡಿದ್ದರು. ಅವಿಶ್ವಾಸ ಗೆದ್ದು ಮತ್ತೆ ಸಭಾಪತಿ ಪೀಠ ಅಲಂಕರಿಸಿದ್ದರು. ಈಗಲೂ ಅದೇ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ, ಕಾಂಗ್ರೆಸ್ ಮುಖಂಡರು ಸಭಾಪತಿ ಸ್ಥಾನವನ್ನು ಕಾಂಗ್ರೆಸ್ಸೀಕರಣ ಮಾಡಿದ್ದು, ಸಭಾಪತಿಯ ಮೇಲೆ ಒತ್ತಡ ತಂದು, ಅವರ ಕೈಕಟ್ಟಿಹಾಕಿದ್ದಾರೆ ಎಂದು ಕೋಟ ಟೀಕಿಸಿದರು.